ಕಂಗನಾ ರನೌತ್  
ಬಾಲಿವುಡ್

ಇಂದಿರಾ ಗಾಂಧಿ ಪವರ್ ಫುಲ್ ಲೀಡರ್ ಎಂದು ಭಾವಿಸಿದ್ದೆ, ಆದರೆ 'ಎಮರ್ಜೆನ್ಸಿ' ನಂತರ ಆಕೆ ದುರ್ಬಲರು ಎಂದು ಗೊತ್ತಾಯ್ತು: ಕಂಗನಾ ರನೌತ್

'ಎಮರ್ಜೆನ್ಸಿ' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂಬ ಆರೋಪಗಳ ಕುರಿತು ತಿಂಗಳುಗಳ ಕಾಲ ವಿವಾದ ಏರ್ಪಟ್ಟ ನಂತರ ಇದೀಗ ಜನವರಿ 17 ರಂದು ಬಿಡುಗಡೆಯಾಗಲಿದೆ.

ಮುಂಬೈ: ತಮ್ಮ ಹೊಸ ಚಿತ್ರ "ಎಮರ್ಜೆನ್ಸಿ"ಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿರುವ ನಟಿ ಹಾಗೂ ಸಂಸದೆ ಕಂಗನಾ ರನೌತ್ ದೇಶದ ಮೊದಲ ಮಹಿಳಾ ಪ್ರಧಾನಿ ಬಗ್ಗೆ ಕುತೂಹಲಕರ ವಿಚಾರ ಹೇಳಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕಾಗಿ ತಾವು ಸಾಕಷ್ಟು ಸಂಶೋಧನೆ ಮಾಡಿದ್ದು, ಇಂದಿರಾ ಗಾಂಧಿಯವರು ಅಷ್ಟು ಪ್ರಬಲವಾಗಿರಲಿಲ್ಲ. ದುರ್ಬಲವಾಗಿದ್ದು, ತಮ್ಮ ಬಗ್ಗೆ ತಮಗೇ ಅವರಿಗೆ ಖಚಿತತೆ ಇರಲಿಲ್ಲ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಮೊದಲ ಬಾರಿಗೆ ಸಂಸದೆಯಾಗಿರುವ, ಆಗಾಗ್ಗೆ ತಮ್ಮ ಪ್ರಚೋದನಕಾರಿ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುವ ಕಂಗನಾ ರನೌತ್, ಇಂದು ನನಗೆ ನಿರ್ದೇಶನ ಮಾಡಲು ಅರ್ಹರಾದ ನಿರ್ದೇಶಕರು ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇಂದು ಚಲನಚಿತ್ರೋದ್ಯಮದಲ್ಲಿ ನಾನು ಕೆಲಸ ಮಾಡಲು ಬಯಸುವ ಒಬ್ಬ ನಿರ್ದೇಶಕರೂ ಇಲ್ಲ. ಅವರು ನನಗೆ ನಿರ್ದೇಶನ ಮಾಡಲು ಅರ್ಹರು ಎಂದು ನಾನು ಭಾವಿಸುವ ಗುಣಮಟ್ಟವನ್ನು ಹೊಂದಿಲ್ಲ ಎಂದು ರನೌತ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಹೇಳಿದರು.

1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ 21 ತಿಂಗಳ ತುರ್ತು ಪರಿಸ್ಥಿತಿಯನ್ನು ದಾಖಲಿಸುವ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿರುವ ರನೌತ್, ಇಂದಿರಾ ಗಾಂಧಿ ಬಗ್ಗೆ ನನಗೆ ಸಹಾನುಭೂತಿ ಇದೆ. ಈ ಪಾತ್ರದಲ್ಲಿ ನಟಿಸುವವರೆಗೂ ಇಂದಿರಾ ಗಾಂಧಿ ಅವರು ತುಂಬಾ ಶಕ್ತಿಶಾಲಿ ಎಂದು ಪರಿಗಣಿಸಿದ್ದೆ. ಆದರೆ ನಾನು ನನ್ನ ಸಂಶೋಧನೆ ಮಾಡಿದಾಗ, ಅದು ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ನನಗೆ ಅರ್ಥವಾಯಿತು. ನೀವು ದುರ್ಬಲರಾಗಿದ್ದಷ್ಟೂ, ನೀವು ಹೆಚ್ಚು ನಿಯಂತ್ರಣವನ್ನು ಬಯಸುತ್ತೀರಿ ಎಂಬ ನನ್ನ ನಂಬಿಕೆಯನ್ನು ಅದು ಬಲಪಡಿಸಿತು. ಇಂದಿರಾ ಗಾಂಧಿಯವಕು ತುಂಬಾ ದುರ್ಬಲ ವ್ಯಕ್ತಿ, ಅವರಿಗೆ ತಮ್ಮ ಬಗ್ಗೆ ಖಚಿತತೆ ಇರಲಿಲ್ಲ ಎಂದಿದ್ದಾರೆ.

ಇಂದಿರಾ ಗಾಂಧಿ ತಮ್ಮ ಸುತ್ತ ಊರುಗೋಲು ಹೊಂದಿದ್ದರು. ನಿರಂತರವಾಗಿ ಒಂದು ರೀತಿಯ ದೃಢೀಕರಣವನ್ನು ಬಯಸುತ್ತಿದ್ದರು, ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಿದ್ದರು, ಅವರಲ್ಲಿ ಒಬ್ಬರು ಸಂಜಯ್ ಗಾಂಧಿ, ಎಮರ್ಜೆನ್ಸಿ ಗೆ ಮೊದಲು ನನಗೆ ಅವರ ಬಗ್ಗೆ ಸಹಾನುಭೂತಿ ಇರಲಿಲ್ಲ, ಆದರೆ ಸಿನಿಮಾ ಮಾಡಿ ಮುಗಿಸಿದ ನಂತರ ನನ್ನ ಅಭಿಪ್ರಾಯ ಬದಲಾಗಿದೆ ಎಂದರು.

ಇಂದಿರಾ ಗಾಂಧಿಯವರ ಮೊಮ್ಮಗಳು, ಸಹ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಂಸತ್ತಿನಲ್ಲಿ ಭೇಟಿಯಾಗಿ ಚಿತ್ರದ ಬಗ್ಗೆ ಪ್ರಸ್ತಾಪಿಸಿದೆ. ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು ನನ್ನ ಕೆಲಸ ಮತ್ತು ನನ್ನ ಕೂದಲಿನ ಬಗ್ಗೆ ಶ್ಲಾಘಿಸಿದರು. ನಾನು ಎಮರ್ಜೆನ್ಸಿ ಎಂಬ ಚಿತ್ರ ಮಾಡಿದ್ದೇನೆ, ನೀವು ಅದನ್ನು ನೋಡಬೇಕು ಎಂದು ಹೇಳಿದೆ. ಅದಕ್ಕೆ ಅವರು ಬಹುಶಃ ನೋಡುತ್ತೇನೆ ಎಂದು ಹೇಳಿದರು ಎಂದು ಪ್ರಿಯಾಂಕಾ ಗಾಂಧಿ ಜೊತೆಗಿನ ಭೇಟಿ ಬಗ್ಗೆ ತಿಳಿಸಿದರು.

ಜನರನ್ನು, ಅವರ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿಲ್ಲ. ಚಿತ್ರವನ್ನು ಆ ಉದ್ದೇಶದಿಂದ ನಿರ್ಮಿಸಲಾಗಿಲ್ಲವಾದ್ದರಿಂದ, ಸೆನ್ಸಾರ್ ನಲ್ಲಿ ಕೆಲವೊಂದು ದೃಶ್ಯಗಳನ್ನು ಕತ್ತರಿಸಿದರೂ ಕೂಡ ಅದು ನನ್ನ ಕಥೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

'ಎಮರ್ಜೆನ್ಸಿ' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂಬ ಆರೋಪಗಳ ಕುರಿತು ತಿಂಗಳುಗಳ ಕಾಲ ವಿವಾದ ಏರ್ಪಟ್ಟ ನಂತರ ಇದೀಗ ಜನವರಿ 17 ರಂದು ಬಿಡುಗಡೆಯಾಗಲಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಸೆಪ್ಟೆಂಬರ್ 6, 2024 ರಂದು ಬಿಡುಗಡೆಯಾಗಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT