ಮತಿರಾ ಮೊಹಮ್ಮದ್-ಚಾಹತ್ ಫತೇಹ್ ಅಲಿ ಖಾನ್ 
ಬಾಲಿವುಡ್

ಹೌದು... ನಾನು ಬೋಲ್ಡ್ ಇರಬಹುದು, ಅದರರ್ಥ ಮುಟ್ಟಿ ಚಪಲ ತೀರಿಸಿಕೊಳ್ಳಿ ಅಂತಲ್ಲ: ಮೌನ ಮುರಿದ ಪಾಕ್ ಮಾಡೆಲ್, ವಿಡಿಯೋ ನೋಡಿ!

ಮತಿರಾ ಮೊಹಮ್ಮದ್ ಅವರನ್ನು ಚಾಹತ್ ಫತೇಹ್ ತಬ್ಬಿಕೊಂಡು ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವೇಳೆ ಮತಿರಾ ಆತನೊಂದಿಗೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೂ ಕಸಿವಿಸಿಗೊಂಡಂತೆ ಕಾಣುತ್ತಿದ್ದಳು.

ಮುಂಬೈ: ಪಾಕಿಸ್ತಾನಿ ಪ್ರಭಾವಿ ಮತಿರಾ ಮೊಹಮ್ಮದ್ ಸಂದರ್ಶನವೊಂದರಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು ಸಂಗೀತ ಸಂಯೋಜಕ, ಮಾಜಿ ಕ್ರಿಕೆಟಿಗ ಚಾಹತ್ ಫತೇಹ್ ಅಲಿ ಖಾನ್ ತಮ್ಮ ಟಾಕ್ ಶೋ 'ದಿ 21 ಎಂಎಂ ಶೋ' ನಲ್ಲಿ ಕಾಣಿಸಿಕೊಂಡಾಗ 'ಅನುಚಿತವಾಗಿ' ವರ್ತಿಸಿದ್ದು 'ಕಿರುಕುಳ' ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಮತಿರಾ ಮೊಹಮ್ಮದ್ ಅವರನ್ನು ಚಾಹತ್ ಫತೇಹ್ ತಬ್ಬಿಕೊಂಡು ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವೇಳೆ ಮತಿರಾ ಆತನೊಂದಿಗೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೂ ಕಸಿವಿಸಿಗೊಂಡಂತೆ ಕಾಣುತ್ತಿದ್ದಳು. ಈ ಘಟನೆಯ ಬಗ್ಗೆ ಮೌನ ಮುರಿದ ಮಥಿರಾ, ಚಾಹತ್ ಅವರನ್ನು ಟೀಕಿಸಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಚಾಹತ್ ಅವರ ಕಾರ್ಯದ ಬಗ್ಗೆ ಮತಿರಾ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ತಾನು ಯಾವಾಗಲೂ ತನ್ನ ಅತಿಥಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ. ಆದರೆ ಆ ವೀಡಿಯೊವನ್ನು ತನಗೆ ತಿಳಿಯದೆ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ತನ್ನ ಒಪ್ಪಿಗೆಯಿಲ್ಲದೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓರ್ವ ಮಹಿಳೆಯಾಗಿ ನನ್ನನ್ನು ಸಾರ್ವಜನಿಕವಾಗಿ ಯಾರಾದರೂ ಅಪ್ಪಿಕೊಂಡರೆ, ನನಗೆ ತುಂಬಾ ಕಸಿವಿಸಿಯಾಗುತ್ತದೆ. ನನ್ನ ಅನುಮತಿಯಿಲ್ಲದೆ ಅವರು ವಿಡಿಯೋ ಏಕೆ ಪೋಸ್ಟ್ ಮಾಡಿದರು? ನನಗೆ ಅರ್ಥವಾಗುತ್ತಿಲ್ಲ ಎಂದು ಮತಿರಾ ಹೇಳಿದ್ದಾರೆ.

ನನಗೆ ತುಂಬಾ ನಿರಾಶೆಯಾಗಿದೆ. ಹೌದು... ನಾನು ಬೋಲ್ಡ್ ವ್ಯಕ್ತಿತ್ವದ ಮಹಿಳೆ, ಆದರೆ ನೀವು ನನ್ನನ್ನು ನೋಡಿದ ತಕ್ಷಣ ನನ್ನನ್ನು ತಬ್ಬಿಕೊಳ್ಳಿ ಅಥವಾ ನನ್ನ ಬೆನ್ನಿನ ಮೇಲೆ ಕೈ ಹಾಕುತ್ತೀರಿ ಎಂದು ಅರ್ಥವಲ್ಲ. ಅಚಾನಕ್ ಆಗಿ ಜನರು ನನ್ನೊಂದಿಗೆ ಈ ರೀತಿ ವರ್ತಿಸಿದರೆ ಕಿರಿಕಿರಿ ಉಂಟುಮಾಡುತ್ತದೆ. ನಾನು ಹಾಗೆ ನಡೆದುಕೊಂಡರೆ ಜನರು ನನ್ನನ್ನು ಅಶ್ಲೀಲ ಎಂದು ಕರೆಯುತ್ತಾರೆ. ಯಾರಾದರೂ ನನ್ನನ್ನು ಮುಟ್ಟುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ, ಏಕೆಂದರೆ ಅದು ಸಾಮಾನ್ಯ ನಡವಳಿಕೆಯಲ್ಲ, ಮತ್ತು ನಾನು ಆಘಾತಕ್ಕೊಳಗಾಗಿದ್ದೆ. ಅಷ್ಟೇ ಅಲ್ಲದೆ ಅವರು, ವೀಡಿಯೊವನ್ನು ಪೋಸ್ಟ್ ಮಾಡುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ಅವರು ಪೋಸ್ಟ್ ಮಾಡಿದ್ದಾರೆ. ಇದರಿಂದ ನನಗೆ ಯಾವುದೇ ಭಾವನೆಗಳಿಲ್ಲ ಎಂದು ಜನರು ಭಾವಿಸುತ್ತಾರೆ. ಗಡಿಗಳನ್ನು ದಾಟುವುದು ಎಂದಿಗೂ ಸ್ವೀಕಾರಾರ್ಹವಲ್ಲ! ಅದು ನನಗೆ ತುಂಬಾ ಅಹಿತಕರ ಕ್ಷಣವಾಗಿತ್ತು, ಮತ್ತು ನಾನು ಅಲ್ಲಿಂದ ಹೊರಬರಲು ಬಯಸಿದ್ದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT