ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ 
ಬಾಲಿವುಡ್

ಗಲ್ಲಾಪೆಟ್ಟಿಗೆಯಲ್ಲಿ 'ಧುರಂಧರ್' ಅಬ್ಬರ; 'ಜವಾನ್', 'ಪಠಾಣ್', 'ಕೆಜಿಎಫ್: ಚಾಪ್ಟರ್ 2' ಹಿಂದಿಕ್ಕಿದ ರಣವೀರ್ ಸಿಂಗ್ ನಟನೆಯ ಚಿತ್ರ!

ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.

ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರವು ಇದೀಗ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹800 ಕೋಟಿ ಗಳಿಕೆ ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಜಿಯೋ ಸ್ಟುಡಿಯೋಸ್, 'ಧುರಂಧರ್ ದಿನಚರಿ: ಎದ್ದೇಳಿ. ದಾಖಲೆಗಳನ್ನು ಬರೆಯಿರಿ. ಪುನರಾವರ್ತಿಸಿ' ಎಂದು ಬರೆದಿದೆ. ಭಾರತದಲ್ಲಿ ₹806.80 ಕೋಟಿ ಗಳಿಸುವ ಮೂಲಕ ಈ ಚಿತ್ರವು ಹಿಂದಿ ಸಿನಿಮಾ ರಂಗದಲ್ಲಿ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ನಿರ್ಮಾಣ ಸಂಸ್ಥೆ ಭಾನುವಾರ ಘೋಷಿಸಿದೆ.

ಚಿತ್ರವು 1ನೇ ವಾರದಲ್ಲಿ ₹218 ಕೋಟಿ ಗಳಿಸಿತು. ನಂತರ 2ನೇ ವಾರದಲ್ಲಿ ₹261.5 ಕೋಟಿ ರೂ., 3ನೇ ವಾರದಲ್ಲಿ ₹189.3 ಕೋಟಿ ಮತ್ತು 4ನೇ ವಾರದಲ್ಲಿ ₹115.70 ಕೋಟಿ ಗಳಿಸಿತು. 29ನೇ ದಿನ, ಚಿತ್ರವು ₹9.70 ಕೋಟಿ ಗಳಿಸಿದರೆ, 30ನೇ ದಿನ ಇನ್ನೂ ₹12.60 ಕೋಟಿ ಗಳಿಸಿದೆ.

ಆದಾಗ್ಯೂ, ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರದ ದೇಶೀಯ ಕಲೆಕ್ಷನ್ ಇನ್ನೂ ₹759 ಕೋಟಿ ಆಗಿದೆ.

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 1240 ಕೋಟಿ ಗಳಿಸಿದೆ. ಭಾರತದಲ್ಲಿ ₹968 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ಇಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ. ಧುರಂಧರ್ ಈಗಾಗಲೇ ಶಾರುಖ್ ಖಾನ್ ಅವರ ಜವಾನ್ (₹1,163.62 ಕೋಟಿ), ಪಠಾಣ್ (₹1,069.85 ಕೋಟಿ) ಮತ್ತು ಯಶ್ ನಟನೆಯ ಕೆಜಿಎಫ್: ಅಧ್ಯಾಯ 2 (₹1,215 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದ್ದು, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಐದನೇ ಚಿತ್ರವಾಗಿದೆ.

ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ನಟನೆಯ ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ, ಹಾಲಿವುಡ್ ಚಿತ್ರ ಅವತಾರ್: ಫೈರ್ ಅಂಡ್ ಆಶ್ ಮತ್ತು ಅಗಸ್ತ್ಯ ನಂದ ಅವರ ಇಕ್ಕಿಸ್ ನಂತಹ ಹೊಸ ಚಿತ್ರಗಳ ಬಿಡುಗಡೆ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಧುರಂಧರ್ ಓಟ ಇನ್ನೂ ಮುಂದುವರೆದಿದೆ. ತು ಮೇರಿ ಮೈ ತೇರಾ ಮೈ ತೇರಾ ತು ಮೇರಿ ಬಿಡುಗಡೆಯಾದ 10 ದಿನಗಳಲ್ಲಿ ₹40 ಕೋಟಿ ಗಳಿಸಿದರೆ, ಜನವರಿ 1 ರಂದು ಬಿಡುಗಡೆಯಾದ ಇಕ್ಕಿಸ್ ಮೂರು ದಿನಗಳಲ್ಲಿ ₹13 ಕೋಟಿ ಗಳಿಸಿದೆ. ಅವತಾರ್: ಆಶ್ ಅಂಡ್ ಫೈರ್ ಬಿಡುಗಡೆಯಾದ 16 ದಿನಗಳಲ್ಲಿ ₹165.9 ಕೋಟಿ ಗಳಿಸಿದೆ.

ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video