ಕಂಗನಾ ರಣಾವತ್-ಎಆರ್ ರೆಹಮಾನ್ 
ಬಾಲಿವುಡ್

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!

ರೆಹಮಾನ್ ಹೇಳಿಕೆಯನ್ನು ಹಿಂದೂ ಸಂಘಟನೆಗಳು ಸಹ ತೀವ್ರವಾಗಿ ಖಂಡಿಸುತ್ತಿವೆ. ಬರಹಗಾರ ಜಾವೇದ್ ಅಖ್ತರ್, ಗಾಯಕರಾದ ಹರಿಹರನ್ ಮತ್ತು ಶಾನ್ ನಂತರ, ಕಂಗನಾ ರನೌತ್ ಈಗ ಈ ವಿಷಯಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಂಗೀತ ಉದ್ಯಮದ ಬದಲಾಗುತ್ತಿರುವ ಮುಖ ಮತ್ತು ಅದರೊಳಗಿನ ಧಾರ್ಮಿಕ ಪ್ರಭಾವಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರೋಧ್ಯಮದಲ್ಲಿ ಕೋಮುವಾದ ಹೆಚ್ಚಾಗಿದೆ ಎಂದು ರೆಹಮಾನ್ ಹೇಳಿದ್ದರು. ಅವರ ಹೇಳಿಕೆ ವಿರುದ್ಧ ಇದೀಗ ಉದ್ಯಮದ ಕಲಾವಿದರು ಸೇರಿದಂತೆ ಹಿಂದೂ ಸಂಘಟನೆಗಳು ಸಹ ತೀವ್ರವಾಗಿ ಖಂಡಿಸುತ್ತಿವೆ. ಬರಹಗಾರ ಜಾವೇದ್ ಅಖ್ತರ್, ಗಾಯಕರಾದ ಹರಿಹರನ್ ಮತ್ತು ಶಾನ್ ನಂತರ, ಕಂಗನಾ ರನೌತ್ ಈಗ ಈ ವಿಷಯಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ಕೋಮುವಾದದ ಬಗ್ಗೆ ರೆಹಮಾನ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ರಿಯ ರೆಹಮಾನ್ ಜಿ, ನಾನು ಕೇಸರಿ ಪಕ್ಷವನ್ನು ಬೆಂಬಲಿಸುವುದರಿಂದ ಚಿತ್ರರಂಗದಲ್ಲಿ ನಾನು ಬಹಳಷ್ಟು ತಾರತಮ್ಯ ಮತ್ತು ಪಕ್ಷಪಾತವನ್ನು ಎದುರಿಸುತ್ತಿದ್ದೇನೆ. ಆದರೆ ನಾನು ನಿಮ್ಮಂತಹ ಪೂರ್ವಾಗ್ರಹ ಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದು ನಟಿ ಇನ್ ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡರು.

ನನ್ನ ನಿರ್ದೇಶನದ 'ಎಮರ್ಜೆನ್ಸಿ' ಚಿತ್ರ ಕಥೆಯನ್ನು ನಾನು ನಿಮಗೆ ಹೇಳಲು ಬಯಸಿದ್ದೆ. ಕಥೆಯನ್ನು ಕೇಳುವುದನ್ನು ಮರೆತುಬಿಡಿ, ನೀವು ನನ್ನನ್ನು ಭೇಟಿಯಾಗಲು ನಿರಾಕರಿಸಿದ್ದೀರಿ. ನೀವು ಪ್ರಚಾರ ಚಿತ್ರದ ಭಾಗವಾಗಲು ಬಯಸುವುದಿಲ್ಲ ಎಂದು ನನಗೆ ಹೇಳಲಾಯಿತು. ವಿಪರ್ಯಾಸವೆಂದರೆ, ಎಲ್ಲಾ ವಿಮರ್ಶಕರು 'ಎಮರ್ಜೆನ್ಸಿ'ಯನ್ನು ಒಂದು ಮೇರುಕೃತಿ ಎಂದು ಕರೆದರು. ವಿರೋಧ ಪಕ್ಷದ ನಾಯಕರು ಸಹ ನನ್ನ ಚಿತ್ರವನ್ನು ಹೊಗಳುವ ಅಭಿಮಾನಿ ಪತ್ರಗಳನ್ನು ಕಳುಹಿಸಿದರು. ಆದರೆ ನೀವು ನಿಮ್ಮ ದ್ವೇಷದಿಂದ ಕುರುಡರಾಗಿದ್ದೀರಿ. ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ, ಸಂಗೀತ ಉದ್ಯಮವನ್ನು ಸೃಜನಶೀಲರಲ್ಲದ ವ್ಯಕ್ತಿಗಳು ಮುನ್ನಡೆಸುತ್ತಿದ್ದಾರೆ ಎಂದು ರೆಹಮಾನ್ ಹೇಳಿದ್ದರು. ಈ ವಿಷಯವು ಧರ್ಮಕ್ಕೆ ಸಂಬಂಧಿಸಿರಬಹುದು. ಆದರೆ ಯಾರೂ ಅದನ್ನು ಅವರ ಮುಖಕ್ಕೆ ನೇರವಾಗಿ ಹೇಳುವುದಿಲ್ಲ. ಈ ಪಿಸುಮಾತುಗಳು ಅವರ ಬೆನ್ನ ಹಿಂದೆಯೇ ಮುಂದುವರಿಯುತ್ತವೆ. ರೆಹಮಾನ್ ಹೇಳಿಕೆಯ ನಂತರ, ಬರಹಗಾರ ಜಾವೇದ್ ಅಖ್ತರ್, ಗಾಯಕರಾದ ಹರಿಹರನ್ ಮತ್ತು ಶಾನ್ ಕೂಡ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

U19 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; 4 ವಿಕೆಟ್‌ ಪಡೆದು ಮಿಂಚಿದ ವಿಹಾನ್

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಭಾರಿ ಅವ್ಯವಸ್ಥೆ: ಇಂಡಿಗೋಗೆ 22 ಕೋಟಿ ರೂ. ದಂಡ ವಿಧಿಸಿದ DGCA

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

ಯಾವುದೇ ದೇವಸ್ಥಾನ ಕೆಡವಿಲ್ಲ; ಕಾಶಿಗೆ ಕಳಂಕ ತರಲು ಕಾಂಗ್ರೆಸ್ ನಿಂದ AI ಬಳಕೆ: UP ಸಿಎಂ ಯೋಗಿ

SCROLL FOR NEXT