ದಿಲ್ಜಿತ್ ದೋಸಾಂಜ್ 
ಬಾಲಿವುಡ್

'ಸಟ್ಲುಜ್' OTTಯಿಂದಲೂ ಹೊರಕ್ಕೆ: ಇದೇ ಕಾರಣ? ನಟ ದಿಲ್ಜಿತ್ ದೋಸಾಂಜ್ ಮೊದಲ ಪ್ರತಿಕ್ರಿಯೆ...

ಆರಂಭದಲ್ಲಿ 'ಪಂಜಾಬ್ 95' ಎಂದು ಹೆಸರಿಡಲಾಗಿದ್ದ ಈ ಸಿನಿಮಾ ವರ್ಷಗಳ ಕಾಲ ವಿಳಂಬವಾಗಿ ಕಳೆದ ಶುಕ್ರವಾರ ZEE5 ನಲ್ಲಿ ಸಟ್ಲಜ್ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಯಿತು.

ದಿಲ್ಜಿತ್ ದೋಸಾಂಜ್ ನಟನೆಯ ಬಹುನಿರೀಕ್ಷಿತ ಸಟ್ಲುಜ್ ಚಿತ್ರ ZEE5 ನಲ್ಲಿ ಬಿಡುಗಡೆಯಾದ ಎರಡೇ ದಿನಕ್ಕೆ ಅದನ್ನು ತೆಗೆದುಹಾಕಲಾಗಿದೆ. ಸಿನಿಮಾದಲ್ಲಿ ಕೆಲವು ಭಾಗಗಳನ್ನು ಭಾರತ ವಿರೋಧಿ ಪಡೆಗಳು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಆರಂಭದಲ್ಲಿ 'ಪಂಜಾಬ್ 95' ಎಂದು ಹೆಸರಿಡಲಾಗಿದ್ದ ಈ ಸಿನಿಮಾ ವರ್ಷಗಳ ಕಾಲ ವಿಳಂಬವಾಗಿ ಕಳೆದ ಶುಕ್ರವಾರ ZEE5 ನಲ್ಲಿ ಸಟ್ಲಜ್ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಯಿತು. ಕೆಲ ದೃಶ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಅದನ್ನು OTT ಯಿಂದ ತೆಗೆದುಹಾಕಲಾಯಿತು ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಥಿಯೇಟರ್ ನಲ್ಲಿ ಬಿಡುಗಡೆಗೆ ಚಿತ್ರ ತಂಡ ಅರ್ಜಿ ಸಲ್ಲಿಸಿತ್ತು. ಆದರೆ ಪ್ರಸ್ತುತ ರೂಪದಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿನ ಕೆಲವು ಭಾಗಗಳ ಬಗ್ಗೆ ಕಳವಳವಿತ್ತು.ಅವುಗಳನ್ನು "ಭಾರತ ವಿರೋಧಿ ಪಡೆಗಳು ದುರುಪಯೋಗಪಡಿಸಿಕೊಳ್ಳಬಹುದು" ಎಂಬ ಕಾರಣಕ್ಕೆ ZEE5 ನಲ್ಲಿ ತೆಗೆದುಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

'ಸಟ್ಲುಜ್' ಪಂಜಾಬ್‌ನಲ್ಲಿ ಉಗ್ರಗಾಮಿತ್ವವು ಉತ್ತುಂಗದಲ್ಲಿದ್ದಾಗ ಕಾನೂನುಬಾಹಿರ ಹತ್ಯೆಗಳನ್ನು ಬಯಲಿಗೆಳೆಯಲು ಕಾರ್ಯಕರ್ತನೊಬ್ಬ ನಡೆಸಿದ ಹೋರಾಟವನ್ನು ಆಧರಿಸಿದೆ.

'ಸಟ್ಲುಜ್' OTTಯಿಂದ ತೆಗೆದುಹಾಕಿದ ಬಗ್ಗೆ ನಟ ದಿಲ್ಜಿತ್ ದೋಸಾಂಜ್, ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ cryptic ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ. ಶಹೀದ್ ಜಸ್ವಂತ್ ಸಿಂಗ್ ಖಲ್ರಾ ಅವರಿಗೂ ಇದೇ ರೀತಿ ಆಗಿತ್ತು. I Challenge the Darkness ಎಂದು ಬರೆದುಕೊಂಡಿದ್ದಾರೆ.

ಸಟ್ಲುಜ್ ಬಿಡುಗಡೆಯಾದಾಗಿನಿಂದ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ನಿಜಕ್ಕೂ ಅಗಾಧವಾಗಿದೆ. ಚಿತ್ರವನ್ನು ಚಂದಾದಾರರಾಗಲು, ವೀಕ್ಷಿಸಲು ಮತ್ತು ಬೆಂಬಲಿಸಲು ಆಯ್ಕೆ ಮಾಡಿದ ಪ್ರತಿಯೊಬ್ಬ ವೀಕ್ಷಕರಿಗೂ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಬಹಳ ಮಹತ್ವದ್ದಾಗಿದೆ" ಎಂದು ZEE5 ಹೇಳಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

61ನೇ ವಯಸ್ಸಿನಲ್ಲೂ ಏನು ಎನರ್ಜಿ! ಮಿಸ್ಟರ್ ಅಂಡ್ ಮಿಸೆಸ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಆಮೀರ್ ಖಾನ್, ಗೌರಿ ಸ್ಪ್ರಾಟ್! Video