ಅನುಷ್ಕಾ ಶರ್ಮಾ ಮತ್ತು ಆಕೆಯ ಪೋಸ್ಟ್ 
ಬಾಲಿವುಡ್

'ಹೋಮಿಯೋಪತಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ': ನಟಿ ಅನುಷ್ಕಾ ಶರ್ಮಾ ವಿರುದ್ಧ ಮುಗಿಬಿದ್ದ ಇಂಟರ್ನೆಟ್ ಬಳಕೆದಾರರು!

ಈ ಪೋಸ್ಟ್ ನಂತರ, ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, ಕೆಲವರು ನಟಿಯನ್ನು ಟೀಕಿಸಿದರೆ, ಇತರರು ಅವರ ಅಭಿಪ್ರಾಯಗಳಿಗೆ ಬೆಂಬಲ ಸೂಚಿಸಿದ್ದಾರೆ.

ಬಾಲಿವುಡ್ ನಟಿ ಮತ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಹೋಮಿಯೋಪತಿ ವೈದ್ಯರ ವಿಡಿಯೋವೊಂದನ್ನು ಹಂಚಿಕೊಂಡು, ಹೋಮಿಯೋಪತಿ ಪದ್ಧತಿಗೆ ಬೆಂಬಲ ವ್ಯಕ್ತಪಡಿಸಿದ ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಡಾ. ರಾಜನ್ ಶಂಕರನ್ ಮತ್ತು ನಮಿತಾ ಥಾಪರ್ ಅವರ ನಡುವಿನ ಸಂಭಾಷಣೆಯ ಕ್ಲಿಪ್ ಅನ್ನು ಹಂಚಿಕೊಂಡ ಅನುಷ್ಕಾ, 'ಹೋಮಿಯೋಪತಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಡಾ. ರಾಜನ್ ಶಂಕರನ್ ಆ ಪ್ರಯಾಣದ ಪ್ರಮುಖ ಭಾಗವಾಗಿದ್ದಾರೆ. ಆರೋಗ್ಯ ಮತ್ತು ಚಿಂತನಶೀಲ ಜೀವನದ ಕುರಿತು ಅವರ ಒಳನೋಟಗಳನ್ನು ನಾನು ತುಂಬಾ ಗೌರವಿಸುತ್ತೇನೆ' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ನಂತರ, ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, ಕೆಲವರು ನಟಿಯನ್ನು ಟೀಕಿಸಿದರೆ, ಇತರರು ಅವರ ಅಭಿಪ್ರಾಯಗಳಿಗೆ ಬೆಂಬಲ ಸೂಚಿಸಿದ್ದಾರೆ.

ಅನುಷ್ಕಾ ಅವರ ನಿಲುವನ್ನು ಟೀಕಿಸುತ್ತಾ ಬಳಕೆದಾರರೊಬ್ಬರು, 'ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಭಾರತೀಯರಿಗೆ ಹೋಮಿಯೋಪತಿಯನ್ನು ಶಿಫಾರಸು ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ಬೆಂಬಲಿತವಲ್ಲದ ಚಿಕಿತ್ಸೆಯನ್ನು ಉತ್ತೇಜಿಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಅವೈಜ್ಞಾನಿಕ ಆರೋಗ್ಯ ಹಕ್ಕುಗಳನ್ನು ನೀಡುವ ಅನೇಕ ಸ್ವಘೋಷಿತ ಬಾಬಾಗಳು ಇದ್ದಾರೆ. ಅವರು ಒಂದು ದಿನ ಜನರಿಗೆ, 'ನಿಮ್ಮ ಎಲ್ಲ ಕಾಯಿಲೆಗಳನ್ನು ಗುಣಪಡಿಸಲು ಪ್ರೇಮಾನಂದ ಮಹಾರಾಜರನ್ನು ಭೇಟಿ ಮಾಡಿ' ಎಂದೂ ಸಹ ಹೇಳಬಹುದು' ಎಂದು ಬರೆದಿದ್ದಾರೆ.

ಮತ್ತೋರ್ವ ಬಳಕೆದಾರರು, 'ಹೋಮಿಯೋಪತಿ ಅವೈಜ್ಞಾನಿಕ ವಂಚನೆಯೇ? ಸಹೋದರ, ನೀವು ಸರಿಯಾಗಿದ್ದೀರಾ? ಮಾನಸಿಕ ಚಿಕಿತ್ಸೆ ಬೇಕೇ? ಹೋಮಿಯೋಪತಿ ಕೆಲವೊಮ್ಮೆ ಅಲೋಪತಿಯೂ ಸಹ ಗುಣಪಡಿಸಲು ಸಾಧ್ಯವಾಗದ ಕಾಯಿಲೆಗಳನ್ನು ಗುಣಪಡಿಸುತ್ತದೆ' ಎಂದು ಅನುಷ್ಕಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಅವರ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ ಆಯ್ಕೆಯ ವಿಷಯ ಎಂದಿದ್ದಾರೆ. 'ಎಲ್ಲರೂ ಈ ವೈದ್ಯರನ್ನು ಅಥವಾ ಆ ಬಾಬಾರನ್ನು ಭೇಟಿ ಮಾಡಬೇಕು ಎಂದು ಸೂಚಿಸಿ ಅವರು ಪೋಸ್ಟ್ ಮಾಡಿಲ್ಲ. ಅವರು ತಮ್ಮ ಅನುಭವ ಹೇಳಿದ್ದಾರೆ ಅಷ್ಟೇ' ಎಂದು ತಿಳಿಸಿದ್ದಾರೆ.

ಈಮಧ್ಯೆ, ಒಬ್ಬ ಬಳಕೆದಾರರು ಅನುಷ್ಕಾ ಶರ್ಮಾ ಅವರ 'ಅಭಿಮಾನಿಯಾಗಿ ನಿವೃತ್ತಿ ಹೊಂದುತ್ತಿದ್ದೇನೆ. 60 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅನುಷ್ಕಾ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ ಮತ್ತು ನೀವು ನಿಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೋಮಿಯೋಪತಿಯನ್ನು ಪ್ರಚಾರ ಮಾಡುತ್ತೀರಿ?? ಸರಿಯಾದ ಔಷಧಿಯನ್ನು ನಿರಾಕರಿಸಿ ನಂಬಿಕೆಯ ಹೆಸರಿನಲ್ಲಿ ಈ ವಸ್ತುಗಳನ್ನು ಬಳಸಿ ಸತ್ತ ಅನೇಕ ಜನರನ್ನು ನಾನು ನೋಡಿದ್ದೇನೆ ಮತ್ತು ನೀವು ಅದನ್ನು ಭಯಂಕರವಾಗಿ ಪ್ರಚಾರ ಮಾಡುತ್ತೀರಿ?? ಆ ವಂಚನೆ ಬಾಬಾ ನಿಮಗೆ ಹೇಳುತ್ತಿರುವುದು ಇದನ್ನೇನಾ?? ಓ ದೇವರೇ!' ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು, 'ಅನುಷ್ಕಾ ಶರ್ಮಾಗೆ ಇದ್ದಕ್ಕಿದ್ದಂತೆ ಏನಾಗಿದೆ? ಎಲ್ಲವನ್ನು ಬಿಟ್ಟು ಹೋಮಿಯೋಪತಿಯನ್ನು ಏಕೆ ಪ್ರಚಾರ ಮಾಡುತ್ತಿದ್ದಾರೆ? ವಂಚನೆ ಬಾಬಾಗಳನ್ನು ಪ್ರಚಾರ ಮಾಡುವುದು ಸಾಕಾಗಲಿಲ್ಲ ಎಂಬಂತೆ, ಈಗ ಅವರು ವಂಚನೆ ಔಷಧವನ್ನು ಪ್ರಚಾರ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.

ಕೆಲವು ಬಳಕೆದಾರರು ಸೆಲೆಬ್ರಿಟಿಗಳ ಪ್ರಭಾವದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ಕಾಮೆಂಟ್‌ನಲ್ಲಿ, 'ಅನುಷ್ಕಾ ಅವರ ಸ್ಟೋರಿಯನ್ನು ನೋಡಿದೆ. ಇದು ರಕ್ತ ಕುದಿಯುವ ವಿಷಯ. ಇಷ್ಟೊಂದು ದೊಡ್ಡ ಸಂಖ್ಯೆಯ ಅನುಯಾಯಿಗಳು ಇದ್ದರೂ ಅವರ ಪುಟದಲ್ಲಿ ಹೋಮಿಯೋಪತಿಯನ್ನು ಪ್ರಚಾರ ಮಾಡುತ್ತಾರೆ. ಅವರು ಹೋಮಿಯೋಪತಿ/ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಏಕೆ ಹೋಗಬಾರದು? ಏನೂ ಮಾಡಲಾಗದ ಸ್ಥಿತಿಯಲ್ಲಿ ಜನರು ಅನೇಕ ರೋಗಗಳ ಕೊನೆಯ ಹಂತಗಳಲ್ಲಿ ಬರಲು ಇದೇ ಕಾರಣ' ಎಂದು ಬರೆಯಲಾಗಿದೆ.

ಆದಾಗ್ಯೂ, ಕೆಲವರು ಹೋಮಿಯೋಪತಿಯ ಪರವಾಗಿ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಹಾಗಾದರೆ??? ನನ್ನ ಪೋಷಕರು ಇಬ್ಬರೂ ಅಲೋಪತಿ ವೈದ್ಯರು. ಆದರೆ, ನಾನು 2 ವರ್ಷಗಳಿಗೂ ಹೆಚ್ಚು ಕಾಲ ಆಧುನಿಕ ಔಷಧವನ್ನು ಪ್ರಯತ್ನಿಸಿದ ನಂತರ ಯಾವುದೇ ಫಲಿತಾಂಶಗಳಿಲ್ಲದೆ ದೀರ್ಘಕಾಲದ ಚರ್ಮದ ಸಮಸ್ಯೆಗೆ ಹೋಮಿಯೋಪತಿಯನ್ನು ಪಡೆದಿದ್ದೇನೆ. ಇದು ಕೇವಲ 2.5 ತಿಂಗಳು ಮತ್ತು ನಾನು ಈಗಾಗಲೇ ವ್ಯತ್ಯಾಸವನ್ನು ನೋಡುತ್ತಿದ್ದೇನೆ' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DK Shivakumar and cabinet swearing-in LIVE updates | ಲೋಕಭವನಕ್ಕೆ ಡಿಕೆಶಿ, ಖರ್ಗೆ, ರಾಹುಲ್ ಆಗಮನ; ಕೇರಳ, ತೆಲಂಗಾಣ ಸಿಎಂ ಸೇರಿ ಗಣ್ಯರು ಭಾಗಿ

ನೂತನ ಸಿಎಂ ಆಗಿ DK Shivakumar ಪ್ರಮಾಣ ವಚನ: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ UT Khader ರಾಜೀನಾಮೆ

ದೆಹಲಿಗೆ US ಟ್ರೇಡ್ ಟೀಮ್; ಒಂದು ಕಡೆ ಮೈತ್ರಿ ಮಾತು; ಮತ್ತೊಂದೆಡೆ ಹೊಸ ಸುಂಕಗಳ ಬೆದರಿಕೆ! ಭಾರತದ ಮೇಲೆ Forced Labour ಅಸ್ತ್ರ!

ಡಿಕೆ ಶಿವಕುಮಾರ್ ಪ್ರಮಾಣವಚನ: 13 ಶಾಸಕರಿಗೆ ಮಂತ್ರಿ ಸ್ಥಾನ, ಯಾರಿಗೆಲ್ಲಾ ಸಚಿವಗಿರಿ? ಇಲ್ಲಿದೆ ಪಟ್ಟಿ

ಫಿಟ್ನೆಸ್ ಪರೀಕ್ಷೆ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಗೆ ಬೆಂಗಳೂರಿಗೆ ಬರಲು BCCI ಸೂಚನೆ; ಒಬ್ಬರು ಮಾತ್ರ ಹಾಜರು: ವರದಿ

SCROLL FOR NEXT