'ಖುಷಿ ಖುಷಿಯಾಗಿ' ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಹೊಸವರ್ಷಕ್ಕೆ ಸೆಣಸಲಿರುವ ಉಪ್ಪಿ ಮತ್ತು ಗಣೇಶ್

ಗಣೇಶ್ ಅವರ 'ಖುಷಿ ಖುಷಿಯಾಗಿ'

ಬೆಂಗಳೂರು: ಗಣೇಶ್ ಅವರ 'ಖುಷಿ ಖುಷಿಯಾಗಿ' ಹಾಗೂ ಉಪೇಂದ್ರ ಅವರ 'ಶಿವಂ' ೨೦೧೫ ಜನವರಿ 1 ಕ್ಕೆ ಬಿಡುಗಡೆಯಾಗಲಿವೆ. ದುನಿಯಾ ವಿಜಯ್ ಅಭಿನಯದ 'ಜಾಕ್ಸನ್' ಬಿಡುಗಡೆ ಜನವರಿ ೧೫ ಕ್ಕೆ ತಳ್ಳಲ್ಪಟ್ಟಿದ್ದು, ಹೊಸ ವರ್ಷದ ಗಲ್ಲಾ ಪೆಟ್ಟಿಗೆಯ ಕಿರೀಟಕ್ಕೆ ಈ ಎರಡು ಸಿನೆಮಾಗಳು ಸೆಣಸಲಿವೆ. "ಜಾಕ್ಸನ್ ಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಪ್ರಚಾರಕ್ಕೆ ಸ್ವಲ್ಪ ಸಮಯ ಬೇಕಾಗಿದೆ. ಅಲ್ಲದೆ ಹೊಸವರ್ಷಕ್ಕೆ ಈಗಾಗಲೇ ತೀವ್ರ ಪೈಪೋಟಿಯಿದೆ. 'ಖುಷಿ ಖುಷಿಯಾಗಿ' ಕರ್ನಾಟಕದ ಸುಮಾರು ೪೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಶಿವಂ ಕೂಡ ಬಿಡುಗಡೆಯಾಗುತ್ತಿದೆ. ಆ ಸಮಯಕ್ಕೆ ಯಶ್ ಅವರ ಮಿ&ಮಿಸೆಸ್ ರಾಮಾಚಾರಿ ಕೂಡ ಓಡುತ್ತಿರುತ್ತದೆ. ಆದುದರಿಂದ ನಮ್ಮ ಸಿನೆಮಾ ಬಿಡುಗಡೆಯನ್ನು ಮುಂದೂಡಿದ್ದೇವೆ" ಎನ್ನುತ್ತಾರೆ ಜಾಕ್ಸನ್ ಚಲನಚಿತ್ರದ ನಿರ್ದೇಶಕ ಸನತ್ ಕುಮಾರ್ ಡಿ.

ಜನವರಿ ೨೦೧೫ ಕ್ಕೆ ಸುಮಾರು ಒಂದು ಡಜನ್ ಸಿನೆಮಾಗಳು ಬಿಡುಗಡೆಗೆ ಕಾದಿವೆ. ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ, ಪೂಜಾ ಗಾಂಧಿ ಅವರ ಅಭಿನೇತ್ರಿ, ಎ ಪಿ ಅರ್ಜುನ್ ಅವರ ರಾಟೆ, ಸಿನೆಮಾ ಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಸಿಗರೇಟ್, ಪೈಪೋಟಿ, ನಮಕ್ ಹರಾಮ್ ಕೂಡ ಸರದಿಯಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT