ನಾಯಕಿ ಚಾರ್ಮಿ 
ಸಿನಿಮಾ ಸುದ್ದಿ

ಪೂರಿ (ತಲೆ) ತಿಂದ ಚಾರ್ಮಿ

ಲವಕುಶ ಚಿತ್ರದಲ್ಲಿ ಉಪೇಂದ್ರ ಆ್ಯಪಲ್ ಕೊಡೆ ಆ್ಯಪಲ್ ಕೊಡೆ...

ಲವಕುಶ ಚಿತ್ರದಲ್ಲಿ ಉಪೇಂದ್ರ ಆ್ಯಪಲ್ ಕೊಡೆ ಆ್ಯಪಲ್ ಕೊಡೆ ಅಂತ ಹಾಡ್ತಾ...ನಾಯಕಿ ಚಾರ್ಮಿಯನ್ನು ಕಿಚಾಯಿಸುತ್ತಿದ್ದರೆ, ಪ್ರೇಕ್ಷಕರು ಅದನ್ನು ಡಬಲ್ ಮೀನಿಂಗ್ ಸಾಂಗ್ ಎಂಬಂತೆ ನೋಡಿದ್ದರು. ಕಾರಣ ಚಾರ್ಮಿಯ ಅಂಗಸೌಷ್ಟವ. ಆದರೆ ಅತಿ ಆದರೆ ಆ್ಯಪಲ್ಲೂ ಡಾಕ್ಟರ್ರನ್ನ ಹತ್ರ ಕರೆಸಿಕೊಳ್ಳುತ್ತೆ.

ಚಾರ್ಮಿ ಚಾರ್ಮ್ ಕಳ್ಕೊಂಡ್ಳು. ಸಣ್ಣ ಆಗೋಕೆ ಟ್ರೈ ಮಾಡಿದ್ಳು. ಯಾವುದೂ ಬರಕತ್ತಾಗಲಿಲ್ಲ. ಕೊನೆಗೆ ಐಟಂಸಾಂಗಿಗೆ ಸೀಮಿತಳಾಗಿ ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ಒಂದೊಂದು ಹಾಡಲ್ಲಿ ಕುಣಿದು ಹೋದಳು.

ಯಾರೇ ಕೂಗಾಡಲಿ ಚಿತ್ರದ ರೆಡಿ ಒನ್ ಟೂ ತ್ರೀ ಸಾಂಗ್ ನೆನಪಿದೆಯಲ್ಲ. ಆ ಥರದ ಡ್ಯಾನ್ಸಿನ ಫಲವೋ ಎಂಬಂತೆ ಚಾರ್ಮಿಗೆ ಈಗ ಐಟಂ ಡ್ಯಾನ್ಸರ್ ಒಬ್ಬಳ ಜೀವನಗಾಥೆಯ ಕುರಿತ ಚಿತ್ರಕ್ಕೆ ಹೀರೋಯಿನ್ ಆಗುವ ಅವಕಾಶ ಸಿಕ್ಕಿದೆ. ಚಿತ್ರದ ಹೆಸರು ಜ್ಯೋತಿಲಕ್ಷ್ಮಿ. ಹಾಗಂತ ಇದು ಮಾಮೂಲಿ ಚಿತ್ರವಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರವಿದು.

ಚಾರ್ಮಿ ಈ ಪಾತ್ರಕ್ಕಾಗಿ ಯಾವ ಪರಿ ತಯಾರಿ ನಡೆಸಿದ್ದಾಳೆಂದರೆ ಪೂರಿಯ ಬೆನ್ನು ಬಿದ್ದು ಚಿತ್ರದ ಬಗ್ಗೆ ಡಿಸ್ಕಷನ್ನು ಮಾಡ್ತಿದ್ದಾಳೆ. ಪೂರಿ ಇನ್ನೂ ತನ್ನ ಕೇವ್ ಚಿತ್ರದ ಚಿತ್ರೀಕರಣವನ್ನೇ ಮುಗಿಸಿಲ್ಲ. ಆತ ಕಾಜಲ್ ಅಗರ್‌ವಾಲ್‌ಳೊಂದಿಗೆ ಗೋವಾದಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ಚಾರ್ಮಿ ಅಲ್ಲಿಗೂ ಹೋಗಿ ಡಿಸ್ಕಷನ್ ಶುರುಮಾಡಿದ್ದಾಳೆ. ಈಕೆಯ ಇನ್ವಾಲ್ವ್‌ಮೆಂಟ್ ನೋಡಿ ಪೂರಿ ಇಂಪ್ರೆಸ್ ಆಗ್ತಾನೋ, ಇರ್ರಿಟೇಟ್ ಆಗಿ ರೀಪ್ಲೇಸ್ ಮಾಡ್ತಾನೋ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT