ಚಿತ್ರ ನಟ ಸುದೀಪ್ 
ಸಿನಿಮಾ ಸುದ್ದಿ

ಬ್ಯಾಟ್ ಬೀಸಲಿದ್ದಾರೆಯೇ ಸುದೀಪ್?

ನವೆಂಬರ್ ೨೧ ರಿಂದ ೨೩ ರವೆರೆಗೆ ನಡೆಯಲಿರುವ ಡಾ. ರಾಜ್ ಕಪ್ ನ ನಾಲ್ಕನೇ ಆವೃತ್ತಿಯಲ್ಲಿ ಸುದೀಪ್...

ಬೆಂಗಳೂರು: ನವೆಂಬರ್ ೨೧ ರಿಂದ ೨೩ ರವೆರೆಗೆ ನಡೆಯಲಿರುವ ಡಾ. ರಾಜ್ ಕಪ್ ನ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಸರಣಿಯಲ್ಲಿ ಸುದೀಪ್ ಭಾಗವಹಿಸುವಂತೆ ಮನವಿ ಮಾಡಲು ೧೨ ಜನರ ನಿರ್ಮಾಪಕರ ತಂಡವೊಂದು ಚೆನ್ನೈಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. 'ರನ್ನ' ಚಲನಚಿತ್ರಕ್ಕೆ ಚಿತ್ರೀಕರಣ ಮುಗಿಸಿರುವ ಸುದೀಪ್, ಈಗ ಚೆನ್ನೈನಲ್ಲಿ 'ವಿಜಯ್ ೫೮' ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವಾರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಈ ಕ್ರಿಕೆಟ್ ಸರಣಿಯ ಆಯೋಜಕರು.

ಈ ಸರಣಿಯ ಅಂತಿಮ ಪಂದ್ಯ ಡಿಸೆಂಬರ್ ೭ ರಂದು ಮಲೇಶಿಯಾದಲ್ಲಿ ನಡೆಯಲಿದೆ. ಈಗಾಗಲೇ ೭ ತಂಡಗಳು ಅಂತಿಮಗೊಂಡಿದ್ದು, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್ ಮತ್ತು ಶ್ರೀನಗರ ಕಿಟ್ಟಿ ತಮ್ಮ ತಂಡಗಳ ನಾಯಕರು. ಸುದೀಪ್ ಅವರು ತಮ್ಮ ನಿಗದಿತ ಕಾರ್ಯದಿಂದ ಬಿಡುವು ಮಾಡಿಕೊಂಡು ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಮನವೊಲಿಸುವ ನಿಟ್ಟಿನಲ್ಲಿ ನಿರ್ಮಾಪಕರ ತಂದ ಚೆನ್ನೈಗೆ ತೆರಳಿದೆ. ಸುದೀಪ್ ಅವರು ಕ್ರಿಕೆಟ್ ಮೈದಾನದ ಕ್ರೀಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಷ್ಟೇ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಮಾಲೀಕರು-ಬಾಡಿಗೆದಾರರ ನಡುವೆ ಘರ್ಷಣೆ ಹೆಚ್ಚಳ: ಬಾಡಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು!

ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಆಘಾತ: ಸ್ಟಾರ್ ಬೌಲರ್‌ಗೆ ಗಾಯ; ವೀಲ್‌ಚೇರ್‌ನಲ್ಲಿ ಸ್ಥಳಾಂತರ, Video!

ಜುಬೀನ್ ಗರ್ಗ್ ಸಾವಿನ ಪ್ರಕರಣ: ಸಂಗೀತಗಾರ ಶೇಖರ್ ಜ್ಯೋತಿ ಗೋಸ್ವಾಮಿ ಬಂಧಿಸಿದ SIT

Wipro ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ: ಸಿಎಂ ಸಿದ್ದರಾಮಯ್ಯ ಮನವಿ ತಿರಸ್ಕರಿಸಿದ Azim Premji

SCROLL FOR NEXT