ಉತ್ತಮ ವಿಲನ್ ಚಿತ್ರದಲ್ಲಿ ಕಮಲ ಹಾಸನ್ 
ಸಿನಿಮಾ ಸುದ್ದಿ

'ಉತ್ತಮ ವಿಲನ್' ನಿಷೇಧಕ್ಕೆ ವಿ ಎಚ್ ಪಿ ಕರೆ

ನಟ ನಿರ್ದೇಶಕ ಕಮಲಹಾಸನ್ ನಟನೆಯ 'ಉತ್ತಮ ವಿಲನ್' ಚಲನಚಿತ್ರ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ದೂರಿ ಚಲನಚಿತ್ರವನ್ನು

ಚೆನ್ನೈ: ನಟ ನಿರ್ದೇಶಕ ಕಮಲ ಹಾಸನ್ ನಟನೆಯ 'ಉತ್ತಮ ವಿಲನ್' ಚಲನಚಿತ್ರ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ದೂರಿ ಚಲನಚಿತ್ರವನ್ನು ನಿಷೇಧಿಸುವಂತೆ ಹಿಂದು ಸಂಘಟನೆ ವಿಶ್ವ ಹಿಂದು ಪರಿಷತ್ ನ ಸದಸ್ಯರು ಕರೆ ಕೊಟ್ಟಿದ್ದಾರೆ.

ಸೋಮವಾರ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿರುವ ಹೇಳಿಕೆಯಲ್ಲಿ ಚಲನಚಿತ್ರದ ಹಾಡೊಂದಾದ "ಇರಾನಿಯನ್ ನಾಡಗಮ್" ನಲ್ಲಿ ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪ್ರತಿನಿಧಿಸಿರುವುದು ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿದ್ದಾರೆ.

"ಈ ಹಾಡಿನ ಸಾಹಿತ್ಯ ವಿಷ್ಣು ಭಕ್ತರಿಗೆ ನೋವುಂಟು ಮಾಡುತ್ತದೆ. ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪರಿಗಣಿಸುತ್ತದೆ. ಆದುದರಿಂದ ಚಲನಚಿತ್ರವನ್ನಿ ನಿಷೇಧಿಸಬೇಕೆಂದು" ವಿ ಎಚ್ ಪಿ ಸದಸ್ಯ ಕೆ ಎಲ್ ಸತ್ಯಮೂರ್ತಿ ಆಗ್ರಹಿಸಿದ್ದಾರೆ.

ಕನ್ನಡಿಗ ರಮೇಶ್ ಅರವಿಂದ ನಿರ್ದೇಶನದ ಈ ಚಲನಚಿತ್ರ ೮ನೆ ಶತಮಾನದ ರಂಗಭೂಮಿ ನಟ ಮತ್ತು ಆಧುನಿಕ ಯುಗದ ಸೂಪರ್ಸ್ಟಾರ್ ಬಗೆಗಿನ ಕಥೆ ಉಳ್ಳದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT