ಪ್ರಿಯಾಮಣಿ 
ಸಿನಿಮಾ ಸುದ್ದಿ

'ಶಿವಂ' ತಪ್ಪುಗಳಿಂದ ಕಲಿತ ರಾಜು

ತಮ್ಮ ಕಳೆದ ಸಿನೆಮ 'ಶಿವಂ' ಅತಿ ಪ್ರಚಾರದ ಹೊರತಾಗಿಯೂ ನೆಲ ಕಚ್ಚಿದ ನಂತರ ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ನಿರ್ದೇಶಕ ಶ್ರೀನಿವಾಸ ರಾಜು

ಬೆಂಗಳೂರು: ತಮ್ಮ ಕಳೆದ ಸಿನೆಮ 'ಶಿವಂ' ಅತಿ ಪ್ರಚಾರದ ಹೊರತಾಗಿಯೂ ನೆಲ ಕಚ್ಚಿದ ನಂತರ ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ನಿರ್ದೇಶಕ ಶ್ರೀನಿವಾಸ ರಾಜು, ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಪ್ಪು ಮಾಡುವದು ಮನುಷ್ಯನ ಸಹಜ ಗುಣ, ಅದರಿಂದ ಕಲಿಯುವುದ ದೈವತ್ವ ಗುಣ ಎನ್ನುವ ನಿರ್ದೇಶಕ ಇನ್ನೂ ಹೆಸರಿಡದ ಹಾರರ್-ಹಾಸ್ಯಚಿತ್ರಕ್ಕೆ ತಾವು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದಾರೆ.

ಮೊದಲನೆಯೆ ಪಾಠದ ಪ್ರಕಾರ ವರ್ಷಾನುಗಟ್ಟಲೆ ಯಾವುದೇ ಯೋಜನೆಗೆ ಅಂಟಿ ಕೂರಬಾರದೆಂಬುದು. ಈ ತಪ್ಪು ತಿದ್ದುಕೊಂಡಿರುವ ರಾಜು, ಪ್ರಿಯಾಮಣಿ ಮತ್ತು ಕೋಮಲ್ ನಟನೆಯ ಈ ಚಿತ್ರದ ಹಾಡುಗಳನ್ನೂ ಒಳಗೊಂಡಂತೆ ಚಿತ್ರೀಕರಣವನ್ನು ೨೭ ದಿನಗಳಲ್ಲಿ ಮುಗಿಸಿದ್ದಾರೆ. "ಇನ್ನು ಸ್ವಲ್ಪ ಕೆಲಸವಷ್ಟೇ ಉಳಿದಿದೆ. ನಂತರ ರೀ ರೆಕಾರ್ಡಿಂಗ್, ಸೆನ್ಸಾರ್ ಮತ್ತು ಮೇನಲ್ಲಿ ಬಿಡುಗಡೆಗೆ ಸಿದ್ಧವಾಗಲಿದೆ" ಎನ್ನುತ್ತಾರೆ ಶ್ರೀನಿವಾಸ್.

ಎರಡನೇ ಪಾಠ ಬಿಡುಗಡೆ ದಿನವನ್ನು ಮುಂದೂಡದೆ ಇರುವುದು. 'ಶಿವಂ' ಬಿಡುಗಡೆಗೆ ತಿಂಗಳುಗಟ್ಟಲೆ ಹಿಡಿದಿತ್ತು. ಈ ಬಾರಿ ಒಂದು ದಿನಕ್ಕೆ ಅಂಟಿಕೊಂಡು ಸರಿಯಾದ ದಿನ ಬಿಡುಗಡೆ ಮಾಡಲಿದ್ದಾರಂತೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದಲ್ಲಿ ಪೂಜಾ ಗಾಂಧಿ ಅತಿಥಿ ನಟಿಯಾಗಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ಜೊತೆ 'ನಾಟಿ ಕೋಳಿ' ಮತ್ತು ಪೂಜಾ ಗಾಂಧಿಯವರ ಜೊತೆ 'ದಂಡುಪಾಳ್ಯ-೨' ರಾಜು ಅವರ ಮುಂದಿನ ಯೋಜನೆಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT