'ಓ ಕಾದಲ್ ಕಣ್ಮಣಿ' ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಓ ಕಾದಲ್ ಕಣ್ಮಣಿ'ಯಿಂದ ತಮಿಳುನಾಡಿನಲ್ಲಿ ಎರಡು ಆತ್ಮಹತ್ಯೆ?

ಒಂದೇ ದಿನದಲ್ಲಿ ನಡೆದ ಎರಡು ಘಟನೆಗಳಲ್ಲಿ ತನ್ನ ಪ್ರೇಯಸಿ ಇತ್ತೀಚಿಗೆ ಬಿಡುಗಡೆಯಾದ 'ಓ ಕಾದಲ್ ಕಣ್ಮಣಿ' ಚಿತ್ರವನ್ನು ನೋಡಲು ಜೊತೆಗೂಡಲಿಲ್ಲ

ಕೊಯಂಬತ್ತೂರು: ಒಂದೇ ದಿನದಲ್ಲಿ ನಡೆದ ಎರಡು ಘಟನೆಗಳಲ್ಲಿ ತನ್ನ ಪ್ರೇಯಸಿ ಇತ್ತೀಚಿಗೆ ಬಿಡುಗಡೆಯಾದ 'ಓ ಕಾದಲ್ ಕಣ್ಮಣಿ' ಚಿತ್ರವನ್ನು ನೋಡಲು ಜೊತೆಗೂಡಲಿಲ್ಲ ಎಂಬ ಕಾರಣಕ್ಕೆ ಕೊಯಂಬತ್ತುರಿನಲ್ಲಿ ೨೯ ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ತನ್ನ ಗಂಡ ಇದೇ  ಚಲನಚಿತ್ರಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಬಿ ಆರ್ ಪುರಂ ನಿವಾಸಿ ಜೆ ಜೈಶಂಕರ್ ಮೊದಲು ಮದ್ಯ ಸೇವಿಸಿ, ಅಲ್ಲೇ ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ತನ್ನ ಪ್ರೇಯಸಿಗೆ ಚಲನಚಿತ್ರಕ್ಕೆ ಬರುವಂತೆ ಕೇಳಿದ್ದಾನೆ. ಮಣಿರತ್ನಂ ಅವರ 'ಓ ಕಾದಲ್ ಕಣ್ಮಣಿ' ಸಿನೆಮಾಕ್ಕೆ ತನ್ನ ಜೊತೆಗೂಡದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಬರಲು ನಿರಾಕರಿಸಿದ್ದರಿಂದ ಜೈಶಂಕರ್ ನೇಣು ಬಿಗಿದುಕೊಂಡಿದ್ದಾನೆ ಎಂದು ಪೀಲಮೇಡು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ನವ ಇಂಡಿಯಾ ಪ್ರದೇಶದ ನಿವಾಸಿ ಪಿ ಸತ್ಯಪ್ರಿಯ ತನ್ನ ಪತಿ ಪಳನಿಸ್ವಾಮಿ ಅವರಿಗೆ ಬಿಗ್ ಬಜಾರ್ ನಲ್ಲಿ ಶಾಪಿಂಗ್ ಗೆ ಕರೆದುಕೊಂಡು ಹೋಗಿ 'ಓ ಕಾದಲ್ ಕಣ್ಮಣಿ' ಚಲನಚಿತ್ರ ತೋರಿಸುವಂತೆ ದುಂಬಾಲು ಬಿದ್ದಿದ್ದಾರೆ.

ಖಾಸಗಿ ಸಂಸ್ಥೆಯೊಂದರ ಮಾರಾಟ ನಿರ್ದೇಶಕನಾಗಿರುವ ಪಳನಿಸ್ವಾಮಿ ತನಗೆ ಹುಷಾರಿಲ್ಲ ಎಂದು ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಅವನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದರು ಯಾವುದೇ ಪ್ರಯೋಜನವಾಗಿಲ್ಲ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT