ಸಿನಿಮಾ ಸುದ್ದಿ

ಶುಕ್ರವಾರ 'ಮಳೆ'ಯ ಜೊತೆ ಪ್ರಣಯ

Guruprasad Narayana

ಬೆಂಗಳೂರು: ಬಿಡುಗಡೆಗೆ ಸಾಕಷ್ಟು ತಡವಾಗಿದ್ದರೂ, ಬಹುಷಃ ಇದೇ ಅಮೂಲ್ಯ ಸಮಯವಿರಬೇಕು. ಕರ್ನಾಟಕದಾದ್ಯಂತ ಸುರಿಯುತ್ತಿರುವ ಮಳೆಯಲ್ಲಿ ಬೆಳ್ಳಿ ತೆರೆಯಲ್ಲಿ 'ಮಳೆ' ಸುರಿಯಲು ಸಿದ್ಧವಾಗಿದೆ. ಶುಕ್ರವಾರ ನಟ ಪ್ರೇಮ್ ಮತ್ತು ನಟಿ ಅಮೂಲ್ಯ ನಟನೆಯ 'ಮಳೆ' ಬಿಡುಗಡೆಯಾಗಲಿದ್ದು ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯ ಮಳೆಯನ್ನು ಸುರಿಸಲಿದೆ ಎಂಬ ಗುಂಗಿದೆ!

ನಿರ್ಮಾಪಕ ಮತ್ತು ನಿರ್ದೇಶಕ ಆರ್ ಚಂದ್ರು ಅವರದ್ದೇ ಸ್ಕ್ರಿಪ್ಟ್ ಇರುವ ಈ ಸಿನೆಮಾವನ್ನು ಚೊಚ್ಚಲ ಬಾರಿಯ ನಿರ್ದೇಶಕ ಎ ಆರ್ ಶಿವತೇಜ ನಿರ್ದೇಶಿಸಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತವಿದೆ.

ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ನೀಡಿದ ಸಿನೆಮಾ. ಈಗ ನಾಳೆ ಬಿಡುಗಡೆಯಾಗಲಿರುವ ಸಿನೆಮಾ ಅದೇ ಮ್ಯಾಜಿಕ್ ಮಾಡಲಿದೆಯೇ? ಜಾಣರ ಜಾಣ ಕನ್ನಡ ಪ್ರೇಕ್ಷಕನೇ ಬಲ್ಲ!

ನಾಳೆ ವಿಮರ್ಶೆಯನ್ನು ವೀಕ್ಷಿಸಿ!

SCROLL FOR NEXT