'ಬಾಹುಬಲಿ' ಸಿನೆಮಾದಲ್ಲಿ ಕಟ್ಟಪನ ಪಾತ್ರದಲ್ಲಿ ಸತ್ಯರಾಜ್ 
ಸಿನಿಮಾ ಸುದ್ದಿ

ಬಾಹುಬಲಿ೨ ಕ್ಕೆ ೧೦೦ ದಿನ ಮೀಸಲಿಟ್ಟ ಸತ್ಯರಾಜ್

ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ

ಚೆನ್ನೈ: ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ ದ್ವಿತೀಯಾರ್ಧಕ್ಕೆ ೧೦೦ ದಿನಗಳನ್ನು ಮೀಸಲಿಡುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.

"ಬಾಹುಬಲಿ ೨ ರ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ೪೦% ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸತ್ಯರಾಜ್ ಸರ್ ಅವರಿಗೆ ೧೦೦ ದಿನಗಳನ್ನು ಮೀಸಲಿಡಲು ಕೋರಿಕೊಳ್ಳಲಾಗಿದೆ" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಚಿತ್ರೀಕರಣಕ್ಕೆ ಬಿಡುವಾಗಿರಲು ವಿಜಯ್ ಅವರ ಮುಂದಿನ ಬೃಹತ್ ಚಿತ್ರವನ್ನು ಸತ್ಯರಾಜ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

"ನಟ ವಿಜಯ್ ಅವರ ಇನ್ನೂ ಹೆಸರಿಡದ ೫೯ ನೆ ತಮಿಳು ಚಿತ್ರದ ಖಳ ನಾಯಕ ಪಾತ್ರಕ್ಕೆ ಅವರನ್ನು ಕೇಳಲಾಯಿತು. ಆದರೆ ಬಾಹುಬಲಿ ದ್ವಿತೀಯ ಭಾಗರ ಚಿತ್ರೀಕರಣ ಸಮಯದಲ್ಲಿ ಬಿಡುವಾಗಿರಲು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು" ಎಂದು ಮೂಲಗಳು ತಿಳಿಸಿವೆ.

೨೦೧೬ರ ಬೇಸಿಗೆಯಲ್ಲಿ ಬಾಹುಬಲಿ೨ ಬಿಡುಗಡೆ ಕಾಣಲಿದೆ. ಅತಿ ಹೆಚ್ಚು ಗಳಿಕೆ ಕಂಡ ದಕ್ಷಿಣ ಭಾರತದ ಸಿನೆಮಾ ಎಂದು ಹೆಗ್ಗಳಿಕೆ ಗಳಿಸಿರುವ ಬಾಹುಬಲಿ ೫೦೦ಕೋಟಿ ರೂ ಗಳಿಕೆಯನ್ನು ಮೀರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT