'ಬಾಹುಬಲಿ' ಸಿನೆಮಾದಲ್ಲಿ ಕಟ್ಟಪನ ಪಾತ್ರದಲ್ಲಿ ಸತ್ಯರಾಜ್ 
ಸಿನಿಮಾ ಸುದ್ದಿ

ಬಾಹುಬಲಿ೨ ಕ್ಕೆ ೧೦೦ ದಿನ ಮೀಸಲಿಟ್ಟ ಸತ್ಯರಾಜ್

ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ

ಚೆನ್ನೈ: ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ ದ್ವಿತೀಯಾರ್ಧಕ್ಕೆ ೧೦೦ ದಿನಗಳನ್ನು ಮೀಸಲಿಡುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.

"ಬಾಹುಬಲಿ ೨ ರ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ೪೦% ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸತ್ಯರಾಜ್ ಸರ್ ಅವರಿಗೆ ೧೦೦ ದಿನಗಳನ್ನು ಮೀಸಲಿಡಲು ಕೋರಿಕೊಳ್ಳಲಾಗಿದೆ" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಚಿತ್ರೀಕರಣಕ್ಕೆ ಬಿಡುವಾಗಿರಲು ವಿಜಯ್ ಅವರ ಮುಂದಿನ ಬೃಹತ್ ಚಿತ್ರವನ್ನು ಸತ್ಯರಾಜ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

"ನಟ ವಿಜಯ್ ಅವರ ಇನ್ನೂ ಹೆಸರಿಡದ ೫೯ ನೆ ತಮಿಳು ಚಿತ್ರದ ಖಳ ನಾಯಕ ಪಾತ್ರಕ್ಕೆ ಅವರನ್ನು ಕೇಳಲಾಯಿತು. ಆದರೆ ಬಾಹುಬಲಿ ದ್ವಿತೀಯ ಭಾಗರ ಚಿತ್ರೀಕರಣ ಸಮಯದಲ್ಲಿ ಬಿಡುವಾಗಿರಲು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು" ಎಂದು ಮೂಲಗಳು ತಿಳಿಸಿವೆ.

೨೦೧೬ರ ಬೇಸಿಗೆಯಲ್ಲಿ ಬಾಹುಬಲಿ೨ ಬಿಡುಗಡೆ ಕಾಣಲಿದೆ. ಅತಿ ಹೆಚ್ಚು ಗಳಿಕೆ ಕಂಡ ದಕ್ಷಿಣ ಭಾರತದ ಸಿನೆಮಾ ಎಂದು ಹೆಗ್ಗಳಿಕೆ ಗಳಿಸಿರುವ ಬಾಹುಬಲಿ ೫೦೦ಕೋಟಿ ರೂ ಗಳಿಕೆಯನ್ನು ಮೀರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT