'ಬಾಹುಬಲಿ' ಸಿನೆಮಾದಲ್ಲಿ ಕಟ್ಟಪನ ಪಾತ್ರದಲ್ಲಿ ಸತ್ಯರಾಜ್ 
ಸಿನಿಮಾ ಸುದ್ದಿ

ಬಾಹುಬಲಿ೨ ಕ್ಕೆ ೧೦೦ ದಿನ ಮೀಸಲಿಟ್ಟ ಸತ್ಯರಾಜ್

ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ

ಚೆನ್ನೈ: ಜನಪ್ರಿಯ ತಮಿಳು ನಟ ಸತ್ಯರಾಜ್ ಅವರು ಬಾಹುಬಲಿಯ 'ಕಟ್ಟಪ್ಪ' ಪಾತ್ರ ಪೋಷಣೆಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ. ಈಗ ಬಾಹುಬಲಿ ದ್ವಿತೀಯಾರ್ಧಕ್ಕೆ ೧೦೦ ದಿನಗಳನ್ನು ಮೀಸಲಿಡುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.

"ಬಾಹುಬಲಿ ೨ ರ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ೪೦% ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸತ್ಯರಾಜ್ ಸರ್ ಅವರಿಗೆ ೧೦೦ ದಿನಗಳನ್ನು ಮೀಸಲಿಡಲು ಕೋರಿಕೊಳ್ಳಲಾಗಿದೆ" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಚಿತ್ರೀಕರಣಕ್ಕೆ ಬಿಡುವಾಗಿರಲು ವಿಜಯ್ ಅವರ ಮುಂದಿನ ಬೃಹತ್ ಚಿತ್ರವನ್ನು ಸತ್ಯರಾಜ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

"ನಟ ವಿಜಯ್ ಅವರ ಇನ್ನೂ ಹೆಸರಿಡದ ೫೯ ನೆ ತಮಿಳು ಚಿತ್ರದ ಖಳ ನಾಯಕ ಪಾತ್ರಕ್ಕೆ ಅವರನ್ನು ಕೇಳಲಾಯಿತು. ಆದರೆ ಬಾಹುಬಲಿ ದ್ವಿತೀಯ ಭಾಗರ ಚಿತ್ರೀಕರಣ ಸಮಯದಲ್ಲಿ ಬಿಡುವಾಗಿರಲು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು" ಎಂದು ಮೂಲಗಳು ತಿಳಿಸಿವೆ.

೨೦೧೬ರ ಬೇಸಿಗೆಯಲ್ಲಿ ಬಾಹುಬಲಿ೨ ಬಿಡುಗಡೆ ಕಾಣಲಿದೆ. ಅತಿ ಹೆಚ್ಚು ಗಳಿಕೆ ಕಂಡ ದಕ್ಷಿಣ ಭಾರತದ ಸಿನೆಮಾ ಎಂದು ಹೆಗ್ಗಳಿಕೆ ಗಳಿಸಿರುವ ಬಾಹುಬಲಿ ೫೦೦ಕೋಟಿ ರೂ ಗಳಿಕೆಯನ್ನು ಮೀರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!