ನರ್ತಕಿ ಚಿತ್ರಮಂದಿರದ ಎದುರು ನಿಲ್ಲಿಸಲಾಗಿರುವ ಉಪ್ಪಿ೨ ಉಲ್ಟಾ ಕಟೌಟ್ 
ಸಿನಿಮಾ ಸುದ್ದಿ

ಉಪ್ಪಿ೨ ನಡುರಾತ್ರಿಯ ಪ್ರದರ್ಶನ?

ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಈಗ ಇದಕ್ಕೆ ಹೊಸದೊಂದು ತಂತ್ರ ಸೇರ್ಪಡೆಯಾಗಿದೆ.

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಈಗ ಇದಕ್ಕೆ ಹೊಸದೊಂದು ತಂತ್ರ ಸೇರ್ಪಡೆಯಾಗಿದೆ. ಈಗಾಗಲೇ ಕರ್ನಾಟಕದಾದ್ಯಂತ ೨೫೦ ಚಿತ್ರಮಂದಿರಗಳು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ೪೦೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ. ಇಷ್ಟಾಗಿಯೂ ಚಿತ್ರದ ಟಿಕೆಟ್ ಗಳಿಗೆ ಈಗಾಗಲೇ ಅಪಾರ ಬೇಡಿಕೆ ಇದೆಯಂತೆ. ಆದುದರಿಂದ ಪ್ರೇಕ್ಷಕರ ಈ ಕಾತರವನ್ನು ತಣಿಸಲು ಅವರ ಕೋರಿಕೆಯಂತೆ ಉಪ್ಪಿ೨ ಚಿತ್ರಪ್ರದರ್ಶನವನ್ನು ಮಧ್ಯರಾತ್ರಿಗೂ ವಿಸ್ತರಿಸುವ ಚಿಂತನೆ ನಡೆದಿದೆ ಎನ್ನುತ್ತಾರೆ ವಿತರಕ ಶ್ರೀಕಾಂತ್.

"ಅಭಿಮಾನಿಗಳ ಕೋರಿಕೆಯನ್ನು ಈಡೇರಿಸಲು ನಾವು ಚಿಂತನೆ ನಡೆಸಿದ್ದೇವೆ. ಆಗಸ್ಟ್ ೧೪ ರಂದು ಮಧ್ರಾತ್ರಿಯ ಪ್ರದರ್ಶನ ಏರ್ಪಡಿಸಲು ಚಿತ್ರಮಂದಿರ ಮಾಲಿಕರ ಜೊತೆ ಮಾತುಕತೆ ನಡೆಸಿದ್ದೇನೆ. ಇದು ಅತಿ ಹೆಚ್ಚು ಬೇಡಿಕೆ ಇರುವ ಕಡೆಗಳಲ್ಲಿ ಸಾಧ್ಯವಾಗಬಹುದು" ಎನ್ನುತ್ತಾರೆ ಶ್ರೀಕಾಂತ್.

ಈಗಾಗಲೇ ಮುಂಗಡ ಬುಕಿಂಗ್ ಪ್ರಾರಂಭವಾಗಿದ್ದು, ಉಪೇಂದ್ರ ಅವರ ಅತಿ ದೊಡ್ಡ ಅಭಿಮಾನಿ ಕಿಶೋರ್ ಬನ್ನೇರಘಟ್ಟ ರಸ್ತೆಯಲ್ಲಿರುವ ಸಿನೆಪೊಲೀಸ್ ಚಿತ್ರಮಂದಿರದಲ್ಲಿ ೪೦೦ ಟಿಕೆಟ್ ಗಳಿಗೆ ಬೇಡಿಕೆಯಿಟ್ಟಿದ್ದಾರೆ. ಸಿನೆಪೊಲೀಸ್ ವ್ಯವಸ್ಥಾಪಕರ ಪ್ರಕಾರ "ಕಳೆದ ೧೫ ದಿನಗಳಿಂದ ಕಿಶೋರ್ ಎಂಬುವವರು ಮುಂಗಡ ಬುಕಿಂಗ್ ಬಗ್ಗೆ ವಿಚಾರಿಸುತ್ತಿದ್ದಾರೆ. ಉಪ್ಪಿ೨ ಟಿಕೆಟ್ ಕೌಂಟರ್ ತೆರೆದ ಮೇಲಷ್ಟೇ ಅವರ ಮನವಿಯನ್ನು ಪರಿಗಣಿಸಬಹುದು" ಎನ್ನುತ್ತಾರೆ.

ಕಿಶೋರ್ ಉತ್ತರಹಳ್ಳಿ ಉಪೇಂದ್ರ ಅಭಿಮಾನಿಗಳ ಬಳಗದ ಸದಸ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT