ಉಪೇಂದ್ರ ಮತ್ತು ನಾಗಣ್ಣ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಉಪ್ಪಿ-2 ನಂತರ ಉಪೇಂದ್ರ ಕಲ್ಪನಾ-2..!

ತಮ್ಮದೇ ನಿರ್ದೇಶನದ ಉಪ್ಪಿ-2 ಚಿತ್ರದ ಯಶಸ್ಸಿನ ಸಂತಸದಲ್ಲಿರುವ ನಟ-ನಿರ್ದೇಶಕ ಉಪೇಂದ್ರ ಶೀಘ್ರದಲ್ಲಿಯೇ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತುಕೊಳ್ಳಲ್ಲಿದ್ದಾರೆ....

ತಮ್ಮದೇ ನಿರ್ದೇಶನದ ಉಪ್ಪಿ-2 ಚಿತ್ರದ ಭರ್ಜರಿ ಯಶಸ್ಸಿನ ಸಂತಸದಲ್ಲಿರುವ ನಟ-ನಿರ್ದೇಶಕ ಉಪೇಂದ್ರ ಶೀಘ್ರದಲ್ಲಿಯೇ ಮತ್ತೊಂದು ಹೊಸ ಚಿತ್ರವನ್ನು  ಕೈಗೆತ್ತುಕೊಳ್ಳಲ್ಲಿದ್ದಾರೆ. ಉಪ್ಪಿ-2 ನಂತೆಯೇ ಉಪೇಂದ್ರ ಅವರ ಮುಂದಿನ ಚಿತ್ರ ಮತ್ತೆ ಸೀಕ್ವೆಲ್ ಆಗಿರುವುದು ವಿಶೇಷ.

ಈ ಬಾರಿ ನಟ ಉಪೇಂದ್ರ ಅವರು ಕಲ್ಪನಾ ಚಿತ್ರದ ಸೀಕ್ವೆಲ್ ಕಲ್ಪನಾ-2ರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ನಟ-ನಿರ್ದೇಶಕ ರಾಘವ ಲಾರೆನ್ಸ್ ಈ ಚಿತ್ರವನ್ನು ಕಾಂಚನಾ ಮತ್ತು ಕಾಂಚನಾ-2 ಎಂಬ  ಶೀರ್ಷಿಕೆಗಳಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದರು. ಎರಡೂ ಭಾಷೆಗಳಲ್ಲಿ ಭರ್ಜರಿ ಯಶಗಳಿಸಿದ್ದ ಚಿತ್ರ ಕನ್ನಡಕ್ಕೆ ಕಲ್ಪನಾ ಆಗಿ ರಿಮೇಕ್ ಆಗಿತ್ತು. ಹಾಸ್ಯಭರಿತ ಹಾರರ್  ಚಿತ್ರವಾಗಿದ್ದ ಕಲ್ಪನಾ ಚಿತ್ರ ಭರ್ಜರಿ ಯಶಸ್ಸು ಗಳಿಸದಿದ್ದರೂ ನಿರ್ಮಾಪಕರಿಗೆ ಮೋಸ ಮಾಡಿರಲಿಲ್ಲ. ಹೀಗಾಗಿ ಅದೇ ಯಶಸ್ಸನ್ನು ಮುಂದುವರೆಸಲು ಕಲ್ಪನಾ-2 ಚಿತ್ರವನ್ನು ಉಪೇಂದ್ರ  ಕೈಗೆತ್ತಿಕೊಳ್ಳಲ್ಲಿದ್ದಾರೆ. ಆದರೆ ಈ ಬಾರಿ ಚಿತ್ರದ ನಿರ್ದೇಶನದ ಹೊಣೆಯನ್ನು ಹಿರಿಯ ನಿರ್ದೇಶಕ ನಾಗಣ್ಣ ಅವರು ವಹಿಸಿಕೊಂಡಿದ್ದಾರೆ.

ಇನ್ನು ನಾಗಣ್ಣ ಮತ್ತು ಉಪೇಂದ್ರ ಜೋಡಿ ಇದೇ ಮೊದಲ ಬಾರಿಗೆ ಏನೂ ಒಂದಾಗುತ್ತಿಲ್ಲ. ಈ ಹಿಂದೆ ಕುಟುಂಬ, ಗೋಕರ್ಣ, ಗೌರಮ್ಮ ಮತ್ತು ದುಬೈ ಬಾಬು ಎಂಬ 4 ಯಶಸ್ವೀ ಚಿತ್ರಗಳನ್ನು  ನೀಡಿದ ಖ್ಯಾತಿ ಈ ಜೋಡಿಗಿದೆ. ಹೀಗಾಗಿಯೇ 5ನೇ ಚಿತ್ರ ಕಲ್ಪನಾ-2 ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಇದಲ್ಲದೆ ನಾಗಣ್ಣ ನಿರ್ದೇಶನದ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಚಿತ್ರ ಅಭೂತಪೂರ್ವ ಯಶಸ್ಸುಕಂಡಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ಕಲ್ಪನಾ-2 ಚಿತ್ರದ ಹೊಣೆಯನ್ನು ನಾಗಣ್ಣ ಹೊತ್ತಿದ್ದಾರೆ.

ಗಾಂಧಿನಗರದ ಮೂಲಗಳ ಪ್ರಕಾರ ನಿರ್ದೇಶಕ ನಾಗಣ್ಣ ಈಗಾಗಲೇ ಚಿತ್ರದ ಸಿದ್ಧತೆಗಳನ್ನು ನಡೆಸಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.  ನಾಲ್ಕು ಬಾರಿ ಯಶಸ್ಸು ಸಾಧಿಸಿರುವ ಈ ಜೋಡಿ ಸತತ 5ನೇ ಬಾರಿಯೂ ಯಶಸ್ಸು ಸಾಧಿಸಲಿದೆಯೇ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT