ರುದ್ರಮದೇವಿ ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ರುದ್ರಮದೇವಿ' ಬಿಡುಗಡೆ ಮುಂದಕ್ಕೆ?

ನಿರ್ದೇಶಕ ಗುಣಶೇಖರ್ ಅವರ ಬಹುನಿರೀಕ್ಷಿತ ತೆಲುಗು ಐತಿಹಾಸಿಕ ಸಿನೆಮಾ 'ರುದ್ರಮದೇವಿ' ಈ ಹಿಂದೆ ನಿಗದಿಯಾಂದಂತೆ ಸೆಪ್ಟಂಬರ್ ೪ ರಂದು

ಚೆನ್ನೈ: ನಿರ್ದೇಶಕ ಗುಣಶೇಖರ್ ಅವರ ಬಹುನಿರೀಕ್ಷಿತ ತೆಲುಗು ಐತಿಹಾಸಿಕ ಸಿನೆಮಾ 'ರುದ್ರಮದೇವಿ' ಈ ಹಿಂದೆ ನಿಗದಿಯಾಂದಂತೆ ಸೆಪ್ಟಂಬರ್ ೪ ರಂದು ಬಿಡುಗಡೆಯಾಗಬೇಕಿತ್ತು ಆದರೆ ಚಿತ್ರೀಕರಣ ನಂತರದ ಕೆಲಸಗಳು ಬಾಕಿ ಉಳಿದಿರುವುದರಿಂದ ಬಿಡುಗಡೆ ಮುಂದೆಹಾಕಲಾಗಿದೆ ಎಂದು ತಿಳಿದುಬಂದಿದೆ.

"ಕಳೆದ ಕೆಲವು ತಿಂಗಳುಗಳಿಂದ ವಿಶುಯಲ್ ಎಫೆಕ್ಟ್ಸ್ ಮೇಲೆ ತಂಡ ಕೆಲಸ ಮಾಡುತ್ತಿದೆ. ಇನ್ನೂ ಎರಡು ವಾರಗಳ ಕೆಲಸ ಉಳಿದಿದ್ದು ಸಿನೆಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದಿನ್ನೂ ಅಧಿಕೃತವಾಗಿಲ್ಲ" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಈಗ ಬಹುಶಃ ಸಿನೆಮಾ ಸೆಪ್ಟಂಬರ್ ಮೂರನೇ ವಾರದಲ್ಲಿ ತೆರೆಕಾಣುವ ಸಾಧ್ಯತೆ ಇದೆ ಎಂದು ಅದೇ ಮೂಲಗಳಿಂದ ತಿಳಿದುಬಂದಿದೆ.

ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾ ಕಾಕತೀಯ ರಾಜವಂಶದ ರಾಣಿಯ ಪಾತ್ರ ನಿರ್ವಹಿಸಿದ್ದಾರೆ.

ರಾಣ ದಗ್ಗುಬಟಿ, ಅಲ್ಲೂ ಅರ್ಜುನ್, ನಿತ್ಯಾ ಮೆನನ್, ಪ್ರಕಾಶ್ ರಾಜ್ ಮುಂತಾದವರು ಕೂಡ ತಾರಾಗಣದಲ್ಲಿದ್ದು, ಈ ಸಿನೆಮಾ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT