ಬೆಂಗಳೂರು: ನಿರ್ದೇಶಕ, ಗೀತರಚನಕಾರ ಅಲ್ಲದೆ ತಮ್ಮ ಸಿನೆಮಾ 'ಗೂಗ್ಲಿ'ಯಲ್ಲಿ ಗಾಯಕನಾಗಿಯೂ ಕಾಣಿಸಿಕೊಂಡ ಪವನ್ ಒಡೆಯರ್, ಈಗ ಯಶವಂತ್ ಕುಮಾರ್ ನಿರ್ದೇಶನದ 'ದಸರಾ ಗೊಂಬೆ' ಸಿನೆಮಾದ ಒಂದು ಹಾಡಿಗೆ ತಮ್ಮ ಕಂಠದಾನ ಮಾಡಿದ್ದಾರೆ.
"'ಗೋವಿಂದಾಯ ನಮಃ' ಸಿನೆಮಾದ ವೇಳೆ ಆ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ವೈಭವ್ ನನಗೆ ಪರಿಚಯವಾಯಿತು. ಈಗ 'ದಸರಾ ಗೊಂಬೆ'ಯ ನಾಯಕ ನಟ ಅವರು. ಈ ಸಿನೆಮಾಗೆ ಒಂದು ಹಾಡನ್ನು ರಚನೆ ಮಾಡಿದ್ದೆ, ವೈಭವ್ ಅವರ ಬಲವಂತದ ಮೇಲೆ ಅದನ್ನು ಹಾಡಬೇಕಾಗಿಯೂ ಬಂತು" ಎನ್ನುತ್ತಾರೆ ಪವನ್. ಈ ಹಾಡಿನ ಸಾಹಿತ್ಯ ಹೀಗಿದೆ "ಕೆಂಪು ಬಾಟ್ಲಲ್ಲಿ ಇರೋದೆಲ್ಲ ವೈನಲ್ಲ, ಬಿಳಿ ಬಾಟ್ಲಲ್ಲಿ ಇರೋದೆಲ್ಲಾ ಸಾರಾಯಲ್ಲ, ಹಸಿರು ಬಾಟ್ಲಲ್ಲಿ ಇರೋದೆಲ್ಲ ಔಷದಿಯಲ್ಲಾ" ಎಂದಿದೆ.
"ಹಾಡು ಬಹಳ ಚೆನ್ನಾಗಿ ಮುಡಿ ಬಂದಿದೆ" ಎನ್ನುತ್ತಾರೆ ಪವನ್. ಸಿನೆಮಾದ ನಾಯಕ ನಟಿ ಅದಿತಿ ರಾವ್.