ಸಿನಿಮಾ ಸುದ್ದಿ

'ದಸರಾ ಗೊಂಬೆ'ಗೆ ಪವನ್ ಕಂಠ

Guruprasad Narayana
ಬೆಂಗಳೂರು: ನಿರ್ದೇಶಕ, ಗೀತರಚನಕಾರ ಅಲ್ಲದೆ ತಮ್ಮ ಸಿನೆಮಾ 'ಗೂಗ್ಲಿ'ಯಲ್ಲಿ ಗಾಯಕನಾಗಿಯೂ ಕಾಣಿಸಿಕೊಂಡ ಪವನ್ ಒಡೆಯರ್, ಈಗ ಯಶವಂತ್ ಕುಮಾರ್ ನಿರ್ದೇಶನದ 'ದಸರಾ ಗೊಂಬೆ' ಸಿನೆಮಾದ ಒಂದು ಹಾಡಿಗೆ ತಮ್ಮ ಕಂಠದಾನ ಮಾಡಿದ್ದಾರೆ.
"'ಗೋವಿಂದಾಯ ನಮಃ' ಸಿನೆಮಾದ ವೇಳೆ ಆ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ವೈಭವ್ ನನಗೆ ಪರಿಚಯವಾಯಿತು. ಈಗ 'ದಸರಾ ಗೊಂಬೆ'ಯ ನಾಯಕ ನಟ ಅವರು. ಈ ಸಿನೆಮಾಗೆ ಒಂದು ಹಾಡನ್ನು ರಚನೆ ಮಾಡಿದ್ದೆ, ವೈಭವ್ ಅವರ ಬಲವಂತದ ಮೇಲೆ ಅದನ್ನು ಹಾಡಬೇಕಾಗಿಯೂ ಬಂತು" ಎನ್ನುತ್ತಾರೆ ಪವನ್. ಈ ಹಾಡಿನ ಸಾಹಿತ್ಯ ಹೀಗಿದೆ "ಕೆಂಪು ಬಾಟ್ಲಲ್ಲಿ ಇರೋದೆಲ್ಲ ವೈನಲ್ಲ, ಬಿಳಿ ಬಾಟ್ಲಲ್ಲಿ ಇರೋದೆಲ್ಲಾ ಸಾರಾಯಲ್ಲ, ಹಸಿರು ಬಾಟ್ಲಲ್ಲಿ ಇರೋದೆಲ್ಲ ಔಷದಿಯಲ್ಲಾ" ಎಂದಿದೆ. 
"ಹಾಡು ಬಹಳ ಚೆನ್ನಾಗಿ ಮುಡಿ ಬಂದಿದೆ" ಎನ್ನುತ್ತಾರೆ ಪವನ್. ಸಿನೆಮಾದ ನಾಯಕ ನಟಿ ಅದಿತಿ ರಾವ್. 
SCROLL FOR NEXT