ಮಾನ್ವಿತಾ ಹರೀಶ್ 
ಸಿನಿಮಾ ಸುದ್ದಿ

'ಕೆಂಡಸಂಪಿಗೆ'ಯ ಗಿಣಿಮರಿ ಮಾನ್ವಿತಾಗೆ ಹೊಸಹುಟ್ಟು

ರೇಡಿಯೋ ಜಾಕಿ ವೃತ್ತಿಯಿಂದ ನಟನೆಗೆ ಜಿಗಿದಿರುವ ಮಾನ್ವಿತಾ ಹರೀಶ್ ಅವರಿಗೆ ಸಂತಸದ ಸಮಯ. ಸೂರಿ ನಿರ್ದೇಶನದ 'ಕೆಂಡಸಂಪಿಗೆ - ಪಾರ್ಟ್ ೨ ಗಿಣಿಮರಿ ಕೇಸ್'

ಬೆಂಗಳೂರು: ರೇಡಿಯೋ ಜಾಕಿ ವೃತ್ತಿಯಿಂದ ನಟನೆಗೆ ಜಿಗಿದಿರುವ ಮಾನ್ವಿತಾ ಹರೀಶ್ ಅವರಿಗೆ ಸಂತಸದ ಸಮಯ. ಸೂರಿ ನಿರ್ದೇಶನದ 'ಕೆಂಡಸಂಪಿಗೆ - ಪಾರ್ಟ್ ೨ ಗಿಣಿಮರಿ ಕೇಸ್' ನಲ್ಲಿ ನಾಯಕ ನಟಿಯಾಗಿರುವ ಇವರಿಗೆ ಚೊಚ್ಚಲ ಚಿತ್ರದಲ್ಲೇ ಜನಪ್ರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಮಧುರ ಅನುಭವ.

"ನನಗೆ ಯಾರೂ ಗಾಡ್ ಫಾದರ್ ಇಲ್ಲ. ರೇಡಿಯೋ ಜಾಕಿಯಾಗಿ ನನ್ನ ಸಂಪರ್ಕಗಳನ್ನು ಬೆಳೆಸಿಕೊಂಡೆ. ಅವರಲ್ಲಿ ಒಬ್ಬರು ನಿರ್ದೇಶಕ ಸೂರಿಯವರ ಬಳಿ ೧೮ ತಿಂಗಳ ಹಿಂದೆ ನನ್ನ ಹೆಸರನ್ನು ಸೂಚಿಸಿದ್ದರು. ಆಡಿಶನ್ ಕರೆದಾಗ ನಾನು ಆಯ್ಕೆಯಾದೆ" ಎನ್ನುತ್ತಾರೆ ನಟಿ. ತನ್ನ ನಟನಾ ಕೌಶಲ್ಯವಲ್ಲದೆ ಸೂರಿಯವರಿಗೆ ಬೇಕಾಗಿದ್ದ ಹಲವಾರು ಗುಣಗಳು ತನ್ನಲ್ಲಿವೆ ಎನ್ನುವ ಅವರು "ನಾನು ಅತಿ ಹೆಚ್ಚು ದೂರ ಡ್ರೈವ್ ಮಾಡಬಲ್ಲೆ. ಕನ್ನಡ ಚೆನ್ನಾಗಿ ಮಾತನಾಡಬಲ್ಲೆ. ಮಂಗಳೂರು, ಮಲೆನಾಡು, ಧಾರವಾಡ ಮತ್ತು ಬೆಂಗಳೂರು ಪ್ರದೇಶಗಳ ಕನ್ನಡ ಬಲ್ಲೆ. ನನ್ನ ಲುಕ್ಸ್ ಬಗ್ಗೆ ನಾನು ತೀರ್ಪು ನೀಡಲಾರೆ" ಎನ್ನುತ್ತಾರೆ ಮುದ್ದು ಮುಖದ ಮಾನ್ವಿತಾ.

ಸಿನೆಮಾ ಬಗ್ಗೆ ಮಾತನಾಡುವ ಮಾನ್ವಿತಾ "ಈ ಸಿನೆಮಾದಲ್ಲಿ ಸಾಕಷ್ಟು ಪ್ರಯಾಣ ಇದೆ. ವಿನೀತ ಸ್ವಭಾವದ, ಸೃಜನಶೀಲ ವ್ಯಕ್ತಿ ಸೂರಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಕನಸು ನನಸಾದಂತೆ" ಎನ್ನುತ್ತಾರೆ.

ಬೇರೆ ಬೇರೆ ಪಾತ್ರಗಳ ನಿರೀಕ್ಷೆಯಲ್ಲಿರುವ ಮಾನ್ವಿತಾ ಬೇರೆ ಭಾಷೆಗಳ ಸಿನೆಮಾಗಳಲ್ಲೂ ನಟಿಸುವಾಸೆ ಹೊಂದಿದ್ದಾರೆ. ಕೆಂಡಸಂಪಿಗೆ ಪಾರ್ಟ್ ೨ ಗಿಣಿಮರಿ ಕೇಸ್ ಸೆಪ್ಟಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸುದ್ದಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT