ಗಾಳಿ ಬೀಜ ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಗಿರೀಶ್ ಕಾಸರವಳ್ಳಿ ಕ್ಷಮೆ ಕೇಳಬೇಕು ಎಂದ ಸೆನ್ಸಾರ್ ಬೋರ್ಡ್

ಬಾಬು ಈಶ್ವರ್ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ 'ಗಾಳಿಬೀಜ' ...

ಬೆಂಗಳೂರು: ಬಾಬು ಈಶ್ವರ್ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ 'ಗಾಳಿಬೀಜ' ಚಲನಚಿತ್ರಕ್ಕೆ ಸೆನ್ಸಾರ್ ಮಂಡಲಿಯವರು (ಸಿ ಬಿ ಎಫ್ ಸಿ) ಚಲನಚಿತ್ರ ಅರ್ಥವಾಗಲಿಲ್ಲ ಎಂದು ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಬರವಣಿಗೆಯಲ್ಲಿ ಕ್ಷಮಾಪಣೆ ಕೋರಬೇಕು ಎಂದು ಸೆನ್ಸಾರ್ ಮಂಡಲಿ ಆಗ್ರಹಿಸಿರುವುದು ಈಗ ವಿವಾದ ತೀವ್ರಗೊಂಡಿದೆ.

 "ಇಂತಹ ಹೇಳಿಕೆಗಳನ್ನು ಹಿರಿಯ ನಿರ್ದೇಶಕರಾದಂತ ಗಿರೀಶ್ ಕಾಸರವಳ್ಳಿಯವರಿಂದ  ನಿರೀಕ್ಷಿಸಿರಲಿಲ್ಲ. ಅವರಿಗೆ ಸಿ ಬಿ ಎಫ್ ಸಿ ನಿಯಮಗಳ ಬಗ್ಗೆ ಗೊತ್ತಿದೆ. ನನ್ನ ವಿರುದ್ಧ ಅವರ ಟೀಕೆ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು ಆದರೆ ಅವರು ಸಿ ಬಿ ಎಫ್ ಸಿ ಸಂಸ್ಥೆಯ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನಮಗೆ ವಿಶ್ವ ಸಿನೆಮಾ ಅರ್ಥವಾಗುವುದಿಲ್ಲ ಎಂದು ಕಾಸರವಳ್ಳಿಯವರು ಹೇಳಿರುವುದು ಸರಿಯಲ್ಲ. ಆದುದರಿಂದ ಅವರು ಬರವಣಿಗೆಯಲ್ಲಿ ಕ್ಷಮಾಪಣೆ ಕೋರಬೇಕೆಂದು ಆಗ್ರಹಿಸುತ್ತೇನೆ" ಎಂದಿದ್ದಾರೆ ಸಿ ಬಿ ಎಫ್ ಸಿಯ ಪ್ರಾದೇಶಿಕ ಅಧಿಕಾರಿ ಎಂ ನಾಗೇಂದ್ರ ಸ್ವಾಮಿ.

ಈ ಹಿಂದೆ 96 ನಿಮಿಷದ ಗಾಳಿಬೀಜ ಫೀಚರ್ ಫಿಲಂ ಅಥವಾ ಸಾಕ್ಷ್ಯಚಿತ್ರವೋ ಗೊತ್ತಾಗುವುದಿಲ್ಲ. ಸಂಭಾಷಣೆ ಬಹಳ ಕಡಿಮೆ ಎಂಬತಹ ಕಾರಣಗಳನ್ನು ಕೊಟ್ಟು ಸಿನೆಮಾ ನೋಡಿದ್ದ ಮಂಡಲಿ ಸೆನ್ಸಾರ್ ಸರ್ಟಿಫಿಕೆಟ್ ನಿಡಲು ನಿರಾಕರಿಸಿತ್ತು.

ಇದರಿಂದ ಕುಪಿತಗೊಂಡಿರುವ ಸಿನೆಮಾ ನಿರ್ದೇಶಕರು ಸೆನ್ಸಾರ್ ಮಂಡಲಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಾಬು ಪ್ರಸಾದ್ ಅವರನ್ನು ಬೆಂಬಲಿಸಿರುವ ಟಿ ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ಸೆನ್ಸಾರ್ ಮಂಡಲಿ ಎದುರು ಶೀಘ್ರದಲ್ಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT