ಶಿವಾನಿ ಸಿಂಗ್ 
ಸಿನಿಮಾ ಸುದ್ದಿ

ಶಿವಾನಿಸಿಂಗ್

ಒಂದು ಕೋನದಿಂದ ನೋಡಿದರೆ ನಟಿ ಕತ್ರಿನಾ ಕೈಫ್ ಮುಖವನ್ನು ಹೋಲುವಂತಿದ್ದರೂ ಕೈಫ್‌ಗೂ ಈಕೆಗೂ...

ಒಂದು ಕೋನದಿಂದ ನೋಡಿದರೆ ನಟಿ ಕತ್ರಿನಾ ಕೈಫ್ ಮುಖವನ್ನು ಹೋಲುವಂತಿದ್ದರೂ ಕೈಫ್‌ಗೂ ಈಕೆಗೂ ಯಾವ ಸಂಬಂಧವೂ ಇಲ್ಲ. ಇಬ್ಬರದು ಮುಂಬೈ ಮೂಲ ಎಂಬುದು ಮಾತ್ರ ಕಾಮನ್. ಅಂದ ಹಾಗೆ ಈಕೆಯ ಹೆಸರು ಶಿವಾನಿ ಸಿಂಗ್.

ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಿರುವ ಬಳ್ಳಿ. ಜತೆಗೆ ಅದ್ಭುತವಾದ ಡ್ಯಾನ್ಸರ್ ಬೇರೆ. ಕನ್ನಡಕ್ಕೆ ಬರುತ್ತಿರುವ ಶಿವಾನಿ ಸಿಂಗ್ ಅವರ ಎರಡು ಸಾಲಿನ ಪರಿಚಯವಿದು. ಈಕೆ 'ಮರೆಯುವ ಮುನ್ನ' ಎನ್ನುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಚಿತ್ರದ ನಾಯಕ ನಟ, ನಿರ್ದೇಶಕ ಕಂ ಡ್ಯಾನ್ಸರ್ ಪ್ರಭುದೇವಾ ಸೋದರ ನಾಗೇಂದ್ರ ಪ್ರಸಾದ್. ಸಂಕ್ಷಿಪ್ತವಾಗಿ ನಾಗ್‌ಪ್ರಸಾದ್ ಅಂತಲೂ ಕರೆಯುತ್ತಾರೆ. ಜೋಗಿ ಪ್ರೇಮ್ ಜತೆಗೆ ಸಹಾಯಕರಾಗಿ ಕೆಲಸ ಮಾಡಿದ್ದ ಸುಪ್ರಿತ್ ಶಂಕರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮೊದಲು ನಾಯಕ ಮಾತ್ರ ಆಯ್ಕೆಯಾಗಿದ್ದರು.

ನಾಯಕಿಯ ಪಾತ್ರಕ್ಕಾಗಿ ಹುಡುಕಾಡಿದ ನಿರ್ದೇಶಕರಿಗೆ ರಂಗು ರಂಗಿನ ಮಾಡೆಲಿಂಗ್ ಲೋಕದಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದ ಶಿವಾನಿ ಸಿಂಗ್ ಕಂಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ನೃತ್ಯಕ್ಕೆ ಹೆಚ್ಚು ಸ್ಕೋಪ್ ಇರುವುದರಿಂದ ಮಾಡೆಲ್ ಕಂ ಡ್ಯಾನ್ಸರ್ ಆಗಿರುವ ಶಿವಾನಿಯೇ ನಾಯಕಿ ಪಾತ್ರಕ್ಕೆ ಸೂಕ್ತ ಎಂದುಕೊಂಡು ಈ ಮುಂಬೈ ಬೆಡಗಿಯನ್ನು ಗಾಂಧಿನಗರಕ್ಕೆ ಕರೆತರಲು ಸುಪ್ರಿತ್ ನಿರ್ಧರಿಸಿದ್ದಾರೆ.

ಯುವ ಪ್ರೇಮಿಗಳ ಕಥೆ ಇದು. ಜತೆಗೆ ಇಲ್ಲಿ ಡ್ಯಾನ್ಸ್ ಹೆಚ್ಚಾಗಿರುತ್ತದೆ. ಅಲ್ಲದೆ ಚಿತ್ರದ ನಾಯಕ ಕೂಡ ಡ್ಯಾನ್ಸರ್. ಹೀಗಾಗಿ ಅವರಿಗೆ ಸರಿಯಾಗುವಂಥ ನಾಯಕಿ ಬೇಕಿತು. ಆಕೆ ಕೂಡ ಡ್ಯಾನ್ಸರ್ ಆಗಿರಬೇಕಿತ್ತು. ನಾವು ಅಂದುಕೊಂಡ ಕ್ವಾಲಿಚಿ ಶಿವಾನಿ ಸಿಂಗ್ ಅವರಲ್ಲಿದೆ. ಈ ಕಾರಣಕ್ಕೆ ನಮ್ಮ ಚಿತ್ರಕ್ಕೆ ಆಕೆಯನ್ನು ನಾಯಕಿಯನ್ನಾಗಿಸಿದ್ದೇವೆ ಎನ್ನುವ ನಿರ್ದೇಶಖ ಸುಪ್ತಿತ್, ಸದ್ಯದಲ್ಲೇ ಚಿತ್ರೀಕರಣಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ.

ಕುಮಾರ್ ಭದ್ರಾವತಿ ಹಾಗೂ ಪ್ರಮೋದ್ ಶಿವಣ್ಣ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಪಳನಿ ಡಿ. ಸೇನಾಪತಿ ಸಂಗೀತ, ಸಚಿನ್ ಪುರೋಹಿತ್ ಛಾಯಾಗ್ರಾಹಣವಿದೆ. ವಿಶೇಷ ಅಂದರೆ ಅಪ್ಪಟ ಪ್ರೇಮ ಚಿತ್ರವಾಗಿರುವ 'ಮರೆಯುವ ಮುನ್ನ' ಚಿತ್ರದಲ್ಲಿ ಪ್ರಭುದೇವಾ ಕೂಡ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬುದು ಚಿತ್ರತಂಡದ ಮಾಹಿತಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT