ನಟ ದರ್ಶನ್ 
ಸಿನಿಮಾ ಸುದ್ದಿ

'ಜಗ್ಗು ದಾದಾ'ನಾಗಿ ದರ್ಶನ್; ಅಮ್ಮನಾಗಿ ಊರ್ವಶಿ

ವಿರಾಟ್ ಮತ್ತು ಐರಾವತ ಮುಗಿಸುವುದರಲ್ಲೇ ಇನ್ನು ದರ್ಶನ್ ನಿರತರಾಗಿದ್ದಾರೆ, ಅಷ್ಟರಲ್ಲೇ ಈ ಬಹು ಬೇಡಿಕೆಯುಳ್ಳ ನಟನಿಗೆ ಹೊಸ ಸಿನೆಮಾ

ಬೆಂಗಳೂರು: ವಿರಾಟ್ ಮತ್ತು ಐರಾವತ ಮುಗಿಸುವುದರಲ್ಲೇ ಇನ್ನು ದರ್ಶನ್ ನಿರತರಾಗಿದ್ದಾರೆ, ಅಷ್ಟರಲ್ಲೇ ಈ ಬಹು ಬೇಡಿಕೆಯುಳ್ಳ ನಟನಿಗೆ ಹೊಸ ಸಿನೆಮಾ ಸಿದ್ಧವಾಗುತ್ತಿದೆ. ನಿರ್ದೇಶಕ ರಾಘವೇಂದ್ರ ಹೆಗಡೆ, ದರ್ಶನ್ ಅಭಿನಯದ 'ಜಗ್ಗು ದಾದಾ' ನಿರ್ದೇಶನಕ್ಕೆ ಮುಂದಾಗಿದ್ದಾರೆ. ದಕ್ಷಿಣ ಭಾರತದ ಹಿರಿಯ ನಟಿ ಊರ್ವಶಿ, ದರ್ಶನ್ ಅವರ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ.

"ಈ ಸಿನೆಮಾದಲ್ಲಿ ಹೆಚ್ಚು ಕಾಮಿಡಿ ಟ್ರ್ಯಾಕ್ ಇರುವುದರಿಂದ, ಹಾಸ್ಯವನ್ನು ಸುಲಭವಾಗಿ ನಿಭಾಯಿಸಬಲ್ಲ ಹಿರಿಯ ನಟಿ ಬೇಕಾಗಿತ್ತು. ನಮಗೆ ಆಗ ಹೊಳೆದದ್ದು ಊರ್ವಶಿ ಅವರ ಹೆಸರು. ಈಗ ಅವರ ಹೆಸರನ್ನು ಅಂತಿಮಗೊಳಿಸಿ, ಹಾಸ್ಯಕ್ಕೆ ಹೊಂದಿಕೊಳ್ಳಬಲ್ಲ ನಟಿಯ ಶೋಧದಲ್ಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಬುಲೆಟ್ ಪ್ರಕಾಶ್ ಕೂಡ ಸಿನೆಮಾದಲ್ಲಿ ನಟಿಸಲಿದ್ದಾರಂತೆ. "ಜಗ್ಗು ದಾದಾದಲ್ಲಿ ಪೋಷಕ ಪಾತ್ರಗಳನು ನಟಿಸಬಲ್ಲ ಹಲವಾರು ಹಿರಿಯ ಖ್ಯಾತ ನಟರ ಜೊತೆ ಮಾತುಕತೆ ನಡೆಸಿದ್ದೇನೆ" ಎನ್ನುತ್ತಾರೆ ರಾಘವೇಂದ್ರ.

ನಾಯಕ ನಟಿಯ ಶೋಧನೆಯ ಕಷ್ಟಕೋಟಲೆಗಳನ್ನು ವಿವರಿಸುವ ನಿರ್ದೇಶಕ "ಪ್ರೀತಿ ಪ್ರೇಮದ ದೃಶ್ಯಗಳನ್ನು ನಿಭಾಯಿಸುವುದಲ್ಲದೆ, ಹಾಸ್ಯವನ್ನು ಕೂಡ ಲೀಲಾಜಾಲವಾಗಿ ಅಭಿನಯಿಸುವ ಹಾಗೂ ಭಾವನಾತ್ಮಕ ದೃಶ್ಯಗಳನ್ನು ಕೂಡ ನಿಭಾಯಿಸಬಲ್ಲ ನಟಿ ಬೇಕು. ಸಮಯ ಹೆಚ್ಚು ತೆಗೆದುಕೊಂಡರೂ, ಸರಿಯಾಗಿ ಹೊಂದುಕೊಳ್ಳುವ ನಟಿಯನ್ನೇ ಆಯ್ಕೆ ಮಾಡುತ್ತೇವೆ" ಎಂದಿದ್ದಾರೆ ನಿರ್ದೇಶಕ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT