ಸಿನಿಮಾ ಸುದ್ದಿ

ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಮೋಹನ್ ಲಾಲ್ ಗೆ ಋಣಿ: ಕಮಲ್

Guruprasad Narayana

ಚೆನ್ನೈ: ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ದೃಶ್ಯಂ' ಸಿನೆಮಾದ ತಮಿಳು ಅವತರಿಣಿಕೆಗೆ ಕಮಲ್ ಹಾಸನ್ ಸೂಕ್ತರು ಎಂದು ಹೇಳಿದ್ದು ಖ್ಯಾತ ನಟ ಮೋಹನ್ ಲಾಲ್ ಅಂತೆ. ಇದಕ್ಕೆ ಕಮಲ್, ಮೋಹನ್ ಲಾಲ್ ಅವರಿಗೆ ಋಣಿ ಎಂದಿದ್ದಾರೆ.

"'ದೃಶ್ಯಂ ರಿಮೇಕ್ ನಲ್ಲಿ ನನ್ನನ್ನು ನೋಡಬೇಕೆಂದು ಮೋಹನ್ ಲಾಲ್ ಬಯಸಿದ್ದರೆಂದು ಯಾರಿಂದಲೋ ತಿಳಿದೆ. ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ನನ್ನ ಹೆಸರನ್ನು ಅವರು ಶಿಫಾರಸ್ಸು ಮಾಡಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸಬೇಕೆ, ಏಕೆಂದರೆ ಇಂತಹ ಒಳ್ಳೆಯ ಸಿನೆಮಾಗಳಲ್ಲಿ ನಾನು ನಟಿಸಬೇಕು ಎಂದು ತಾರೆಗಳು ಬಯಸುವುದು ವಿರಳ" ಎಂದು ಕಮಲ್ ತಿಳಿಸಿದ್ದಾರೆ.

ದೃಶ್ಯಂ ಸಿನೆಮಾದ ರಿಮೇಕ್ 'ಪಾಪನಾಶಂ' ಸಿನೆಮಾದಲ್ಲಿ ಕಮಲ್ ಹಾಸನ್ ನಾಯಕ ನಟ. ಈ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು.

ಮೂಲ ಸಿನೆಮಾವನ್ನು ನಿರ್ದೇಶಿಸಿದ್ದ ಜಿತು ಜೋಸೆಫ್ ಅವರೇ ತಮಿಳು ಅವತರಿಣಿಕೆಯನ್ನು ನಿರ್ದೇಶಿಸಿದ್ದರು.

ಈ ಸಿನೆಮಾ ಈಗಾಗಲೇ ಕನ್ನಡ, ತೆಲುಗು ಭಾಷೆಗಳಲ್ಲೂ ರಿಮೇಕ್ ಆಗಿದ್ದು ಹಿಂದಿ ಭಾಷೆಯಲ್ಲಿ ಅಜಯ್ ದೇವಗನ್ ನಟನೆಯ ಅವತರಿಣೆಕೆಯೂ ಜುಲೈ ೩೧ರಂದು ಬಿಡುಗಡೆಯಾಗಲಿದೆ.

SCROLL FOR NEXT