ಖ್ಯಾತ ನಟ ಮೋಹನ್ ಲಾಲ್ 
ಸಿನಿಮಾ ಸುದ್ದಿ

ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಮೋಹನ್ ಲಾಲ್ ಗೆ ಋಣಿ: ಕಮಲ್

ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ದೃಶ್ಯಂ' ಸಿನೆಮಾದ ತಮಿಳು ಅವತರಿಣಿಕೆಗೆ ಕಮಲ್ ಹಾಸನ್ ಸೂಕ್ತರು ಎಂದು ಹೇಳಿದ್ದು ಖ್ಯಾತ ನಟ ಮೋಹನ್ ಲಾಲ್

ಚೆನ್ನೈ: ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ದೃಶ್ಯಂ' ಸಿನೆಮಾದ ತಮಿಳು ಅವತರಿಣಿಕೆಗೆ ಕಮಲ್ ಹಾಸನ್ ಸೂಕ್ತರು ಎಂದು ಹೇಳಿದ್ದು ಖ್ಯಾತ ನಟ ಮೋಹನ್ ಲಾಲ್ ಅಂತೆ. ಇದಕ್ಕೆ ಕಮಲ್, ಮೋಹನ್ ಲಾಲ್ ಅವರಿಗೆ ಋಣಿ ಎಂದಿದ್ದಾರೆ.

"'ದೃಶ್ಯಂ ರಿಮೇಕ್ ನಲ್ಲಿ ನನ್ನನ್ನು ನೋಡಬೇಕೆಂದು ಮೋಹನ್ ಲಾಲ್ ಬಯಸಿದ್ದರೆಂದು ಯಾರಿಂದಲೋ ತಿಳಿದೆ. ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂದು ನನ್ನ ಹೆಸರನ್ನು ಅವರು ಶಿಫಾರಸ್ಸು ಮಾಡಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸಬೇಕೆ, ಏಕೆಂದರೆ ಇಂತಹ ಒಳ್ಳೆಯ ಸಿನೆಮಾಗಳಲ್ಲಿ ನಾನು ನಟಿಸಬೇಕು ಎಂದು ತಾರೆಗಳು ಬಯಸುವುದು ವಿರಳ" ಎಂದು ಕಮಲ್ ತಿಳಿಸಿದ್ದಾರೆ.

ದೃಶ್ಯಂ ಸಿನೆಮಾದ ರಿಮೇಕ್ 'ಪಾಪನಾಶಂ' ಸಿನೆಮಾದಲ್ಲಿ ಕಮಲ್ ಹಾಸನ್ ನಾಯಕ ನಟ. ಈ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು.

ಮೂಲ ಸಿನೆಮಾವನ್ನು ನಿರ್ದೇಶಿಸಿದ್ದ ಜಿತು ಜೋಸೆಫ್ ಅವರೇ ತಮಿಳು ಅವತರಿಣಿಕೆಯನ್ನು ನಿರ್ದೇಶಿಸಿದ್ದರು.

ಈ ಸಿನೆಮಾ ಈಗಾಗಲೇ ಕನ್ನಡ, ತೆಲುಗು ಭಾಷೆಗಳಲ್ಲೂ ರಿಮೇಕ್ ಆಗಿದ್ದು ಹಿಂದಿ ಭಾಷೆಯಲ್ಲಿ ಅಜಯ್ ದೇವಗನ್ ನಟನೆಯ ಅವತರಿಣೆಕೆಯೂ ಜುಲೈ ೩೧ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ