ಸುಗಮ ಸಂಗೀತಗಾರ್ತಿ ಮತ್ತು ಹಿನ್ನಲೆ ಸಂಗೀತಕಾರ್ತಿ ಎಂ ಡಿ ಪಲ್ಲವಿ 
ಸಿನಿಮಾ ಸುದ್ದಿ

ಆಯ್ಕೆ ಮಾಡಿದ್ದೇ ಬೇರೆ; ಜೀ ಕನ್ನಡ ಪ್ರಶಸ್ತಿ ನೀಡಿದ್ದೆ ಅನ್ಯರಿಗೆ; ಎಂಡಿ ಪಲ್ಲವಿ ಆರೋಪ

ಜೀ ಕನ್ನಡ ಸುದ್ದಿ ವಾಹಿನಿಯ ಸಂಗೀತ ಪ್ರಶಸ್ತಿಗಳು ಘೋಷಣೆಯಾದ ಬೆನ್ನಲ್ಲೇ ಸಂಗೀತ ಸ್ಪರ್ಧೆಯ ತೀರ್ಪುಗಾರ್ತಿಯಾಗಿದ್ದ ಸುಗಮ ಸಂಗೀತಗಾರ್ತಿ ಮತ್ತು

ಬೆಂಗಳೂರು: ಜೀ ಕನ್ನಡ ಸುದ್ದಿ ವಾಹಿನಿಯ ಸಂಗೀತ ಪ್ರಶಸ್ತಿಗಳು ಘೋಷಣೆಯಾದ ಬೆನ್ನಲ್ಲೇ ಸಂಗೀತ ಸ್ಪರ್ಧೆಯ ತೀರ್ಪುಗಾರ್ತಿಯಾಗಿದ್ದ ಸುಗಮ ಸಂಗೀತಗಾರ್ತಿ ಮತ್ತು ಹಿನ್ನಲೆ ಸಂಗೀತಕಾರ್ತಿ ಎಂ ಡಿ ಪಲ್ಲವಿ, ನಾವು ಆಯ್ಕೆ ಮಾಡದ ಅಭ್ಯರ್ಥಿಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ದೂರಿದ್ದಾರೆ.

ತಮ್ಮ ಫೇಸ್ಬುಕ್ ಪುಟದಲ್ಲಿ ಈ ವಿಷಯವನ್ನು ಎಂ ಡಿ ಪಲ್ಲವಿ ಬರೆದುಕೊಂಡಿದ್ದು "ನಾನು ಇಂತಹ ಸ್ಪರ್ಧೆಗೆ ತೀರ್ಪುಗಾರ್ತಿಯಾಗಿದ್ದು ಇದೆ ಮೊದಲು. ಆದರೆ ಕೆ ಎಸ್ ಎಲ್ ಸ್ವಾಮಿ ಅವರಿಗೆ ೫೦ ವರ್ಷದ ಅನುಭವವಿದೆ ಹಾಗೂ ಇಂತಹ ಎಷ್ಟೋ ಸ್ಪರ್ಧೆಗಳಲ್ಲಿ ಅವರು ತೀರ್ಪುಗಾರರಾಗಿದ್ದಾರೆ. ನಂದಿತಾ ರಾಕೇಶ್ ಅವರು ೧೫-೧೬ ವರ್ಷಗಳಿಂದ ಹಾಡುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶವನ್ನು ತಿದ್ದಲು ಸುದ್ದಿವಾಹಿನಿ ತೀರ್ಪುಗಾರರ ಅನುಮತಿ ಕೇಳಲಿಲ್ಲ ಮತ್ತು ನಮಗೆ ಇದನ್ನು ತಿಳಿಸಲು ಇಲ್ಲ. ನಾವು ಸ್ಪಷ್ಟನೆ ಕೇಳಿದರೆ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದಿದ್ದಾರೆ ಪಲ್ಲವಿ.

"ಮಂಗಳವಾರ ನಾನು ಪ್ರದರ್ಶನ ನೀಡಬೇಕಿದ್ದರಿಂದ ನಾನು ಬೇಗನೆ ಹೊರಟೆ. ಆದರೆ ಅವರಿಬ್ಬರೂ ಸುದ್ದಿವಾಹಿನಿಯನ್ನು ಪ್ರಶ್ನಿಸಿದ್ದಾರೆ" ಎಂದಿರುವ ಅವರು "ನಾನು ಕಳೆದ ಎರಡು ದಿನಗಳಿಂದ ಅವರಿಗೆ ಸಂದೇಶ ಕಳುಹಿಸುತ್ತಿದ್ದು, ಅವರು ಇನ್ನೂ ಪ್ರತಿಕ್ರಿಯಿಸಿಲ್ಲ" ಎಂದಿದ್ದಾರೆ.

ತೀರ್ಪುಗಾರರು ಆಯ್ಕೆ ಮಾಡಿದ ಹೆಸರುಗಳನ್ನೂ ಬಹಿರಂಗಪಡಿಸದ ಪಲ್ಲವಿ "ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಪ್ರಶಸ್ತಿ ಸಿಗದೇ ಹೋದದ್ದು ಅನ್ಯಾಯ ಅಲ್ಲದೆ ಸುದ್ದಿ ವಾಹಿನಿ ತಿದ್ದಿರುವ ಹೆಸರುಗಳನ್ನು ನಾವೇ ಸೂಚಿಸಿದ್ದೇವೆ ಎಂದು ಹೇಳುವುದು ಸರಿಯಲ್ಲ. ಇದಕ್ಕೆ ತೀರ್ಪುಗಾರರು ಏಕೆ ಬೇಕು" ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜೀ ಕನ್ನಡ ವಾಹಿನಿಯ ಪ್ರಧಾನ ಕಾರ್ಯಕ್ರಮ ನಿರ್ವಾಹಕ ರಾಘವೇಂದ್ರ ಹುಣುಸೂರು "ನಮ್ಮ ತಂಡ ಎಂ ಡಿ ಪಲ್ಲವಿಯವರೊಂದಿಗೆ ಮಾತನಾಡಿದೆ. ಸುದ್ದಿವಾಹಿನಿಯ ತೀರ್ಪುಗಾರರ ಜೊತೆಗೆ ನಿರ್ದೇಶಕ ಎಸ್ ನಾರಾಯಣ್ ನೀಡುವ ಅಂಕಗಳನ್ನು ಪರಿಗಣಿಸಲಾಗುವುದು ಎಂದು ತೀರ್ಪುಗಾರರಿಗೆ ತಿಳಿಸಲಾಗಿತ್ತು ಎಂದಿರುವ ಅವರು ಹೆಚ್ಚೇನು ಬದಲಾವಣೆಗಳನ್ನು ನಾವು ಮಾಡಿಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?