'ರಂಗಿತರಂಗ' ನಟ ನಿರುಪ್ ಭಂಢಾರಿ 
ಸಿನಿಮಾ ಸುದ್ದಿ

'ರಂಗಿತರಂಗ' ಸಹೋದರರು ಹೊಸ ಯೋಜನೆಗೆ ಸಿದ್ಧತೆ

ಅನೂಪ್ ಭಂಢಾರಿ ಅವರ ಚೊಚ್ಚಲ ನಿರ್ದೇಶನದ ಹಾರರ್-ಥ್ರಿಲ್ಲರ್ ಸಿನೆಮಾ 'ರಂಗಿತರಂಗ' ಪರಭಾಷಾ ಸಿನೆಮಾಗಳ ಹಾವಳಿಗೂ ಬಗ್ಗದೆ ಮುನ್ನಡೆದು ಕನ್ನಡ

ಬೆಂಗಳೂರು: ಅನೂಪ್ ಭಂಢಾರಿ ಅವರ ಚೊಚ್ಚಲ ನಿರ್ದೇಶನದ ಹಾರರ್-ಥ್ರಿಲ್ಲರ್ ಸಿನೆಮಾ 'ರಂಗಿತರಂಗ' ಪರಭಾಷಾ ಸಿನೆಮಾಗಳ ಹಾವಳಿಗೂ ಬಗ್ಗದೆ ಮುನ್ನಡೆದು ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸಿದ ಸಿನೆಮಾ.

ಇದರಿಂದ ಉತ್ತೇಜಿತರಾಗಿರುವ ಅನೂಪ್, ಸಹೋದರ ನಟ ನಿರುಪ್ ಭಂಢಾರಿ ಅವರೊಂದಿಗೆ ಕೂಡಿ ಹೊಸ ಸ್ಕ್ರಿಪ್ಟ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದು 'ರಂಗಿತರಂಗ' ವಿಷಯಕ್ಕಿಂತ ಸಂಪೂರ್ಣ ವಿಭಿನ್ನವಾಗಿರುತ್ತಂತೆ. "ಸದಕ್ಕೆ ನನ್ನ ಬಳಿ ಎರಡು ಸ್ಕ್ರಿಪ್ಟ್ ಗಳಿವ್ಗೆ - ಒಂದು ರೊಮ್ಯಾಂಟಿಕ್ ಹಾಸ್ಯ ಮತ್ತೊಂದು ಸಂಪೂರ್ಣ ಹಾಸ್ಯ. ನನ್ನ ಎರಡನೇ ಸಿನೆಮಾಗೆ ಸಂಪೂರ್ಣ ವಿಭಿನ್ನ ವಿಷಯದ ಜೊತೆ ಕೆಲಸ ಮಾಡಬೇಕೆಂದೇ ಗ್ರಹಿಸಿದ್ದೆ. ಮುಂದಿನ ಒಂದೂವರೆ ತಿಂಗಳಲ್ಲಿ ಚಿತ್ರೀಕರಣದ ಮೊದಲ ಕೆಲಸಗಳು ಪ್ರಾರಂಭವಾಗಲಿವೆ. ಸದ್ಯಕ್ಕೆ ನಿರುಪ್ ಮುಖ್ಯಪಾತ್ರಧಾರಿ ಎಂದು ನಿಶ್ಚಯಿಸಿದ್ದೇನೆ" ಎನ್ನುತ್ತಾರೆ.

ಸದ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಬಾಹುಬಲಿ ಹಾವಳಿಯಿಂದ ಚಿತ್ರಮಂದಿರಗಳಿಂದ ಹೊರಹಾಕಿದ್ದ ರಂಗಿತರಂಗ ಸಿನೆಮಾವನ್ನು ಮತ್ತೆ ಹಾಕುವಂತೆ ಚಿತ್ರಮಂದಿರ ಮಾಲಿಕರಿಗೆ ಮನವಿ ಮಾಡುತ್ತಿದ್ದಾರಂತೆ. ಈ ಸಿನೆಮಾ ಕರ್ನಾಟಕದ ಪ್ರತಿ ಹಳ್ಳಿಯನ್ನು ತಲುಪಬೇಕು ಎನ್ನುತ್ತಾರೆ ಅನುಪ್.

ವಿದೇಶಿ ಪ್ರೇಕ್ಷಕರು 'ರಂಗಿತರಂಗ' ನೋಡಲು ಬೇಡಿಕೆ ಸಲ್ಲಿಸುತ್ತಿರುವುದು ನಿರ್ದೇಶಕನಿಗೆ ಅತೀವ ಸಂತಸ ನೀಡಿದೆಯಂತೆ. ಯೂರೋಪಿನಲ್ಲಿ ಆಗಸ್ಟ್ ೧ ರಂದು ಸಿನೆಮಾ ಬಿಡುಗಡೆ ಕಾಣಲಿದೆ. ನಂತರ ಕೆನಡಾ, ನ್ಯೂಜೀಲ್ಯಾಂಡ್, ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ಸಿನೆಮಾ ಬಿಡುಗಡೆ ಕಾಣಲಿದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT