ಉಪ್ಪಿ೨ ಭಿತ್ತಿಚಿತ್ರ 
ಸಿನಿಮಾ ಸುದ್ದಿ

ಸೆನ್ಸಾರ್ ಮಂಡಲಿ ಹೊಸ್ತಿಲಲ್ಲಿ ಉಪ್ಪಿ-೨; ಆಗಸ್ಟ್ ೧೫ಕ್ಕೆ ಬಿಡುಗಡೆ ಸಾಧ್ಯತೆ

ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಉಪ್ಪಿ-೨ ಬಿಡುಗಡೆ ಮಾಡಲು ನಿರ್ದೇಶಕ ನಟ ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಉಪ್ಪಿ-೨ ಬಿಡುಗಡೆ ಮಾಡಲು ನಿರ್ದೇಶಕ ನಟ ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಆಗಸ್ಟ್ ೧೫ಕ್ಕೆ ಸಿನೆಮಾ ಬಿಡುಗಡೆ ಮಾಡಲು ಸಹಕರಿಸುವಂತೆ ಈ ನಿರ್ದೇಶಕ ಸುಮಾರು ಎಂಟು ನಿರ್ಮಾಪಕ-ನಿರ್ದೇಶಕರನ್ನು ತಮ್ಮ ಸಿನೆಮಾದ ಸೆನ್ಸಾರ್ ವಿಳಂಬ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಅವುಗಳಲ್ಲಿ ಆರ್ ಎಕ್ಸ್ ಸೂರಿ ಮತ್ತು ಕೆಂಡಸಂಪಿಗೆ ಸಿನೆಮಾಗಳು ಕೂಡ ಸೇರಿವೆ.

ಉಪ್ಪಿ-೨ ಆಡಿಯೋ ಬಿಡುಗಡೆಯಾದಾಗಿನಿಂದ, ಹಲವಾರು ವಿವಾದಗಳೊಂದಿಗೆ ಜನರ ಕುತೂಹಲ ಕೆರಳಿಸಿದೆ. ಒಳ್ಳೆಯ ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಅಧಿಕೃತವಾಗಿ ಇನ್ನೂ ಬಹಿರಂಗವಾಗದೇ ಹೋದರೂ ಬಲ್ಲ ಮೂಲಗಳ ಪ್ರಕಾರ ಮಂಡ್ಯಾದ ಸಿನೆಮಾ ಮಂದಿರಗಳ ಮಾಲಿಕ ಶ್ರೀಕಾಂತ್ ೧೦ ಕೋಟಿಗೆ ಉಪ್ಪಿ-೨ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿ-೨ ಸಿನೆಮಾದ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ. ಉಪೇಂದ್ರ ಜೊತೆಗೆ ಅಖೀವಾ ಯಾದವ್ ಮತ್ತು ಪರುಲ್ ಯಾದವ್ ಸಹ ನಟಿಯರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT