ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ 
ಸಿನಿಮಾ ಸುದ್ದಿ

ದ್ವಿಭಾಷಾ ಚಲನಚಿತ್ರದಲ್ಲಿ ಸುದೀಪ್ ಒಟ್ಟಿಗೆ ನಿತ್ಯಾ ಮೆನನ್

ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರಿಡದ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಆಯ್ಕೆಯಾಗಿದ್ದಾರೆ. ನಾಯಕ ನಟನಾಗಿ ಸುದೀಪ್

ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರಿಡದ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಆಯ್ಕೆಯಾಗಿದ್ದಾರೆ. ನಾಯಕ ನಟನಾಗಿ ಸುದೀಪ್ ಅಭಿನಯಿಸಲಿದ್ದಾರೆ.

ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ. ಮಲಯಾಳಮ್, ತೆಲುಗು, ತಮಿಳು ಮತ್ತು ಕನ್ನಡ ಭಾಷೆಯ ಪ್ರೇಕ್ಷಕರಿಗೆ ನಿತ್ಯಾ ಪರಿಚಿತ ನಟಿಯೇ!

ನಿತ್ಯಾ ಅವರ ಹಿಂದಿನ ಚಿತ್ರ 'ಓ ಕಾದ್ಹಲ್ ಕಣ್ಮಣಿ' ಯಶಸ್ಸು ಕಂಡ ಚಿತ್ರ. ಈಗ ಅವರು ತೆಲುಗು ಚಿತ್ರ 'ರುದ್ರಮಾದೇವಿ'ಯಲ್ಲಿ ಅನುಷ್ಕಾ ಶೆಟ್ಟಿ ಅವರೊಂದಿಗೆ ನಟಿಸಿದ್ದಾರೆ.

ಸುದೀಪ್ ಅವರು 'ಬಾಹುಬಲಿ' ಸಿನೆಮಾದಲ್ಲಿ ಅತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಎರಡನೇ ಭಾಗದಲ್ಲಿ ದೊಡ್ಡ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ರಾಜಮೌಳಿ ಅವರು ತಿಳಿಸಿದ್ದರು. 'ರನ್ನ' ತೆಲುಗು ರಿಮೇಕ್ ಕೂಡ ಸಾಧಾರಣ ಯಶಸ್ಸು ಕಂಡ ಸಿನೆಮಾ. ವಿಜಯ್ ಅವರ ತಮಿಳು ಸಿನೆಮಾ 'ಪುಲಿ'ಯಲ್ಲಿ ಕೂಡ ಸುದೀಪ್ ನಟಿಸಿದ್ದಾರೆ.

ಕನ್ನಡ ಮತ್ತು ಇತರ ಭಾಷೆಗಳಲ್ಲೂ ಅಪಾರ ಬೇಡಿಕೆಯಲ್ಲಿರುವ ಒಬ್ಬನೇ ಕನ್ನಡದ ನಟ ಸುದೀಪ್. ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ನೂತನ ಸಿನೆಮಾ ತಂಡವನ್ನು ಸುದೀಪ್ ಸೇರಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT