ಸಿನಿಮಾ ಸುದ್ದಿ

ದ್ವಿಭಾಷಾ ಚಲನಚಿತ್ರದಲ್ಲಿ ಸುದೀಪ್ ಒಟ್ಟಿಗೆ ನಿತ್ಯಾ ಮೆನನ್

Guruprasad Narayana

ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರಿಡದ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಆಯ್ಕೆಯಾಗಿದ್ದಾರೆ. ನಾಯಕ ನಟನಾಗಿ ಸುದೀಪ್ ಅಭಿನಯಿಸಲಿದ್ದಾರೆ.

ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ. ಮಲಯಾಳಮ್, ತೆಲುಗು, ತಮಿಳು ಮತ್ತು ಕನ್ನಡ ಭಾಷೆಯ ಪ್ರೇಕ್ಷಕರಿಗೆ ನಿತ್ಯಾ ಪರಿಚಿತ ನಟಿಯೇ!

ನಿತ್ಯಾ ಅವರ ಹಿಂದಿನ ಚಿತ್ರ 'ಓ ಕಾದ್ಹಲ್ ಕಣ್ಮಣಿ' ಯಶಸ್ಸು ಕಂಡ ಚಿತ್ರ. ಈಗ ಅವರು ತೆಲುಗು ಚಿತ್ರ 'ರುದ್ರಮಾದೇವಿ'ಯಲ್ಲಿ ಅನುಷ್ಕಾ ಶೆಟ್ಟಿ ಅವರೊಂದಿಗೆ ನಟಿಸಿದ್ದಾರೆ.

ಸುದೀಪ್ ಅವರು 'ಬಾಹುಬಲಿ' ಸಿನೆಮಾದಲ್ಲಿ ಅತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಎರಡನೇ ಭಾಗದಲ್ಲಿ ದೊಡ್ಡ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ರಾಜಮೌಳಿ ಅವರು ತಿಳಿಸಿದ್ದರು. 'ರನ್ನ' ತೆಲುಗು ರಿಮೇಕ್ ಕೂಡ ಸಾಧಾರಣ ಯಶಸ್ಸು ಕಂಡ ಸಿನೆಮಾ. ವಿಜಯ್ ಅವರ ತಮಿಳು ಸಿನೆಮಾ 'ಪುಲಿ'ಯಲ್ಲಿ ಕೂಡ ಸುದೀಪ್ ನಟಿಸಿದ್ದಾರೆ.

ಕನ್ನಡ ಮತ್ತು ಇತರ ಭಾಷೆಗಳಲ್ಲೂ ಅಪಾರ ಬೇಡಿಕೆಯಲ್ಲಿರುವ ಒಬ್ಬನೇ ಕನ್ನಡದ ನಟ ಸುದೀಪ್. ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ನೂತನ ಸಿನೆಮಾ ತಂಡವನ್ನು ಸುದೀಪ್ ಸೇರಬೇಕಿದೆ.

SCROLL FOR NEXT