ತಾಪ್ಸೀ ಪನ್ನು 
ಸಿನಿಮಾ ಸುದ್ದಿ

ನಾಗಶೇಖರ್ ಮುಂದಿನ ಸಿನೆಮಾದಲ್ಲಿ ತಾಪ್ಸೀ ಪನ್ನು

ಪರಭಾಷಾ ನಟಿಯರನ್ನು ಕನ್ನಡಕ್ಕೆ ತರುವುದರಲ್ಲಿ ನಿಸ್ಸೀಮರಾದ ನಾಗಶೇಖರ್, ನಾಲ್ಕು ಭಾಷೆಗಳಲ್ಲಿ ನಿರ್ದೇಶಿಸುತ್ತಿರುವ ತಮ್ಮ ಮುಂದಿನ ಸಿನೆಮಾಗೆ

ಬೆಂಗಳೂರು: ಪರಭಾಷಾ ನಟಿಯರನ್ನು ಕನ್ನಡಕ್ಕೆ ತರುವುದರಲ್ಲಿ ನಿಸ್ಸೀಮರಾದ ನಾಗಶೇಖರ್, ನಾಲ್ಕು ಭಾಷೆಗಳಲ್ಲಿ ನಿರ್ದೇಶಿಸುತ್ತಿರುವ ತಮ್ಮ ಮುಂದಿನ ಸಿನೆಮಾಗೆ ತಾಪ್ಸೀ ಪನ್ನು ಅವರನ್ನು ಕರೆತಂದಿದ್ದಾರೆ. ತಮ್ಮದೇ ಚಿತ್ರ 'ಮೈನಾ'ಗೆ ಈ ಹಿಂದೆ ನಿತ್ಯಾ ಮೆನನ್ ಅವರನ್ನು ಕರೆತಂದಿದ್ದರು.

ನಿರ್ಮಾಪಕ ಕೆ ಪಿ ಶ್ರೀಕಾಂತ್ ಜೊತೆ ಚನ್ನೈಗೆ ತೆರಳಿ ನಟಿ ಪನ್ನು ಅವರಿಗೆ ಕಥೆ ಹೇಳಿರುವ ನಾಗಶೇಖರ್ "ಸ್ಕ್ರಿಪ್ಟಿಂಗ್ ನಿಂದಲೂ ನನ್ನ ತಲೆಯಲ್ಲಿ ತಾಪ್ಸೀ ಅವರೇ ಇದ್ದರು. ಅವರು ಕಥೆಯನ್ನು ಮೆಚ್ಚಿದ್ದಾರೆ. ಮತ್ತು ಹಸಿರು ನಿಶಾನೆ ತೋರಿದ್ದಾರೆ. ಇನ್ನುಳಿದದ್ದನ್ನು ನಿರ್ಮಾಪಕರು ಮುಂದುವರೆಸುತ್ತಾರೆ" ಎಂದಿದ್ದಾರೆ.

ನಾಲ್ಕೂ ಭಾಷೆಗಳಲ್ಲಿ ತಾಪ್ಸೀ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ನಟಿಸುತ್ತಿರುವ ಚೇತನ್ ಮಲೆಯಾಳಮ್ ನಲ್ಲೂ ಪಾದಾರ್ಪಣೆ ಮಾಡಲಿದ್ದಾರೆ. "ನನ್ನ ಮುಂದಿನ ನಡೆ ತೆಲುಗು ಮತ್ತು ತಮಿಳು ಅವತರಿಣಿಕೆಗಳಿಗೆ ನಾಯಕ ನಟರನ್ನು ಆಯ್ಕೆ ಮಾಡುವುದು. ನನಗೆ ಸಿದ್ಧಾರ್ಥ್ ಅಥವಾ ದಲ್ಕ್ವೇರ್ ಸಲ್ಮಾನ್ ಅವರ ಜೊತೆ ಕೆಲಸ ಮಾಡುವಾಸೆ. ಸಿದ್ಧಾರ್ಥ್ ಜೊತೆ ಮಾತನಾಡಲು ಚೆನ್ನೈಗೆ ಮತ್ತೆ ತೆರಳುತ್ತಿದ್ದೇನೆ. ಅವರು ಸೇರಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ" ಎನ್ನುತ್ತಾರೆ.

ಸೆಪ್ಟಂಬರ್ ನಲ್ಲಿ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಮಿಳು ಶೀರ್ಷಿಕೆ ಎಥಿರ್ಗಾಳಂ ಎಂದೂ ಮತ್ತು ತೆಲುಗಿನಲ್ಲಿ ಅಪ್ಪಡಪ್ಪಡು ಎಂದಿದೆ. ಕನ್ನಡ ಮತ್ತು ಮಲಯಾಳಮ್ ಭಾಷೆಗಳಿಗೆ ಒಳ್ಳೆಯ ಶೀರ್ಷಿಕೆಯ ಹುಡುಕಾಟದಲ್ಲಿದ್ದಾರೆ ನಾಗಶೇಖರ್. "ತಾಪ್ಸೀ ಅವರನ್ನು ಸಿನೆಮಾದಲ್ಲಿ ನಟಿಸುವಂತೆ ಕೇಳಿಕೊಳ್ಳುವುದು ನನ್ನ ಪ್ರಥಮ ಆದ್ಯತೆಯಾಗಿತ್ತು. ಈಗ ಅದು ಮುಗಿದಿದೆ. ತಂತ್ರಜ್ಞರನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಭಾಷೆಗಳಿಗೂ ಸಲ್ಲುವ ಸಿನೆಮ್ಯಾಟೋಗ್ರಫರ್ ಮತ್ತು ಸಂಗೀತ ನಿರ್ದೇಶಕನ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ ನಿರ್ದೇಶಕ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT