ಸಿನಿಮಾ ಸುದ್ದಿ

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ ಚಾಲೆಂಜಿಂಗ್ ಸ್ಟಾರ್

Vishwanath S

ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆಲ ದಿನ ಚಿತ್ರರಂಗ ಜಂಜಾಟಗಳಿಂದ ದೂರವಿರಲಿದ್ದು, ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ದರ್ಶನ್ ಶ್ರೀರಾಮಪುರಂ ದೇವಸ್ಥಾನದಲ್ಲಿ ಇರುಮಡಿ ಕಟ್ಟಿಕೊಂಡು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದರ್ಶನ್ ಇರುಮುಡಿ ಕಟ್ಟಿಸಿಕೊಂಡು ಅಯ್ಯಪ್ಪನ ಸನ್ನಿಧಿಗೆ ತೆರೆಳಿದರು.

ದರ್ಶನ್ ಜೊತೆ ನಾಗ ಕಿರಣ್, ಧರ್ಮ ಕೀರ್ತಿರಾಜ್ ಸೇರಿದಂತೆ ಬರೋಬ್ಬರಿ 26 ಮಂದಿ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದಾರೆ. ನಾಳೆ ದರ್ಶನ್ ಅಯ್ಯಪ್ಪನ ದರ್ಶನ ಪಡೆದು ನಂತರ ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ಕೊಡಲಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

SCROLL FOR NEXT