ಸುದೀಪ್ 
ಸಿನಿಮಾ ಸುದ್ದಿ

ಸೊಕ್ಕಿಗೆ ಸಿದ್ಧನಾದ 'ರಿಮೇಕ್' ರನ್ನ

ರಿಮೇಕ್ ಗಳ ಸುರಿಮಳೆಯನ್ನೇ ಸುರಿಸುತ್ತಿರುವ ಕನ್ನಡದ ಕಿಚ್ಚ ಸುದೀಪ್ ಮಾಣಿಕ್ಯ (ತೆಲುಗು: ಮಿರ್ಚಿ) ಮತ್ತು ರನ್ನ (ತೆಲುಗು: ಅತ್ತಾರಿಂಟಿಕಿ ದಾರೇಧಿ) ಸಿನೆಮಾಗಳ ಯಶಸ್ಸನ್ನು

ಬೆಂಗಳೂರು: ರಿಮೇಕ್ ಗಳ ಸುರಿಮಳೆಯನ್ನೇ ಸುರಿಸುತ್ತಿರುವ ಕನ್ನಡದ ಕಿಚ್ಚ ಸುದೀಪ್ ಮಾಣಿಕ್ಯ (ತೆಲುಗು: ಮಿರ್ಚಿ) ಮತ್ತು ರನ್ನ (ತೆಲುಗು: ಅತ್ತಾರಿಂಟಿಕಿ ದಾರೇಧಿ) ಸಿನೆಮಾಗಳ ಯಶಸ್ಸನ್ನು ಮುಂದುವರೆಸಲು ಈಗ ೨೦೧೩ ರ ಮತ್ತೊಂದು ತೆಲುಗು ಸಿನೆಮಾ 'ಬಲುಪು' (ಕನ್ನಡ ಅರ್ಥ: ಸೊಕ್ಕು) ಕನ್ನಡ ಅವತರಿಣಿಕೆಗೆ ಸಿದ್ಧರಾಗುತ್ತಿದ್ದಾರೆ.

ಮೂಲಗಳ ಪ್ರಕಾರ ಈ ಸಿನೆಮಾದ ನಿರ್ಮಾಪಕ ಎನ್ ಕುಮಾರ್ ಮಂಗಳವಾರ ಹೈದರಾಬಾದ್ ಗೆ ದೌಡಾಯಿಸಿದ್ದು ರಿಮೇಕ್ ಹಕ್ಕುಗಳನ್ನು ಕೊಳ್ಳುವುದಕ್ಕೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಚಲನಚಿತ್ರದ ಮುಹೂರ್ತ ಮಾಣಿಕ್ಯ ನಟನ ಹುಟ್ಟುಹಬ್ಬದ ದಿನ ಸೆಪ್ಟಂಬರ್ ೨ ಕ್ಕೆ ನಡೆಯಲಿದೆ.

ಈ ಸಿನೆಮಾವನ್ನು ಸುದೀಪ್ ಅವರೇ ನಿರ್ದೇಶಿಸಲಿದ್ದು, ಮೂಲದಲ್ಲಿ ಪ್ರಕಾಶ್ ರಾಜ್ ಮಾಡಿದ ಪಾತ್ರವನ್ನು ಕನ್ನಡ ಅವತರಿಣಿಕೆಯಲ್ಲಿ ಮತೊಬ್ಬ ರಿಮೇಕ್ ಸ್ಪೆಷಲಿಸ್ಟ್ ರವಿಚಂದ್ರನ್ ನಿರ್ವಹಿಸಲಿದ್ದಾರೆ ಎಂದು ತಿಳಿಯಲಾಗಿದೆ.

ಈ ನಡುವೆ ಸುದೀಪ್ ಅವರು ಎರಡು ಯೋಜನೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಎಸ್ ಕೃಷ್ಣ ಅವರ 'ಹೆಬ್ಬುಲಿ' ಮತ್ತು ಇನ್ನು ಹೆಸರಿಡಬೇಕಾದ ಕೆ ಎಸ್ ರವಿ ಕುಮಾರ್ ಅವರ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ನಂತರ ಮಿಲನ ಪ್ರಕಾಶ್ ಅವರ ಸಿನೆಮಾವೊಂದರಲ್ಲಿ ನಟಿಸಲಿದ್ದಾರೆ. ಜಿಗರ್ಥಂಡದ ರಿಮೇಕ್ ಸಿನೆಮಾವನ್ನು ಸುದೀಪ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT