ಕಾಕ ಮುಟ್ಟೈ ಸಿನೆಮಾದ ಒಂದು ದೃಶ್ಯ 
ಸಿನಿಮಾ ಸುದ್ದಿ

'ಕಾಕ ಮುಟ್ಟೈ'ನಲ್ಲಿ ವಕೀಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಿರ್ಮಾಪಕರಿಗೆ ಸಮನ್ಸ್

ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕ ಮುಟ್ಟೈ'ನಲ್ಲಿ ವಕೀಲರ ಬಗ್ಗೆ ಆಕ್ಷೇಪಾರ್ಹ ಸಂಬಾಷಣೆ ಇದೆ ಎಂದು ವಕೀಲರ ಸಂಘ ದೂರಿರುವ ಹಿನ್ನಲೆಯಲ್ಲಿ ಮೆಟ್ರೋಪಾಲಿಟನ್

ಚೆನ್ನೈ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನೆಮಾ 'ಕಾಕ ಮುಟ್ಟೈ'ನಲ್ಲಿ ವಕೀಲರ ಬಗ್ಗೆ ಆಕ್ಷೇಪಾರ್ಹ ಸಂಬಾಷಣೆ ಇದೆ ಎಂದು ವಕೀಲರ ಸಂಘ ದೂರಿರುವ ಹಿನ್ನಲೆಯಲ್ಲಿ ಮೆಟ್ರೋಪಾಲಿಟನ್ ಮೆಜೆಸ್ಟ್ರೆಟ್ ನ್ಯಾಯಾಲಯ ನಿರ್ಮಾಪಕರುಗಳಾದ ನಟ ಧನುಶ್ ಹಾಗೂ ವೆಟ್ರಿಮಾರನ್ ಮತ್ತು ನಿರ್ದೇಶಕ ಎಂ ಮಣಿಕಂಠನ್ ಅವರಿಗೆ ಸಮನ್ಸ್ ನೀಡಿ ಆಗಸ್ಟ್ ೬ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಅಖಿಲ ಭಾರತ ವಕೀಲರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ ಮಣಿವಣ್ಣನ್ ಅವರು ದೂರಿರುವಂತೆ ಸಿನೆಮಾದಲ್ಲಿನ ಅಜ್ಜಿ ಪಾತ್ರಧಾರಿ ವಕೀಲರ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಅರ್ಜಿದಾರರ ವಕೀಲ ಎಸ್ ನಮೋ ನಾರಾಯಣನ್ ಅವರ ಸಲ್ಲಿರುವ ಅರ್ಜಿಯಲ್ಲಿ, ವಕೀಲವೃತ್ತಿ ಬಹಳ ಗೌರವಯುತವಾದದ್ದು ಇದಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕ ಅಪಮಾನ ಎಸಗಿದ್ದಾರೆ ಎಂದು ದೂರಿದ್ದಾರೆ.

ಇಂತಹ ಸಿನೆಮಾ ದೃಶ್ಯಗಳು ಕಕ್ಷಿದಾರ ಮತ್ತು ವಕೀಲರ ನಡುವೆ ವೈರತ್ವ, ದ್ವೇಷ ಮತ್ತು ಕಹಿ ಭಾವನೆ ಹರಡುತ್ತದೆ ಎಂದು ದೂರಿರುವ ಅರ್ಜಿದಾರ ದೂರನ್ನು ಪರಿಶೀಲಿಸಿ ಆಪಾದಿತರನ್ನು ಪರೀಕ್ಷಿಸಿ,  ತನಿಖೆ ಮಾಡಿ, ನ್ಯಾಯ ನೀಡಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT