'ಲಿಂಗಾ' ಚಿತ್ರದಲ್ಲಿ ನಟ ರಜನಿಕಾಂತ್ 
ಸಿನಿಮಾ ಸುದ್ದಿ

'ಲಿಂಗಾ' ವಿವಾದಗಳ ಸುತ್ತ ಹೆಣೆದಿರುವ 'ಸ್ಪೂಫ್' ಚಿತ್ರ: 'ನಾನುಂ ಹೀರೋಧಾನ್'

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಲಿಂಗಾ' ಸಿನೆಮಾದ ಸುತ್ತಲೂ ಇದ್ದ ವಿವಾದಗಳು ಈಗ ಸ್ಪೂಫ್ ಸಿನೆಮಾ ಆಗಲಿದೆ. 'ನಾನುಂ ಹೀರೋಧಾನ್'

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಲಿಂಗಾ' ಸಿನೆಮಾದ ಸುತ್ತಲೂ ಇದ್ದ ವಿವಾದಗಳು ಈಗ ಸ್ಪೂಫ್ ಸಿನೆಮಾ ಆಗಲಿದೆ. 'ನಾನುಂ ಹೀರೋಧಾನ್' ಎಂಬ ಹೆಸರಿನ ಸಿನೆಮಾಗೆ ನಾಯಕ ನಟ ಪವರ್ ಸ್ಟಾರ್ ಶ್ರೀನಿವಾಸನ್.

"ಶುಕ್ರವಾರ ಸಿನೆಮಾದ ಅಧಿಕೃತ ಅನಾವರಣವಾಗಿದೆ. ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ಮೂಲಗಳು ತಿಳಿಸಿದೆ.

ಹಲವು ತಮಿಳು ಸಿನೆಮಾಗಳನ್ನು ಸ್ಪೂಫ್ ಮಾಡಿ ಮಾಡಲಾಗಿದ್ದ 'ತಮಿಳು ಪದಮ್' ಸಿನೆಮಾ ಮಾದರಿಯಲ್ಲೇ ಈ ಸಿನೆಮಾ ಇರಲಿದೆ ಎನ್ನಲಾಗಿದೆ.

'ಲಿಂಗಾ' ಸಿನೆಮಾದ ವಿತರಕರೊಬ್ಬರಾದ ಸಿಂಗಾರವೇಲನ್ ಈ ಸ್ಪೂಫ್ ಸಿನೆಮಾದ ನಿರ್ಮಾಪಕ ಮತ್ತು ಈ ಸಿನೆಮಾವನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಮಾಪಕ ಚಿಂತಿಸುತ್ತಿದ್ದಾರಂತೆ!

"ಲಿಂಗಾ' ಸಿನೆಮಾ ವಿತರಿಸಿ ಕೈಸುಟ್ಟಿಕೊಂಡ ಎಲ್ಲರಿಗೂ ಸಹಾಯ ಮಾಡಬೇಕೆಂದಿದ್ದಾರೆ ನಿರ್ಮಾಪಕರು. ಆದುದರಿಂದ ಈ ಸಿನೆಮಾವನ್ನು ಉಚಿತವಾಗಿ ವಿತರಿಸಿ ವಿತರಕರು ಮತ್ತು ಚಲನಚಿತ್ರಮಂದಿರ ಮಾಲೀಕರು ಹಣ ಹಿಂಪಡೆಯಲು ಸಹಾಯ ಮಾಡಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

೨೦೧೪ ರ ರಜನಿಕಾಂತ್ ಹುಟ್ಟುಹಬ್ಬದ ದಿನ ಬಿಡುಗಡೆಯಾದ ಕೆ ಎಸ್ ರವಿಕುಮಾರ್ ನಿರ್ದೇಶನದ 'ಲಿಂಗಾ' ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಅತಿ ಹೆಚ್ಚಿನ ಮೊತ್ತ ನೀಡಿ ವಿತರಣೆಯ ಹಕ್ಕುಗಳನ್ನು ಪಡೆದಿದ್ದ ವಿತರಕರು ಬೀದಿಗಿಳಿದು ಪ್ರತಿಭಟಿಸಿದ್ದರು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಷ್ಟವನ್ನು ಹಂಚಿಕೊಳ್ಳಲು ನಿರಾಕರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT