ಅಕ್ಕಿನೇನಿ ನಾಗಾರ್ಜುನ 
ಸಿನಿಮಾ ಸುದ್ದಿ

ಮುಂದಿನ ಚಿತ್ರಕ್ಕಾಗಿ ೧೫೦೦ ವರ್ಷದ ಪ್ರಾಚೀನ ದೇವಾಲಯದಲ್ಲಿ ನಾಗಾರ್ಜುನ ಚಿತ್ರೀಕರಣ

ತಮ್ಮ ಮುಂದಿನ ತೆಲುಗು ಚಿತ್ರ 'ಸೊಗ್ಗದೆ ಚಿನ್ನಿ ನಯನ'ದ ಚಿತ್ರೀಕರಣಕ್ಕೆ ನಟ-ನಿರ್ಮಾಪಕ ಅಕ್ಕಿನೇನಿ ನಾಗಾರ್ಜುನ ಮೈಸೂರಿನ

ಮೈಸೂರು: ತಮ್ಮ ಮುಂದಿನ ತೆಲುಗು ಚಿತ್ರ 'ಸೊಗ್ಗದೆ ಚಿನ್ನಿ ನಯನ'ದ ಚಿತ್ರೀಕರಣಕ್ಕೆ ನಟ-ನಿರ್ಮಾಪಕ ಅಕ್ಕಿನೇನಿ ನಾಗಾರ್ಜುನ ಮೈಸೂರಿನ ೧೫೦೦ ವರ್ಷ ಹಳೆಯ ವಿಷ್ಣು ದೇವಾಲಯಕ್ಕೆ ಬಂದಿದ್ದಾರೆ.

"ಚಿತ್ರ ತಂಡ ಸದ್ಯಕ್ಕೆ ಮೈಸೂರಿನಲ್ಲಿದೆ. ೧೫೦೦ ವರ್ಷ ಇತಿಹಾಸ ಇರುವ ವಿಷ್ಣು ದೇವಾಲಯದಲ್ಲಿ ಕೆಲವು ಅತಿಮುಖ್ಯ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಯಿತು. ರಮ್ಯ ಕೃಷ್ಣ ಮತ್ತು ನಾಗಾರ್ಜುನ ಸೇರಿದಂತೆ ಪಾತ್ರ ವರ್ಗದ ಕೆಲವು ಪ್ರಮುಖ ನಟರು ಈ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು" ಎಂದು ಮೂಲಗಳು ಐ ಎ ಎನ್ ಎಸ್ ಗೆ ತಿಳಿಸಿವೆ.

ನಾಗಾರ್ಜುನ ಪಂಚೆಯುಟ್ಟು ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟಿದ್ದಾರೆ, ರಮ್ಯ ಸುಂದರ ವಿನ್ಯಾಸದ ಸೀರೆ ಉಟ್ಟಿದ್ದರು. 'ಸೊಗ್ಗದೆ ಚಿನ್ನಿ ನಯನ' ಚಿತ್ರಕಾಗಿ ಒಂದು ದಶಕದ ನಂತರ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಕಲ್ಯಾಣ ಕೃಷ್ಣ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಿನೆಮಾ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಾಗಾರ್ಜುನ, ಮೊಮ್ಮಗ ಮತ್ತು ತಾತನ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದು, ಲಾವಣ್ಯ, ನಾಸ್ಸೇರ್, ಸಂಪತ್ ರಾಜ್ ಮತ್ತು ವೀಣಾ ಕಿಶೋರ್ ಇತರ ತಾರಾ ಬಳಗ.

ನಗರದಲ್ಲಿ ಇನ್ನೂ ಒಂದು ವಾರ ಚಿತ್ರೀಕರಣ ಮುಂದುವರಿಸಲಿದೆ ಚಿತ್ರ ತಂಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT