ಧನಂಜಯ್ ಕುಮಾರ್ ಹಾಗೂ ಶ್ರುತಿ ಹರಿಹರನ್ 
ಸಿನಿಮಾ ಸುದ್ದಿ

‘ರಾಟೆ’... ರಾಜ ರಾಣಿ ಕಥೆ ಈ ವಾರ ತೆರೆಗೆ

ಮತ್ತೊಂದು ಮನಸೆಳೆಯುವ ಸಿನಿಮಾ ರಾಟೆ. ನಿರ್ದೇಶಕ ಎ ಪಿ ಅರ್ಜುನ್ ಅವರಿಂದ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅದೇ `ರಾಟೆ'...ರಾಜ ರಾಣಿ ಕಥೆ. ಇದು ಆ ಬೀಟ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಸಿನಿಮಾ.

`ಅಂಬಾರಿ ಹಾಗೂ ಅದ್ಧೂರಿ'ಯಿಂದ ಜಯಭೇರಿ ಸಾಧಿಸಿದ ಅರ್ಜುನ್ ಅವರು ಹ್ಯಾಟ್ರಿಕ್ ಗಳಿಸುವ ಎಲ್ಲ ಸಾಧ್ಯತೆಗಳು ಇವೆ. ಇದು ಪ್ರೀತಿಯ ರಾಟೆ. ಪ್ರೀತಿಯನ್ನು ಕಾಪಾಡುವ ಪರಿಯನ್ನು ನಿರ್ದೇಶಕ ಅರ್ಜುನ್ ಅವರು ಸುಂದರವಾಗಿ ತೆರೆಯಮೇಲೆ ಬಿಡಿಸಿದ್ದಾರೆ. ಜೀವನದ ರಾಟೆ ತಿರುಗಿಸೋನು ಆ ದೇವರು. ಜೀವನ ಅಂದುಕೊಂಡ ಹಾಗೆ ಅಲ್ಲ ಎಂದು ಘಟನೆಗಳ ಮೂಲಕ ಹೇಳುತ್ತಾ ಹೋಗುತ್ತಾರೆ `ರಾಟೆ' ಚಿತ್ರದಲ್ಲಿ. ಕಥೆ, ಚಿತ್ರಕಥೆ, ಸಂಭಾಷಣೆ ಸಹ ಎ ಪಿ ಅರ್ಜುನ್ ಅವರೇ ಬರೆದಿದ್ದಾರೆ.

`ರಾಟೆ'...ರಾಜ ರಾಣಿ ಕಥೆ ಒಂದು ಮುಗ್ಧ ಪ್ರೇಮಿಗಳ ಪಯಣ. ನಿರ್ದೇಶಕರು ಈ ಸಿನಿಮಾಕ್ಕಾಗಿ ಬೆಟ್ಟ, ಗುಡ್ಡ, ಕಾಡು ಎಲ್ಲ ಸುತ್ತಿ ಬಂದಿದ್ದಾರೆ. ಕಿಚ್ಚ ಸುದೀಪ್ ಆವರು ಹಾಡಿರುವ ಹಾಡಿನ ಚಿತ್ರೀಕರಣ ದಾಂಡೇಲಿಯ ದಟ್ಟವಾದ ಕಾಡಿನಲ್ಲಿ ಕಡಿಮೆ ಬೆಳಕಿನಲ್ಲಿ ನೈಜವಾಗಿ ಛಾಯಾಗ್ರಹಣ ಮಾಡುವದಕ್ಕೆ ಹೆಸರಾದ ಸತ್ಯ ಹೆಗ್ಡೆ ಅವರು ಚಿತ್ರೀಕರಿಸಿದ್ದಾರೆ. ಚಿತ್ರದ ಐದು ಹಾಡುಗಳಿಗೆ ವಿ ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ.

ಧನಂಜಯ್ ಕುಮಾರ್ ಹಾಗೂ ಶ್ರುತಿ ಹರಿಹರನ್ ಅವರ ಮುಖ್ಯ ತಾರಾಗಣದ `ರಾಟೆ' ಚಿತ್ರಕ್ಕೆ ದೀಪು ಎಸ್ ಕುಮಾರ್ ಅವರ ಸಂಕಲನ, ರವಿವರ್ಮ ಅವರ ಸಾಹಸ ಸಂಯೋಜನೆ, ಇಮ್ರಾನ್ ಸರ್ದಾರಿಯ, ಕಲೈ ಅವರ ನೃತ್ಯ ನಿರ್ದೇಶನ, ರಾಜನ್ ಅವರ ಎಫೆಕ್ಟ್ಸ್, ಇದೆ. ಎಚ್ ಕುಮಾರ್ ಕೆಂಚನಹಳ್ಳಿ ಅವರು ಚಿತ್ರದ ಸಹ ನಿರ್ಮಾಪಕರು. ಯೋಗರಾಜ್ ಭಟ್, ಎ ಪಿ ಅರ್ಜುನ್ ಅವರ ಗೀತ ಸಾಹಿತ್ಯ ಈ ಚಿತ್ರಕ್ಕೆ ಇದೆ.
ಪೋಷಕ ಪಾತ್ರದಲ್ಲಿ ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್, ಉದಯ್, ಮೋಹನ್ ಜುನೇಜ ಹಾಗೂ ಇತರರು ಚಿತ್ರದಲ್ಲಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?