ನೀರ್ ದೋಸೆ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ನೀರ್ ದೋಸೆಗೆ ಮತ್ತೆ ಜೀವ

ಹಲವಾರು ವಿವಾದಗಳಿಂದ ನವೆಂಬರ್ ೨೦೧೨ಕ್ಕೆ ಸೆಟ್ಟೇರಿ, ನಿಂತುಹೋಗಿದ್ದ ನೀರ್ ದೋಸೆಗೆ ಈಗ ಮತ್ತೆ ಜೀವ ಬಂದಿದೆ.

ಬೆಂಗಳೂರು: ಹಲವಾರು ವಿವಾದಗಳಿಂದ ನವೆಂಬರ್ ೨೦೧೨ಕ್ಕೆ ಸೆಟ್ಟೇರಿ, ನಿಂತುಹೋಗಿದ್ದ ನೀರ್ ದೋಸೆಗೆ ಈಗ ಮತ್ತೆ ಜೀವ ಬಂದಿದೆ. ಇನ್ನೇನು ನೆಗೆಗುದಿಗೆ ಬಿದ್ದಿತು ಎಂದೇ ನಂಬಿದ್ದ ಈ ಸಿನೆಮಾ ಈಗ ನಟಿ ಮತ್ತು ನಿರ್ಮಾಪಕರ ಬದಲಾವಣೆಯೊಂದಿಗೆ ಪ್ರೇಕ್ಷಕರನ್ನು ತಣಿಸಲು ಶೀಘ್ರದಲ್ಲೆ ಬರಲಿದೆ. ಆಶು ಬೆದ್ರ ಈಗ ಚಿತ್ರದ ಹೊಸ ನಿರ್ಮಾಪಕರು.

ಸಿದ್ಲಿಂಗು ಚಲನಚಿತ್ರದ ಭರ್ಜರಿ ಯಶಸ್ಸಿನ ನಂತರ ಬಹುತೇಕ ಅದೇ ಚಿತ್ರ ತಂಡದೊಂದಿಗೆ ನೀರ್ ದೋಸೆ ಸಿನೆಮಾವನ್ನು ನಿದೇಶಕ ವಿಜಯ್ ಪ್ರಸಾದ್ ಘೋಷಿಸಿದ್ದರು. ಸಿನೆಮಾದ ಅರ್ಧದೊಷ್ಟು ಚಿತ್ರೀಕರಣ ಮುಗಿದ ಮೇಲೆ ನಟಿ ರಮ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದರಿಂದ ಚಲನಚಿತ್ರದಿಂದ ಹೊರಹೋಗಲು ಬಯಸಿದ್ದರು. ಇದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮತ್ತು ರಮ್ಯ ನಡುವೆ ದೊಡ್ಡ ಜಗಳಕ್ಕೂ ಕಾರಣವಾಗಿತ್ತು.

ಈಗ ನಟಿ ಮತ್ತು ನಿರ್ಮಾಪಕರು ಬದಲಾಗಿದ್ದಾರೆ ಎನ್ನುತ್ತವೆ ಮೂಲಗಳು. ಇದೇ ಸಮಯದಲ್ಲಿ ರಮ್ಯ ಕೂಡ ಲಂಡನ್ ನಿಂದ ಹಿಂದಿರುಗುತ್ತಿದ್ದಾರೆ ಎಂಬ ವರದಿಗಳು ಕೂಡ ಇವೆ. "ನಾವು ಚಿತ್ರೀಕರಣದ ಪ್ರಗತಿಯನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಹಾಗು ನೂತನ ನಟಿಯನ್ನು ಕೂಡ" ಎಂದಿದ್ದಾರೆ ನಿರ್ಮಾಪಕ ಆಶು.

ರಮ್ಯ ಮತ್ತು ಜಗ್ಗೇಶ್ ಅವರನ್ನು ಹೊರತುಪಡಿಸಿ, ಸುಮನ್ ರಂಗನಾಥ್ ಮತ್ತು ದತ್ತಾತ್ರೇಯ ಚಿತ್ರದ ಮುಖ್ಯ ತಾರಾಗಣದಲ್ಲಿದ್ದವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ