ತೇಜಸ್ 
ಸಿನಿಮಾ ಸುದ್ದಿ

ಕನ್ನಡಕ್ಕೆ ಮರಳಿದ ತೇಜ್ `ಡ್ಯೂಡ್'

ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್...

ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್ ಇದೀಗ ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ.

ಪ್ರವೀಣ್ ನಾಯಕ್ ನಿರ್ದೇಶಿಸಿದ್ದ `ಮೀಸೆ ಚಿಗುರಿದಾಗ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯುವಕ. ಈ ಚಿತ್ರದಲ್ಲಿ ನಟಿಸಿದ ನಂತರ ಓದು ಮುಂದುವರೆಸಿದ ತೇಜಸ್ ನಂತರ ಪ್ರತಿಷ್ಟಿತ ಇನ್‍ಫೋಸಿಸ್ ಸಂಸ್ಥೆಯಲ್ಲಿ ನೌಕರಿಗೂ ಸೇರಿದ್ದರು.

ಆದರೂ ನಟನೆಯ ಗೀಳು ತೇಜಸ್‍ಗೆ ಬಿಟ್ಟುಹೋಗಿರಲಿಲ್ಲ. ಆ ಸಂದರ್ಭದಲ್ಲೇ ತಮಿಳು ಚಿತ್ರರಂಗದಲ್ಲಿ ತೇಜಸ್‍ಗೆ ಅವಕಾಶಗಳ ಬಾಗಿಲು ತೆರೆಯಲು ಆರಂಭಿಸಿದವು. `ಕಾದಲನ್’ ಎಂಬ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ಮಿಸಿದ್ದ ಕೆ.ಟಿ. ಕುಂಜುಮನ್‍ರ ನಿರ್ಮಾಣದಲ್ಲಿ ನಟಿಸುವ ಛಾನ್ಸು ತೇಜಸ್ ಪಾಲಾಗಿತ್ತು. ಅದರ ಪ್ರತಿಳಲವೆಂಬಂತೆ  ಕಾದಲುಕ್ಕುಂ ಮರಣಮಿಲ್ಲೈ, ಕೊಂಜಂ ವೆಗಿಲ್ ಕೊಂಜಮ್ ಮಳೈ, ಗಾಂತಂ ಹೀಗೆ ಒಂದರ ಹಿಂದೆ ಒಂದರಂತೆ ಮೂರು ಚಿತ್ರಗಳಲ್ಲಿ ತೇಜಸ್ ನಟಿಸಿದರು. ಈ ಚಿತ್ರಗಳು ತೇಜಸ್ ತಮಿಳು ಚಿತ್ರರಂಗದಲ್ಲಿ ಅಪಾರವಾದ ಹೆಸರನ್ನೂ ತಂದುಕೊಟ್ಟಿದೆ.

ಸದ್ಯ ತೇಜಸ್ ತಮ್ಮ ಹೆಸರನ್ನು ಕೊಂಚ ಮೊಟಕುಗೊಳಿಸಿಕೊಂಡು ತೇಜ್ ಎಂಬ ಹೆಸರಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. `ಮೊಳಿವದ್ ಯದನಾಲ್’ ಎಂಬ ತಮಿಳುಚಿತ್ರ ಸಂಪೂರ್ಣ ಸಿದ್ದಗೊಂಡು ಮುಂದಿನ ತಿಂಗಳಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಇದರ ಜೊತೆಗೆ `ವಿನ್ನೈ ತೊಡು’ ಎಂಬ ಚಿತ್ರ ಕೂಡಾ ನಿರ್ಮಾಣ ಹಂತದಲ್ಲಿದೆ.

ಈಗ ಮತ್ತೊಂದು ವಿಶೇಷವೆಂದರೆ, ತೇಜ್ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಅದು `ಡ್ಯೂಡ್’ ಚಿತ್ರದ ಮೂಲಕ. ಕನ್ನಡದವರೇ ಆಗಿದ್ದು ತಮಿಳಿನ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿರುವ ಅಜಿತ್ ಮಿಲನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮದೇ ಜ್ಯುವೆಲ್ಲರಿ ವ್ಯವಹಾರ ಮತ್ತು ಈ ಕಾಮರ್ಸ್ ಬ್ಯುಸಿನೆಸ್‍ಗಳನ್ನು ಹೊಂದಿರುವ ರೋಹಿತ್ ಜೈನ್ ಮತ್ತು ದಿಲೀಪ್ ಜೈನ್ ಒಟ್ಟಾಗಿ ಸೇರಿ ಸಂಕೇಶ್ವರ ಫಿಲಂಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಯಾರೇ ಕೂಗಾಡಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಸುಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇನ್ನು ಶೌರ್ಯ ಮತ್ತು ಡವ್ ಚಿತ್ರಗಳಲ್ಲಿ ನಟಿಸಿರುವ ಮದಲ್ಸಾ ಶರ್ಮಾ ಮತ್ತು ಲಂಡನ್‍ನ ಮಾಡೆಲ್ ಒಬ್ಬರು ಈ ಚಿತ್ರದ ನಾಯಕಿಯರಾಗಿದ್ದಾರೆ. ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದಿಂದ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಕನ್ನಡದ ಪ್ರತಿಭೆಯೊಂದು ರೀ ಎಂಟ್ರಿ ಪಡೆದಿರೋದಂತೂ ಸಂತಸದ ವಿಚಾರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

IPL 2026: B***s Of Steel" ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

SCROLL FOR NEXT