ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಚಿತ್ರಕ್ಕೆ ಯೋಗಿ ನಿರ್ದೇಶನ

ವಸ್ತ್ರ ವಿನ್ಯಾಸಕ, ಪ್ರೀತಮ್ ಗುಬ್ಬಿ ಮತ್ತು ಹರ್ಷ ಇವರುಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಹಾಗೂ ತಮ್ಮ ಚೊಚ್ಚಲ ಚಲನಚಿತ್ರ,

ಬೆಂಗಳೂರು: ವಸ್ತ್ರ ವಿನ್ಯಾಸಕ, ಪ್ರೀತಮ್ ಗುಬ್ಬಿ ಮತ್ತು ಹರ್ಷ ಇವರುಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಹಾಗೂ ತಮ್ಮ ಚೊಚ್ಚಲ ಚಲನಚಿತ್ರ, ಗಣೇಶ್ ಮತ್ತು ಅಮೂಲ್ಯ ನಟನೆಯ 'ಖುಷಿ ಖುಷಿಯಾಗಿ' ಸಿನೆಮಾದ ಗೆಲುವಿನ ನಂತರ ಯೋಗಿ ಜಿ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಮೊದಲ ಸಿನೆಮಾದ ಯಶಸ್ಸಿನ ನಂತರ ಯೋಗಿ ಈಗ ಶಿವರಾಜ್ ಕುಮಾರ್ ಅವರ ಸಿನೆಮಾ ಒಂದನ್ನು ನಿರ್ದೇಶಿಸಲಿದ್ದಾರೆ.

ಎಲ್ಲವೂ ಸರಿಹೋದರೆ ಶೀಘ್ರದಲ್ಲೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದಿರುವ ಯೋಗಿ "ಶಿವಣ್ಣನವರ ಜೊತೆ ಮಾತುಕತೆ ನಡೆದಿದೆ. ಚಿತ್ರಕಥೆ ಬಗ್ಗೆ ಚರ್ಚಿಸಲು ಅವರು ಕರೆದಿದ್ದರು. ಈ ಸಿನೆಮಾವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಲಿದ್ದಾರೆ. ಶೀರ್ಷಿಕೆ 'ಬಂಗಾರ-ಬಂಗಾರದ ಮನುಷ್ಯನ ಮಗ' ಎಂದು ನಿಶ್ಚಿತವಾಗಿದೆ" ಎಂದು ಹೆಚ್ಚೇನು ತಿಳಿಸಲಿಚ್ಚಿಸದ ಯೋಗಿ ಹೇಳಿದ್ದಾರೆ. "ಶಿವಣ್ಣ ಒಪ್ಪಿಕೊಂಡ ನಂತರ ಅಧಿಕೃತವಾಗಿ ಘೋಷಿಸಲಿದ್ದೇನೆ" ಎಂದಿದ್ದಾರೆ.

ವಜ್ರಕಾಯ ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ಶಿವರಾಜಕುಮಾರ್ 'ಶಿವಲಿಂಗ' ಸಿನೆಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಸದ್ಯಕ್ಕೆ 'ಸಂತೆಯಲ್ಲಿ ನಿಂತ ಕಬೀರ' ಚಲನಚಿತ್ರದಲ್ಲಿ ಕಾರ್ಯನಿರತರಾಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಬಹುಭಾಷ ಚಲನಚಿತ್ರ 'ಕಿಲ್ಲಿಂಗ್ ವಿರಪ್ಪನ್' ಗೆ ಸಹ ತಯ್ಯಾರಿ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT