ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಚಿತ್ರಕ್ಕೆ ಯೋಗಿ ನಿರ್ದೇಶನ

ವಸ್ತ್ರ ವಿನ್ಯಾಸಕ, ಪ್ರೀತಮ್ ಗುಬ್ಬಿ ಮತ್ತು ಹರ್ಷ ಇವರುಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಹಾಗೂ ತಮ್ಮ ಚೊಚ್ಚಲ ಚಲನಚಿತ್ರ,

ಬೆಂಗಳೂರು: ವಸ್ತ್ರ ವಿನ್ಯಾಸಕ, ಪ್ರೀತಮ್ ಗುಬ್ಬಿ ಮತ್ತು ಹರ್ಷ ಇವರುಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಹಾಗೂ ತಮ್ಮ ಚೊಚ್ಚಲ ಚಲನಚಿತ್ರ, ಗಣೇಶ್ ಮತ್ತು ಅಮೂಲ್ಯ ನಟನೆಯ 'ಖುಷಿ ಖುಷಿಯಾಗಿ' ಸಿನೆಮಾದ ಗೆಲುವಿನ ನಂತರ ಯೋಗಿ ಜಿ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಮೊದಲ ಸಿನೆಮಾದ ಯಶಸ್ಸಿನ ನಂತರ ಯೋಗಿ ಈಗ ಶಿವರಾಜ್ ಕುಮಾರ್ ಅವರ ಸಿನೆಮಾ ಒಂದನ್ನು ನಿರ್ದೇಶಿಸಲಿದ್ದಾರೆ.

ಎಲ್ಲವೂ ಸರಿಹೋದರೆ ಶೀಘ್ರದಲ್ಲೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದಿರುವ ಯೋಗಿ "ಶಿವಣ್ಣನವರ ಜೊತೆ ಮಾತುಕತೆ ನಡೆದಿದೆ. ಚಿತ್ರಕಥೆ ಬಗ್ಗೆ ಚರ್ಚಿಸಲು ಅವರು ಕರೆದಿದ್ದರು. ಈ ಸಿನೆಮಾವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಲಿದ್ದಾರೆ. ಶೀರ್ಷಿಕೆ 'ಬಂಗಾರ-ಬಂಗಾರದ ಮನುಷ್ಯನ ಮಗ' ಎಂದು ನಿಶ್ಚಿತವಾಗಿದೆ" ಎಂದು ಹೆಚ್ಚೇನು ತಿಳಿಸಲಿಚ್ಚಿಸದ ಯೋಗಿ ಹೇಳಿದ್ದಾರೆ. "ಶಿವಣ್ಣ ಒಪ್ಪಿಕೊಂಡ ನಂತರ ಅಧಿಕೃತವಾಗಿ ಘೋಷಿಸಲಿದ್ದೇನೆ" ಎಂದಿದ್ದಾರೆ.

ವಜ್ರಕಾಯ ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ಶಿವರಾಜಕುಮಾರ್ 'ಶಿವಲಿಂಗ' ಸಿನೆಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಸದ್ಯಕ್ಕೆ 'ಸಂತೆಯಲ್ಲಿ ನಿಂತ ಕಬೀರ' ಚಲನಚಿತ್ರದಲ್ಲಿ ಕಾರ್ಯನಿರತರಾಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಬಹುಭಾಷ ಚಲನಚಿತ್ರ 'ಕಿಲ್ಲಿಂಗ್ ವಿರಪ್ಪನ್' ಗೆ ಸಹ ತಯ್ಯಾರಿ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT