ರನ್ನ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

'ರನ್ನ'ನಿಗೆ ಕೊನೆಗೂ ಸೆನ್ಸಾರ್

ಕೊನೆಗೂ ರನ್ನ ಚಿತ್ರತಂಡಕ್ಕೆ ನಿಟ್ಟುಸಿರು ಬಿಡುವ ಸಂದರ್ಭ. ಹಲವಾರು ಅಡೆತಡೆಗಳು, ಹಣಕಾಸಿನ ತೊಂದರೆಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಿಚ್ಚ ಸುದೀಪ್

ಬೆಂಗಳೂರು: ಕೊನೆಗೂ ರನ್ನ ಚಿತ್ರತಂಡಕ್ಕೆ ನಿಟ್ಟುಸಿರು ಬಿಡುವ ಸಂದರ್ಭ. ಹಲವಾರು ಅಡೆತಡೆಗಳು, ಹಣಕಾಸಿನ ತೊಂದರೆಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಿಚ್ಚ ಸುದೀಪ್ ಅಭಿನಯದ ರನ್ನ ಚಲನಚಿತ್ರಕ್ಕೆ ಸೆನ್ಸಾರ್ ಮಂಡಲಿಯಿಂದ ಯು/ಎ ಪ್ರಮಾಣಪತ್ರ ದೊರಕಿದೆ. ನಿರ್ದೇಶಕ ನಂದ ಕಿಶೋರ್ ಮತ್ತು ಚಿತ್ರತಂಡ ಬಿಡುಗಡೆಗೆ ಎದುರುನೋಡುತ್ತಿದೆ.

ನಿರ್ದೇಶಕ ನಂದ ಕಿಶೋರ್ ಅವರು ಹೇಳುವಂತೆ ಇಡೀ ಚಿತ್ರತಂಡ ಮತ್ತು ಸುದೀಪ್ ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತು ಸಹಕರಿಸಿದರು ಎನ್ನುತ್ತಾರೆ. "ಎಲ್ಲ ತೊಂದರೆಗಳ ಹೊರತಾಗಿಯೂ, ಎಲ್ಲರೂ ಸಹಕಾರ ನೀಡಿದರು ಹಾಗೂ ನಿಷ್ಟಾವಂತರಾಗಿ ಕೆಲಸ ಮಾಡಿದರು. ಸುದೀಪ್ ನಮ್ಮ ಬೆನ್ನಿಗೆ ಕಲ್ಲಿನಂತೆ ನಿಂತಿದ್ದರು" ಎನ್ನುತ್ತಾರೆ.

'ರನ್ನ' ಸುತ್ತ ಇರುವ ಈ ಬಹು ನಿರೀಕ್ಷೆಯಿಂದ ಹಲವಾರು ನಿರ್ಮಾಪಕರು ತಮ್ಮ ಚಿತ್ರದ ದಿನಾಂಕವನ್ನು ಮೂಂದೂಡಿದ್ದಾರಂತೆ. ಇಂತಹ ಅತಿ ಹೆಚ್ಚಿನ ನಿರೀಕ್ಷೆ ಕೆಲವೊಮ್ಮೆ ಚಿತ್ರಕ್ಕೆ ಹಾನಿಯುಂಟುಮಾಡಬಲ್ಲದು ಎನ್ನುತ್ತಾರೆ ನಿರ್ದೇಶಕ. "ನಾನು ಚಿತ್ರರಸಿಕರಲ್ಲಿ ಸಿನೆಮಾ ಬಗ್ಗೆ ಅತಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳದಂತೆ ಮನವಿ ಮಾಡುತ್ತೇನೆ. ಕುಟುಂಬ ವೀಕ್ಷಣೆಗೆ ಮಾಡಿರುವ ಪ್ರಾಮಾಣಿಕ ಚಿತ್ರ ರನ್ನ. ಸಿನೆಮಾದಲ್ಲಿರುವ ಒಳ್ಳೆಯ ಅಂಶಗಳನ್ನು ಜನ ಸ್ವೀಕರಿಸಬೇಕು. ಸಿನೆಮಾ ಬಗೆಗಿನ ಧನಾತ್ಮಕ ಅಭಿಪ್ರಾಯಗಳು ನನ್ನಂತಹ ನಿರ್ದೇಶಕರಿಗೆ ಉತ್ತೇಜನ ನೀಡುತ್ತದೆ" ಎಂದಿದ್ದಾರೆ ನಂದಕಿಶೋರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT