ನಟ ಶಿವರಾಜ ಕುಮಾರ್ 
ಸಿನಿಮಾ ಸುದ್ದಿ

ಮಹದೇಶ್ವರ ಬೆಟ್ಟಕ್ಕೆ ಹೊರಟ ರಾಮಗೋಪಾಲ ವರ್ಮ

ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗೆ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬೆವರು ಸುರಿಸುತ್ತಿದ್ದಾರೆ.

ಬೆಂಗಳೂರು: ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗೆ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬೆವರು ಸುರಿಸುತ್ತಿದ್ದಾರೆ. ಸಂಶೋಧನೆಗೆ ಹೆಸರುವಾಸಿಯಾದ ಕೆಲವೇ ನಿರ್ದೇಶಕರಲ್ಲೊಬ್ಬರಾದ ವರ್ಮಾ ಮಹತ್ತ್ವದ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಭರವಸೆಯಂತೂ ಇದೆ.

ಜೂನ್ ೯ ರಿಂದ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದಾರೆ ನಿರ್ದೇಶಕರು. ಕನ್ನಡ, ಹಿಂದಿ, ತಲಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನೆಮಾಗೆ ಅಂತಿಮ ಪಾತ್ರವರ್ಗದ ಶೋಧನೆಯಲ್ಲಿದ್ದಾರೆ ವರ್ಮ. ಈಗಾಗಲೇ ಚಿತ್ರೀಕರಣದ ಪ್ರದೇಶಗಳನ್ನು ಗುರುತಿಸಿದ್ದು, ಸಂಗಿತದ ಪರಿಕಲ್ಪನೆಯೂ ಮುಗಿದಿದೆ.

ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿರುವ ನಟ ಶಿವರಾಜ ಕುಮಾರ್ ತಂಡವನ್ನು ಜೂನ್ ೨೩ಕ್ಕೆ ಸೇರಿಕೊಳ್ಳಲಿದ್ದಾರೆ. "ರಾಷ್ಟ್ರೀಯ ನಾಟಕ ಶಾಲೆಯ ಹಲವು ವಿದ್ಯಾರ್ಥಿಗಳನ್ನು ನಟನೆಗೆ ವರ್ಮಾ ಆಯ್ಕೆ ಮಾಡಿದ್ದು, ಕನ್ನಡ ಚಲನಚಿತ್ರೋದ್ಯಮ ಕೆಲವೇ ನಟರು ಈ ಸಿನೆಮಾದಲ್ಲಿ ಜಾಗ ಪಡೆದಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ವೀರಪ್ಪನ್ ನ ವಾಸಸ್ಥಾನಗಳಲ್ಲಿ ಒಂದಾಗಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಮಾ ಚಿತ್ರೀಕರಣ ನಡೆಸಲಿದ್ದಾರೆ. ಸ್ಟಂಟ್ ಗಳ ನಿರ್ದೇಶನಕ್ಕೆ ಧೂಮ್-೩ ಸಿನೆಮಾದ ಸ್ಟಂಟ್ ಮಾಸ್ಟರ್ ಅವರನ್ನು ಕೆರೆತಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT