ಬೆಂಗಳೂರು: ಕಳಸ ಬಂಡೂರಿ ಯೋಜನೆಗೆ ಅಡ್ಡಿ ಹಾಗೂ ಗೋವಾದಲ್ಲಿರೋ ಕನ್ನಡಿಗರಿಗೆ ತೊಂದರೆ ಹಿನ್ನೆಲೆ ಗೋವಾ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಇಂದು ನಡೆದ ಕರ್ನಾಟಕ ಫಿಲಂ ಚೇಂಬರ್ ಸಭೆಯಲ್ಲಿ ನವೆಂಬರ್ 20 ರಿಂದ ನ. 30ರವರೆಗೆ ನಡೆಯಲಿರುವ ಗೋವಾ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ತಿರ್ಮಾನಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಅವರು ಹೇಳಿದ್ದಾರೆ.
ಚಿತ್ರೋತ್ಸವದಲ್ಲಿ ಕರ್ನಾಟಕ ಫಿಲಂ ಚೇಂಬರ್ ಭಾಗಿಯಾಗಲ್ಲ ಹಾಗೂ ಚೇಂಬರ್ ವತಿಯಿಂದ ಯಾರೂ ಸಹ ಪಾಲ್ಗೊಳ್ಳುವುದಿಲ್ಲ. ಗೋವಾದಲ್ಲಿರುವ ಕನ್ನಡಿಗರಿಗೆ ತೊಂದರೆ ಕೊಡಬಾರದು. ತೊಂದರೆ ಕೊಡಬಾರದು ಎಂಬ ಕಾರಣದಿಂದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗದೆ ಪ್ರತಿಭಟನೆ ನಡೆಸುವುದಾಗಿ ಎಂದು ಗೋವಿಂದು ಅವರು ತಿಳಿಸಿದ್ದಾರೆ.