ತಮಿಳು ನಿರ್ದೇಶಕ ಬಾಲಾ 
ಸಿನಿಮಾ ಸುದ್ದಿ

ಬಾಲ ದೊಡ್ಡ ಸಿನಿಮಾ

`ಪಿತಾಮಗನ್', `ಅವನ್- ಇವನ್' ಮುಂತಾದ ಪ್ರಯೋಗಾತ್ಮಕ ಸಕ್ಸಸ್ ಸಿನಿಮಾಗಳನ್ನು ಕೊಟ್ಟ ಬಾಲ, ರಿಸ್ಕ್ ತೆಗೆದುಕೊಳ್ಳುವುದರಲ್ಲಿ...

ಪಿತಾಮಗನ್', `ಅವನ್- ಇವನ್' ಮುಂತಾದ ಪ್ರಯೋಗಾತ್ಮಕ ಸಕ್ಸಸ್ ಸಿನಿಮಾಗಳನ್ನು ಕೊಟ್ಟ ಬಾಲ, ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ. ಈ ಕಾರಣಕ್ಕೆ `ನಾನ್ ಕಡವುಳ್', `ಮೆಲ್ಲ ಕನ್ನೋಡು' ಚಿತ್ರಗಳ ಹೀರೋಗಳು ತೀರಾ ವಿಲಕ್ಷಣವಾಗಿ ಕಾಣುತ್ತಾರೆ. 

ಸೋಲು- ಗೆಲುವಿಗೆ ತಲೆ  ಕಡೆಸಿಕೊಳ್ಳದ ಈ ನಿರ್ದೇಶಕ, ಈಗ ಮತ್ತೊಂದು ಬಿಗ್ ಬಜೆಟ್  ಮತ್ತು ಬಿಗ್ ಮಲ್ಟಿಸ್ಟಾರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗವೇ  ಅಚ್ಚರಿಯಿಂದ ನೋಡುವಂಥ ಚಿತ್ರವನ್ನು ಬಾಲ ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ತಮಿಳಿನಲ್ಲಿ ಈ ಸಿನಿಮಾ ಸೆಟ್ಟೇರಿದರೂ ತೆಲುಗು, ಹಿಂದಿಗೆ ಡಬ್ ಆಗುವುದರಲ್ಲಿ ಎರಡು ಮಾತಿಲ್ಲ. 

ಅಂದ ಹಾಗೆ ಬಾಲ ನಿರ್ದೇಶಿಸಲು ಹೊರಟಿರುವ ಈ ಚಿತ್ರದ ನಾಯಕರು ಯಾರು? ಅರವಿಂದ್  ವಾಮಿ, ವಿಶಾಲ್, ರಾಣಾ ದೊಗ್ಗುಬಾಟಿ, ಅರ್ಯ, ಅಥರ್ವ ಹೀಗೆ ಐದು ಮಂದಿ ಹೀರೋಗಳು  ಬಾಲ ಚಿತ್ರಕ್ಕೆ ಮುಖ್ಯ ಪಿಲ್ಲರ್‍ಗಳಾಗುತ್ತಿದ್ದಾರೆ. ಈ ಕಾರಣಕ್ಕೆ ಬಾಲ ದೊಡ್ಡ ಸಿನಿಮಾ ಎನ್ನುವ ಮಾತುಗಳು ಆಗಲೇ ಟಾಲಿವುಡ್, ಕಾಲಿವುಡ್‍ನಲ್ಲಿ ಕೇಳಿ ಬರುತ್ತಿದೆ. ವಿಶೇಷ ಅಂದರೆ ಈ ಐದು  ಮಂದಿ ಸ್ಟಾರ್‍ಗಳಿಗೆ ಅನುಷ್ಕಾ ಶೆಟ್ಟಿ ಒಬ್ಬಳೆ ನಾಯಕಿ. ಚಿತ್ರದ ಹೆಸರು, `ತಾರೈ ತಪ್ಪಟ್ಟೈ'. ಬಾ ವರ್ಷಗಳ ನಂತರ `ರೋಜಾ' ಹಾಗೂ `ಬಾಂಬೆ' ಚಿತ್ರಗಳ ಅರವಿಂದ್ ಸ್ವಾಮಿ ಅವರನ್ನು  ಚಿತ್ರ ಕರೆತರುತ್ತಿದ್ದು, ಕನ್ನಡದ `ಬಂಗಾರದ ಮನುಷ್ಯ'ನ ಸೂತ್ರಧಾರ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವ ಕೂಡ ಮತ್ತೆ ಬಾಲ ಕ್ಯಾಂಪಿನಲ್ಲಿ  ಕಾಣಿಸಿಕೊಂಡಿರುವುದು ವಿಶೇಷ. ಈ ಹಿಂದೆ ಇವರದ್ದೇ ನಿರ್ದೇಶನದ `ಪರದೇಶಿ' ಚಿತ್ರದಲ್ಲಿ  ಅಥರ್ವ ನಾಯಕನಾಗಿ ಅಭಿನಯಿಸಿದ್ದರು.

ನೆಲದ ಸಂಸ್ಕೃತಿ, ಸಿನಿಮಾ ಬ್ಯುಟಿಯನ್ನು ತಮ್ಮ  ಕಥೆಗಳಲ್ಲಿ ಹುಡುಕುವ ಬಾಲ, ತಮ್ಮ ಈ ಬಹುಕೋಟಿ ಹಾಗೂ ಬಹುತಾರಾಗಣದ ಚಿತ್ರವನ್ನು  ಜನವರಿಗೆ ಶುರು ಮಾಡಲಿದ್ದು, ಮುಂದಿನ ಸಂಕ್ರಾಂತಿಗೆ ತೆರೆಗೆ ತರುವ ಸಾಹಸ ಮಾಡಲಿದ್ದಾರೆ.   

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT