ಕೇರಾಫ್ ಪುಟ್‍ಪಾತ್-2 
ಸಿನಿಮಾ ಸುದ್ದಿ

ಕೆರಾಫ್ ಫುಟ್ ಪಾತ್-2 ಮತ್ತೊಂದು ದಾಖಲೆ: ಮೂರು ಭಾಷೆ, 500 ಥಿಯೇಟರ್ ಗಳಲ್ಲಿ ಬಿಡುಗಡೆ

ಮಾ. ಕಿಶನ್ ನಿರ್ದೇಶಿಸಿ, ಅಭಿನಯಿಸಿರುವ 'ಕೇರಾಫ್ ಪುಟ್‍ಪಾತ್-2' ಚಿತ್ರ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದೇ ತಿಂಗಳು 4 ರಂದು ತೆರೆ ಕಾಣುತ್ತಿದೆ. ಆದರೆ ಮಾಮೂಲಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ.

ಮಾ. ಕಿಶನ್ ನಿರ್ದೇಶಿಸಿ, ಅಭಿನಯಿಸಿರುವ 'ಕೇರಾಫ್ ಪುಟ್‍ಪಾತ್-2' ಚಿತ್ರ  ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದೇ ತಿಂಗಳು 4 ರಂದು ತೆರೆ ಕಾಣುತ್ತಿದೆ. ಆದರೆ ಮಾಮೂಲಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ.
ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ಕೇರಾಫ್ ಫುಟ್ ಪಾತ್-2 ಚಿತ್ರ ದರ್ಶನವಾಗುತ್ತಿದೆ. ಈಗಾಗಲೇ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಸು ಗೆದ್ದಿರುವ ಈ ಸಿನಿಮಾ, ಹಾಲಿವುಡ್ ಸಿನಿಮಾ ಪಂಡಿತರ ಮುಂದೆಯೂ ಪ್ರದರ್ಶನಗೊಂಡು ಮುಕ್ತ ಪ್ರಶಂಸೆಗೆ ಕಾರಣವಾಗಿದೆ. ಹೀಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಅಷ್ಟೇ ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎಂಬುದು ಮಾ.ಕಿಶನ್‍ರ ಪ್ಲಾನ್. ಕನ್ನಡ, ತೆಲುಗು, ಹಿಂದಿ ಈ ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರವನ್ನು ದೇಶ- ವಿದೇಶಗಳ ಚಿತ್ರಮಂದಿರಗಳು ಸೇರಿದಂತೆ ಒಟ್ಟು 500 ಥಿಯೇಟರ್‍ ಗಳಲ್ಲಿ ಬಿಡುಗಡೆ ಮಾಡುವ ಮೂಲಕ ದಾಖಲೆ ಬರೆಯುತ್ತಿದ್ದಾರೆ.
ಬಿಗ್ ಸ್ಟಾರ್ ಸಿನಿಮಾಗಳೇ ನೂರು, ಇನ್ನೂರು ಚಿತ್ರಮಂದಿರಗಳಲ್ಲಿ ತೆರೆ ಕಾಣುವುದೇ ದೊಡ್ಡ ಸಾಹಸ ಆಗಿರುವ ದಿನಗಳಲ್ಲಿ ಕೇರಾಫ್ ಫುಟ್ ಪಾತ್-2 ಸಿನಿಮಾ ಐನೂರು ಕೇಂದ್ರಗಳಲ್ಲಿ ಬಿಡುಗಡೆಯಾಗುವ ಮೂಲಕ ಸಿನಿ ಮೈದಾನದಲ್ಲಿ ಹೊಸ ಓಟಕ್ಕೆ ಸಜ್ಜಾಗಿದೆ. ಮೂರು ಭಾಷೆಗಳಲ್ಲಿ ಬರುತ್ತಿರುವುದರಿಂದ ಪ್ರತಿ ಭಾಷೆಗೂ 50 ಚಿತ್ರಮಂದಿರಗಳಂತೆ 150 ಚಿತ್ರಮಂದಿರಗಳನ್ನು ಜಾಲಿ ಹಿಟ್ಸ್ ಸಂಸ್ಥೆ ಬುಕ್ ಮಾಡಿದೆ. ಇನ್ನು ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದೇವರಾಜ್ ಪಾಂಡೆ ಎಂಬುವವರು ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಮಂದಿರದ ಮಾಲೀಕರೂ ಆಗಿರುವ ದೇವರಾಜ್ ಪಾಂಡೆ, ರಾಜ್ಯದಲ್ಲೇ 120  ಚಿತ್ರಮಂದಿರಗಳಲ್ಲಿ `ಕೇರಾಫ್ ಪುಟ್‍ಪಾತ್-2' ಚಿತ್ರಕ್ಕೆ ಬಿಡುಗಡೆ ಭಾಗ್ಯ ಕಲ್ಪಿಸುತ್ತಿದ್ದಾರೆ. ಉಳಿದಂತೆ ಬಾಂಬೆ, ಪೂನಾ, ಆಂಧ್ರಸೇರಿದಂತೆ ತೆಲುಗು ಮತ್ತು ಹಿಂದಿ ಮಾತನಾಡುವ ಪ್ರಾಂತ್ಯಗಳಲ್ಲಿ 230 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!