ಸಿನಿಮಾ ಸುದ್ದಿ

ಕೆಂಡಸಂಪಿಗೆ ಶೋಗಳ ನಡುವೆ ಬರಲಿದೆ 'ದೊಡ್ಮನೆ ಹುಡುಗ' ಟ್ರೇಲರ್

Guruprasad Narayana

ಬೆಂಗಳೂರು: ನಿರ್ದೇಶಕ ಸೂರಿ ಅವರ ಪ್ರಯೋಗ 'ಕೆಂಡಸಪಿಗೆ' ಯಶಸ್ವಿಯಾಗುತ್ತಿರುವ ಈ ಸಮಯದಲ್ಲಿ, ಅವರೇ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ' ಸಿನೆಮಾದ ಟ್ರೇಲರ್ ಅನ್ನು ಕೆಂಡಸಂಪಿಗೆ ಪ್ರದರ್ಶನದ ವೇಳೆ ತೋರಿಸಲಿದ್ದಾರಂತೆ.

ಸದ್ಯಕ್ಕೆ ಟ್ರೇಲರ್ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದು "ಈಗ ಸದ್ಯಕ್ಕೆ ರೀ-ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರಲಿದ್ದು, ಕೆಂಡಸಂಪಿಗೆ ಯಶಸ್ವಿಯಾಗಿ ಓಡುತ್ತಿರುವ ಎಲ್ಲ ಥಿಯೇಟರ್ ಗಳಲ್ಲೂ ಟ್ರೇಲರ್ ಪ್ರದರ್ಶಿಸಲಿದ್ದೇವೆ" ಎನ್ನುತ್ತಾರೆ ಸೂರಿ.

ಹರಿಕೃಷ್ಣ ಸಂಗೀತದಲ್ಲಿ ಹಾಡುಗಳು ಮೂಡಿ ಬರುತ್ತಿದ್ದು, 'ಅಭಿಮಾನಿಗಳೆ ನಮ್ಮ ದೇವರು' ಎಂಬ ಒಂದು ಹಾಡನ್ನು ಯೋಗ ರಾಜ್ ಭಟ ಬರೆದಿದ್ದಾರೆ. ಪುನೀತ್ ಅವರೇ ಹಾಡಿರುವ ಈ ಹಾಡು ಚಿತ್ರಪ್ರೇಮಿಗಳ 'ರಾಷ್ಟ್ರಗೀತೆ'ಯಾಗಲಿದೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ.

ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ರಾಧಿಕಾ ಪಂಡಿತ್ ನಾಯಕ ನಟಿ ಹಾಗೂ ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಚಿಕ್ಕಣ್ಣ ಇತರ ನಟರು.

SCROLL FOR NEXT