ತ್ರಿಶಾ ಕೃಷ್ಣನ್ 
ಸಿನಿಮಾ ಸುದ್ದಿ

ತ್ರಿಶಾ ನೋಡಲು ಹಳ್ಳಿಯಲ್ಲೇ ಟ್ರಾಫಿಕ್ ಜಾಮ್!

ಬೇರೆ ನಟಿಯರ ಅಬ್ಬರದ ನಡುವೆ ತ್ರಿಶಾ ಕೃಷ್ಣನ್ ಕಾಣೆ ಆಗಿದ್ದಾಳೆಂದು ಸುದ್ದಿ ಹಬ್ಬಿತ್ತು. ಆದರೆ ಈಗ ಎಲ್ಲರೂ ಥ್ರಿಲ್ಲಾಗುವಂತೆ...

ಬೇರೆ ನಟಿಯರ ಅಬ್ಬರದ ನಡುವೆ ತ್ರಿಶಾ ಕೃಷ್ಣನ್ ಕಾಣೆ ಆಗಿದ್ದಾಳೆಂದು ಸುದ್ದಿ ಹಬ್ಬಿತ್ತು. ಆದರೆ ಈಗ ಎಲ್ಲರೂ ಥ್ರಿಲ್ಲಾಗುವಂತೆ ಸುದ್ದಿ ಆಗಿದ್ದಾಳೆ ತ್ರಿಶಾ.

ತ್ರಿಶಾ ಈಗ ತಮ್ಮ ಮುಂದಿನ 'ನಾಯಕಿ' ಸಿನಿಮಾಕ್ಕಾಗಿ ತೆಲಂಗಾಣ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಜಹೀರಾಬಾದ್ ಎಂಬ ಹಳ್ಳಿಯಲ್ಲಿದ್ದಾಳೆ.

ಕೇವಲ ತ್ರಿಶಾಳನ್ನು ನೋಡಲಿಕ್ಕಾಗಿಯೇ ಸುತ್ತಮುತ್ತಲಿನ ಹತ್ತಿಪ್ಪತ್ತು ಹಳ್ಳಿಗಳಿಂದ ಸಾವಿರಾರು ಜನ ಇಲ್ಲಿನ ಶೂಟಿಂಗ್ ಸೆಟ್‌ಗೆ ಬರುತ್ತಿದ್ದಾರಂತೆ. ನಾಲ್ಕು ದಿನದ ಶೂಟಿಂಗ್‌ಗೆ ಪ್ಲಾನ್ ಮಾಡಿಕೊಂಡು ಬಂದಿದ್ದರು ನಿರ್ದೇಶಕ ಗೋವಿ. ಆದರೆ, ಈ ಸಾವಿರಾರು ಜನರ ನಿತ್ಯ ಭೇಟಿಯಿಂದ ಶೂಟಿಂಗ್ ಅವಧಿಯನ್ನು ವಿಸ್ತರಿಸಬೇಕಾಗಿ ಬಂದಿದೆಯಂತೆ.

ಸ್ಥಳೀಯ ಪೊಲೀಸರು ಸೆಟ್‌ಗೆ ಹೋಗಿ, ರಕ್ಷಣೆಗೆ ನಿಂತಿದ್ದಾರಂತೆ. ಹಳ್ಳಿಯಲ್ಲೇ ಟ್ರಾಫಿಕ್ ಜಾಮ್ ಆದ ಪರಿಸ್ಥಿತಿ. ಈ ಚಿತ್ರದ ಚಿತ್ರೀಕರಣ ಶೇ.60 ಭಾಗ ಪೂರ್ಣಗೊಂಡಿದ್ದು, ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT