ಜೈದ್ ಖಾನ್ 
ಸಿನಿಮಾ ಸುದ್ದಿ

ಬಾಲಿವುಡ್ ಗೆ ಎಂಟ್ರಿ ಕೊಡಲು ಜಮೀರ್ ಅಹ್ಮದ್ ಪುತ್ರ ಕಸರತ್ತು!

ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಬಾಲಿವುಡ್‌ ಮೂಲಕ ಎಂಟ್ರಿ ಕೊಡುವ ಸಿದ್ದತೆಯಲ್ಲಿದ್ದಾರೆ...

ರಾಜ್ಯದ ಪ್ರಮುಖ ರಾಜಕೀಯ ನಾಯಕರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೊಸದಲ್ಲ. ಜೆಡಿಎಸ್‌ ನಾಯಕರಾದ  ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌, ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಸಿದ್ಧತೆ ನಡೆಸಿದ್ದಾರೆ. ಈಗ ಶಾಸಕ ಜಮೀರ್‌ಅಹಮದ್‌ ಖಾನ್‌ ಪುತ್ರನ ಸರದಿ.

ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್‌ ಅಹಮದ್‌ ಖಾನ್‌ ಪುತ್ರ ಜೈದ್‌ ಖಾನ್‌ ಬಾಲಿವುಡ್‌ ಮೂಲಕ ಎಂಟ್ರಿ ಕೊಡುವ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಸ್ಕ್ರೀನ್‌ ಟೆಸ್ಟ್‌ ಸಹ ಮುಗಿದಿದೆ. ರಾಂ ಗೋಪಾಲ್‌ವರ್ಮಾ ನಿರ್ದೇಶನದ ಚಿತ್ರದ ಮೂಲಕ ಪುತ್ರನನ್ನು ಬಾಲಿವುಡ್‌ ಪರಿಚಯಿಸಲು ಜಮೀರ್‌ ಅಹಮದ್‌ ಖಾನ್‌ ಮುಂದಾಗಿದ್ದಾರೆ.

ಪ್ರೀತಿ -ಪ್ರೇಮ, ಕೌಟುಂಬಿಕ ಸಂಬಂಧ, ಹಾಸ್ಯ ಕೇಂದ್ರೀಕೃತ ಕಥೆ ಹಿನ್ನೆಲೆಯ ಚಿತ್ರ ಮಾಡುವ ಬಗ್ಗೆ ಪ್ರಾರಂಭಿಕ ಚರ್ಚೆಗಳು ನಡೆದಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ವೇಳೆಗೆ ಜೈದ್‌ ಖಾನ್‌ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

ಗೋವಾದಲ್ಲಿ "ಬ್ರ್ಯಾಂಡ್ಸ್‌' ಆಕಾಡೆಮಿ ವತಿಯಿಂದ ನಡೆಸಿದ ಬಾಲಿವುಡ್‌ಗೆ ಹೊಸಮುಖಗಳ ಶೋಧ ಸ್ಪರ್ಧೆ ಹಾಗೂ "ಐಕಾನ್‌ ಅವಾರ್ಡ್ಸ್ ಆಫ್ ದ ಇಯರ್‌ ಕಾರ್ಯಕ್ರಮದಲ್ಲಿ ಜೈದ್‌ಖಾನ್‌ "ಫ್ರೆಶ್‌ ಫೇಸ್‌ ಆಫ್ ದ ಇಯರ್‌ 2015' ಪ್ರಶಸ್ತಿ  ತನ್ನದಾಗಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಹಿಂದಿ ಚಲನಚಿತ್ರರಂಗದ ನಿರ್ದೇಶಕ-ನಿರ್ಮಾಪಕರು ಜೈದ್‌ ಖಾನ್‌ಗೆ ಆಫ‌ರ್‌ ಸಹ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಜೈದ್‌ ಖಾನ್‌ ಸಿನಿಮಾ ಮತ್ತು ಫ್ಯಾಶನ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮುಂಬೈನಲ್ಲಿ ಫ್ಯಾಶನ್‌ ಶೋ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ.

ದಿನಕ್ಕೆ ನಾಲ್ಕು ಗಂಟೆ ಜಿಮ್‌ನಲ್ಲೂ ಜೈದ್ ಖಾನ್‌ ಬೆವರು ಸುರಿಸುತ್ತಿದ್ದಾರೆ. ಮನೆಯಲ್ಲಿಯೇ ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಾಹಸ ತರಬೇತಿಗಾಗಿ ಥಾಯ್ಲೆಂಡ್‌ಗೆ ಹೋಗಲಿದ್ದಾರಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT