ಸಿಲ್ವೆಸ್ಟರ್‌ ಸ್ಟಾಲೋನ್‌ 
ಸಿನಿಮಾ ಸುದ್ದಿ

ಹಾಲಿವುಡ್ ನಟ ಸಿಲ್ವೆಸ್ಟರ್‌ ಸ್ಟಾಲೋನ್‌ ಕುಟುಂಬಸ್ಥರಿಂದ ಹರಿದ್ವಾರದಲ್ಲಿ ಶ್ರಾದ್ಧ

ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದ ಹಾಲಿವುಡ್ ಆಕ್ಷನ್‌ ಚಿತ್ರಗಳ ಹೀರೋ ಸಿಲ್ವೆಸ್ಟರ್‌ ಸ್ಟಾಲೋನ್‌ ಅವರ ಪುತ್ರನಿಗೆ ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯಕ್ರಮ ...

ಮುಂಬಯಿ: ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದ ಹಾಲಿವುಡ್ ಆಕ್ಷನ್‌ ಚಿತ್ರಗಳ ಹೀರೋ ಸಿಲ್ವೆಸ್ಟರ್‌ ಸ್ಟಾಲೋನ್‌ ಅವರ ಪುತ್ರನಿಗೆ ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯಕ್ರಮ ನೆರವೇರಿಸಿದ್ದಾರೆ.

ಸಿಲ್ವೆಸ್ಟರ್‌ ಸ್ಟಾಲೋನ್‌ ಅವರ 36ರ ವರ್ಷದ ಮಗ ಸೇಜ್ ಪ್ರೇತಾತ್ಮಕ್ಕೆ ಚಿರ ಶಾಂತಿ ದೊರಕಿಸುವ ಸಲುವಾಗಿ ಇತ್ತೀಚೆಗೆ ಹಿಂದೂ ಧರ್ಮದ  ಆಚರಣೆಯ ಪ್ರಕಾರ ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯವನ್ನು ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ರನ ಶ್ರಾದ್ಧ ಕರ್ಮಗಳನ್ನು ವಿಧ್ಯುಕ್ತವಾಗಿ ನೆರವೇರಿಸುವುದಕ್ಕಾಗಿ ಸಿಲ್ವೆಸ್ಟರ ಸ್ಟಾಲೋನ್‌ ಅವರು ತನ್ನ ಸೋದರ ಸಂಬಂಧಿ ಮೈಕೆಲ್‌ ಹಾಗೂ ಆತನ ಪತ್ನಿಯನ್ನು ಹರಿದ್ವಾರದ ಕಂಖಾಲ್‌ ಎಂಬಲ್ಲಿಗೆ ಕಳುಹಿಸಿಕೊಟ್ಟಿದ್ದರು.

ಪ್ರತೀಕ್‌ ಮಿಶ್ರಾಪುರಿ ಎಂಬ ಜ್ಯೋತಿಷಿಯ ಸಲಹೆಯ ಮೇರೆಗೆ ಸಿಲ್ವೆಸ್ಟರ್‌ ಸ್ಟಾಲೋನ್‌ ಅವರು ತನ್ನ ಅಗಲಿದ ಪುತ್ರನ ಆತ್ಮಕ್ಕೆ ಚಿರಶಾಂತಿಯನ್ನು ದೊರಕಿಸಲು ಶ್ರಾದ್ಧ ಕಾರ್ಯಾದಿ ಪೂಜಾ ಕಾರ್ಯಕ್ರಮಗಳನ್ನು ಹರಿದ್ವಾರದಲ್ಲಿ ನಡೆಸಲು ನಿರ್ಧರಿಸಿದ್ದರು. ಮೂರು ವರ್ಷಗಳ ಹಿಂದೆ ಸ್ಟಾಲೋನ್‌ ಅವರ ಪುತ್ರ ಸೇಜ್‌, ಲಾಸ್‌ ಏಂಜಲಿಸ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮೃತಪಟ್ಟಿದ್ದು ಪತ್ತೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT