ಸುಮಂತ್ ಶೈಲೇಂದ್ರ 
ಸಿನಿಮಾ ಸುದ್ದಿ

'ಬೆತ್ತನಗೆರೆ'ಯಲ್ಲಿ ಭೂಗತ ದೊರೆಯಾಗಿ ಸುಮಂತ್

ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ

ಬೆಂಗಳೂರು: ಹಲವಾರು ಬಗೆತ ಪಾತ್ರಗಳಲ್ಲಿ ನಟಿಸಲು ಇಚ್ಛಿಸುವ ಸುಮಂತ್ ಶೈಲೇಂದ್ರ, ಬಿಜಿ ಮೋಹನ್ ಗೌಡ ನಿರ್ದೇಶನದ ಬೆತ್ತನೆಗೆರೆ ಸಿನೆಮಾದಲ್ಲಿ ಭೂಗತ ದೊರೆಯ ವೇಷ ಹಾಕಿದ್ದಾರೆ. ನಿಜ ಜೀವನದಲ್ಲಿ ರೌಡಿಗಳಾದ ಬೆತ್ತನಗೆರೆ ಸೀನ ಮತ್ತು ಶಂಕರ ಇವರ ಜೀವನಾಧಾರಿತ ಸಿನೆಮಾ ಇದು.

"ದಿಲ್ವಾಲೇ ಮತ್ತು ತಿರುಪತಿ ಎಕ್ಸ್ಪ್ರೆಸ್ಸ್ ಕಮರ್ಶಿಯಲ್ ಸಿನೆಮಾಗಳಲ್ಲಿ ಹಾಸ್ಯದ ಜೊತೆ ಪ್ರಯೋಗ ಮಾಡಿದೆ. ಬಿಡುಗಡೆಯಾಗಬೇಕಿರುವ 'ಭಲೇ ಜೋಡಿ' ರೋಮ್ಯಾಂಟಿಕ್ ಕಾಮಿಡಿ ಚಿತ್ರ. ಬೆತ್ತನೆಗೆರೆ ಆಕ್ಷನ್ ಚಿತ್ರ, ಇದು ಸ್ ಗೆ ಇಷ್ಟವಾಗುವಂತಹ ವಿಷಯ" ಎನುತ್ತಾರೆ ಸುಮಂತ್.

ಮತ್ತೊಬ್ಬ ನಾಯಕ ನಟ ಅಕ್ಷಯ್ ಅವರೊಂದಿಗೆ ಬೆತ್ತನಗೆರೆಯಲ್ಲಿ ನಟಿಸಿರುವ ಸುಮಂತ್ "ಬೆತ್ತನಗೆರೆ ಸಹೋದರರ ಜೀವನ ಬಹಳ ಆಸಕ್ತಿ ಮೂಡಿಸಿತು. ನಾನು ಹೆಚ್ಚಾಗಿ ಕ್ರೈಮ್ ಸುದ್ದಿ ಓದುವುದಿಲ್ಲ. ಈ ರೌಡಿ ಸಹೋದರರ ಸಂಬಧಿಗಳ ಬಗ್ಗೆ ನಿರ್ದೇಶಕ ತಿಳಿಸಿದಾಗ ನೆಲಮಂಗಲದಲ್ಲಿ  ನನಗೆ ಗೊತ್ತಿರುವ ಜನರ ಬಳಿ ಸೀನ ಮತ್ತು ಶಂಕರರ ಬಗ್ಗೆ ತಿಳಿದುಕೊಂಡೆ. ಈ ಸಂಗತಿಗಳೆಲ್ಲಾ ತಿಳಿದ ಮೇಲೆ ಈ ಪಾತ್ರದಲ್ಲಿ ನಟಿಸಲು ಆಸಕ್ತಿ ಹೆಚ್ಚಾಗುತ್ತಾ ಹೋಯಿತು" ಎನ್ನುತ್ತಾರೆ ನಟ.

ರೌಡಿಗಳ ಬೆಗ್ಗೆ ಸಿನೆಮಾ ಮಾಡುವುದ ಎಷ್ಟು ಮುಖ್ಯ ಎಂದು ಸುಮಂತ್ ಅವರನ್ನು ಪ್ರಶ್ನಿಸಿದರೆ "ಇಂದು ಜನ ಕೇವಲ ಮನರಂಜನೆಗಾಗಿ ಸಿನೆಮಾ ನೋಡುತ್ತಾರೆ, ಸಿನೆಮಾದಲ್ಲಿ ಸಂದೇಶ ಇದೆಯೇ, ಅದರಿಂದ ಏನಾದರೂ ಕಲಿಯಬಹುದೇ ಎಂಬುದು ಅವರಿಗೆ ಬೇಕಾಗಿಲ್ಲ. ತಮ್ಮ ಒತ್ತಡ ಜೀವನದಿಂದ ತಪ್ಪಿಸಿಕೊಳ್ಳಲು ಜನ ಸಿನೆಮಾ ನೋಡುತ್ತಾರೆ, ಪ್ರೀತಿ ಕೌಟುಂಬಿಕ ಭಾವನೆಗಳಿಗೂ ನೋಡುತ್ತಾರೆ, ಈ ಸಿನೆಮಾದಲ್ಲಿ ರೌಡಿ ಸಹೋದರರಿಗೆ ಏನಾಯಿತು ಎಂದು ಹೇಳಿದ್ದೇವೆ. ವಿನೋದ್ ಕಾಂಬ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದು, ಹಾಸ್ಯವೂ ಬಹಳಷ್ಟಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT