'ಲಕ್ಷ್ಮಣ' ಸಿನೆಮಾಗೆ ಖಾಕಿ ತೊಟ್ಟ ಕ್ರೇಜಿ ಸ್ಟಾರ್ 
ಸಿನಿಮಾ ಸುದ್ದಿ

ಮತ್ತೆ ಖಾಕಿ ತೊಟ್ಟ ಕ್ರೇಜಿ ಸ್ಟಾರ್

ಮತ್ತೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಪೊಲೀಸ್ ಧಿರಿಸು ಕೂಡ ತೊಡಲಿದ್ದಾರೆ. ಮುಂದಿನ ಸಿನೆಮಾ 'ಲಕ್ಷ್ಮಣ'ದಲ್ಲಿ ನಟ ಅಪ್ಪನಾಗಿ

ಬೆಂಗಳೂರು: ಮತ್ತೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಪೊಲೀಸ್ ಧಿರಿಸು ಕೂಡ ತೊಡಲಿದ್ದಾರೆ. ಮುಂದಿನ ಸಿನೆಮಾ 'ಲಕ್ಷ್ಮಣ'ದಲ್ಲಿ ನಟ ಅಪ್ಪನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಕ್ರೇಜಿಸ್ಟಾರ ಮೊದಲ ಬಾರಿಗೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು 'ಮಾಣಿಕ್ಯ' ಸಿನೆಮಾದಲ್ಲಿ, ಸುದೀಪ್ ಅವರ ಅಪ್ಪನಾಗಿ. ನಂತರ ಮಲಯಾಳಮ್ ರಿಮೇಕ್ ಸಿನೆಮಾ 'ದೃಷ್ಯ'ದಲ್ಲಿ ಜವಾಬ್ದಾರಿಯುತ ಅಪ್ಪನಾಗಿಯು ನಾಯಕನಟನಾಗಿಯೂ ಕಾಣಿಸಿಕೊಂಡಿದ್ದರು. 'ಲಕ್ಷ್ಮಣ'ನಿಗೆ ಸಹಿ ಮಾಡುವುದಕ್ಕೆ ಮುಂಚಿತವಾಗಿ ಗಣೇಶ್ ಅಭಿನಯದ 'ಮುಂಗಾರು ಮಳೆ-೨' ರಲ್ಲಿ ಕೂಡ ಅಪ್ಪನಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದರು.

ಕನ್ನಡದಲ್ಲಿ ದಂಡಿ ದಂಡಿಯಾಗಿ ರೋಮ್ಯಾನ್ಸ್ ಸಿನೆಮಾಗಳನ್ನು ನೀಡಿ, ರೊಮ್ಯಾಂಟಿಕ್ ಹೀರೋ ಎಂದೇ ಹೆಸರಾಗಿದ್ದ ನಟ ಈಗ ಸ್ಯಾಂಡಲ್ ವುಡ್ ನ ಅಪ್ಪನಾಗಿ ಭಡ್ತಿ ಹೊಂದಿದ್ದಾರೆ. ಈ ಹಿಂದೆ 'ಅಭಿಮನ್ಯು' ಮತ್ತು 'ಚಿನ್ನ' ಸಿನೆಮಾಗಳಲ್ಲೂ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದ ರವಿಚಂದ್ರನ್ ಈಗ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಹೀರೋ. ಇತ್ತೀಚೆಗಷ್ಟೆ ಟಿ ವಿ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು, ಈಗ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮದಲ್ಲಿ ಅದೇ ಕಾಯಕವನ್ನು ಮುಂದುವರೆಸಿದ್ದಾರೆ. ಜೊತೆಜೊತೆಗೆ 'ಲಕ್ಷ್ಮಣ'ನ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ. ಆರ್ ಚಂದ್ರು ನಿರ್ದೇಶನದ ಸಿನೆಮಾದಲ್ಲಿ ರಾಜಕಾರಿಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮೇಘನಾ ರಾಜ್ ನಾಯಕ ನಟಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT