ಬತಾಸ್ ಫಸ್ಟ್ ಲುಕ್ 
ಸಿನಿಮಾ ಸುದ್ದಿ

'ನನ್ನ ಹೀರೋನ ಜೀವನ ಸಾವನ್ನು ಅವಲಂಬಿಸಿದೆ'

'ಪ್ರೇಮಗಾಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರಿಗೆ ಆ ಚಿತ್ರ ಕೈ ಹಿಡಿಯಲಿಲ್ಲ. ಆರ್ಥಿಕ ತೊಂದರೆಯಿಂದ 'ಪ್ರೇಮಗಾಮಿ' ತೆರೆಗೆ ಬರಲೇ ಇಲ್ಲ....

'ಪ್ರೇಮಗಾಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರಿಗೆ ಆ ಚಿತ್ರ ಕೈ ಹಿಡಿಯಲಿಲ್ಲ. ಆರ್ಥಿಕ ತೊಂದರೆಯಿಂದ 'ಪ್ರೇಮಗಾಮಿ' ತೆರೆಗೆ ಬರಲೇ ಇಲ್ಲ. ಆದರೆ ತಮ್ಮ ಪ್ರಯತ್ನವನ್ನು ಮುಂದುವರೆಸಿರುವ ಶ್ರೀನಿವಾಸ್ ಅವರು, ಇದೀಗ ಮತ್ತೊಂದು ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲ ಗಾಂಧಿನಗರದಲ್ಲಿ ನೆಲೆ ಕಂಡುಕೊಳ್ಳುವ ಯತ್ನ ನಡೆಸಿದ್ದಾರೆ.

ಶ್ರೀನಿವಾಸ್ ಅವರ ನೂತನ ಚಿತ್ರದ ಹೆಸರು 'ಬತಾಸ್'. ಈ ಚಿತ್ರದಲ್ಲಿ ಚೇತನ್ ಗಂದರ್ವ ಹಾಗೂ ಪವಿತ್ರಾ ಗೌಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ರವಿ ಕಾಳೆ ಕಳನಾಯಕನಾಗಿದ್ದಾರೆ. ಇನ್ನು ಪ್ರಮುಖ ಪಾತ್ರವೊಂದಕ್ಕಾಗಿ ಚಿತ್ರ ತಂಡ ಮಹೇಶ್ ಮಂಜ್ರೆಕರ್ ಅವರನ್ನು ಸಂಪರ್ಕಿಸಿದೆ.

‘ಇದು ಸಾವಿನ ಮನೆಗಳಲ್ಲಿ ಬ್ಯಾಂಡ್‌ ನುಡಿಸುವ ಒಬ್ಬ ಸಿಂಗರ್‌ನ ಕಥೆ. ನನ್ನ ಸಿನಿಮಾದ ನಾಯಕ ಹಾಡುಗಾರ. ಸ್ಲಂನಲ್ಲಿ ಒಬ್ಬ ಡಾನ್. ಆತ ಪ್ರೀತಿಸಿ ಮದುವೆಯಾಗಿರುತ್ತಾನೆ. ಡಾನ್‌ನ ಹೆಂಡತಿ ಸಾಯುತ್ತಾಳೆ. ಅಲ್ಲಿಗೆ ಹಾಡಲು ಬರುವ ನಾಯಕ, ಆತನ ಮಗಳನ್ನು ಪ್ರೀತಿಸುತ್ತಾನೆ. ಸಾವಿನ ಮನೆಯಲ್ಲಿ ಹುಟ್ಟಿದ ಪ್ರೀತಿ ಈ ಪ್ರೇಮಿಗಳನ್ನು ಸಾವಿನ ಮನೆಗೆ ಕರೆದುಕೊಂಡು ಹೋಗುತ್ತದೆಯೋ ಇಲ್ಲವೇ ಎನ್ನುವುದು ಕಥೆಯ ತಿರುಳು’ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ಇತರೆ ಗ್ರಾಮೀಣ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT