ನಟ ದರ್ಶನ್ 
ಸಿನಿಮಾ ಸುದ್ದಿ

ಐರಾವತ ಬಿಡುಗಡೆಗೆ ಸಜ್ಜು; ದೋಷಮುಕ್ತನಾದ ಅರ್ಜುನ್; ಮೊದಲ ಟಿಕೆಟ್ ಬೆಲೆ ೧ ಲಕ್ಷ!

ವಿವಾದಗಳನ್ನೆಲ್ಲಾ ಬದಿಗಿಟ್ಟು ಐರಾವತ ಸಿನೆಮಾದ ನಿರ್ಮಾಪಕ ಎನ್ ಸಂದೇಶ್ ಅವರು, ನಿರ್ದೇಶಕ ಎ ಪಿ ಅರ್ಜುನ್ ಅವರನ್ನು ಈ ಯೋಜನೆಗೆ ಸೂಚಿಸಿದವರು ನಟ ದರ್ಶನ್

ಬೆಂಗಳೂರು: ವಿವಾದಗಳನ್ನೆಲ್ಲಾ ಬದಿಗಿಟ್ಟು ಐರಾವತ ಸಿನೆಮಾದ ನಿರ್ಮಾಪಕ ಎನ್ ಸಂದೇಶ್ ಅವರು, ನಿರ್ದೇಶಕ ಎ ಪಿ ಅರ್ಜುನ್ ಅವರನ್ನು ಈ ಯೋಜನೆಗೆ ಸೂಚಿಸಿದವರು ನಟ ದರ್ಶನ್ ಎಂದು ಹೇಳುವ ಮೂಲಕ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ಸೆನ್ಸಾರ್ ಮಂಡಲಿ ಸಿನೆಮಾಗೆ ಯು/ಎ ಪ್ರಮಾಣಪತ್ರ ನೀಡಿದ್ದು, ಅಕ್ಟೋಬರ್ ೧ ಕ್ಕೆ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಯೋಗಿ, ಧ್ರುವ್, ಧನಂಜಯ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕನಿಗೆ ಕನ್ನಡ ಚಿತ್ರೋದ್ಯಮದ ಅತಿ ಬೇಡಿಕೆಯ ನಟನೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಅರ್ಜುನ್ ಅವರು ಹೇಳುವಂತೆ ದರ್ಶನ್ ಎಂದಿಗೂ ಅತಿ ದೊಡ್ಡ ನಟನಂತೆ ವರ್ತಿಸಲಿಲ್ಲವಂತೆ. "ನಾನು ಅವರೊಂದಿಗೆ ಎಲ್ಲರಂತೆ ಇರುವ ಹಾಗೆ ಆರಾಮವಾಗಿ ಮಾತನಾಡಿಕೊಂಡಿದ್ದೆ. ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ" ಎನ್ನುತ್ತಾರೆ.

ಆದರೆ ಬೃಹತ್ ತಾರಾಗಣದ ಜೊತೆ ಕೆಲಸ ಮಾಡುವುದು ಸುಲಭವಲ್ಲ ಎನ್ನುವ ಅವರು "ನನ್ನ ಕೊನೆಯ ಮೂರು ಸಿನೆಮಾಗಳು ಪ್ರೇಮ ಕಥೆಗಳು. ಮೊದಲ ಬಾರಿಗೆ ಸಂಪೂರ್ಣ ವಾಣಿಜ್ಯಾತ್ಮಕ ಸಿನೆಮಾಗೆ ಕೈ ಹಾಕಿದ್ದು. ಆದುದರಿಂದ ಆಗಲೇ ಸ್ಥಾಪಿತ ನಟರಾದ ದರ್ಶನ್, ಪ್ರಕಾಶ್ ರಾಜ್,. ಅನಂತ ನಾಗ್, ಸಿತಾರ, ಅಶೋಕ್ ಇಂತವರೊಂದಿಗೆ ಕೆಲಸ ಮಾಡುವಾಗ ಸ್ವಲ್ಪ ಭಯವಾಗಿತ್ತು" ಎನ್ನುತ್ತಾರೆ.

ಐರಾವತ ಕರ್ನಾಟಕದಾದ್ಯಂತ ಏಕಕಾಲಕ್ಕೆ ೩೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಲಹರಿ ಆಡಿಯೋ ಕಂಪನಿ ಸಿನೆಮಾದ ವಿದೇಶಿ ವಿತರಣೆಯ ಹಕ್ಕನ್ನು ಹೊತ್ತಿದೆಯಂತೆ, ಸದ್ಯಕ್ಕೆ ೩೧ ತೆರೆಗಳು ಧೃಢೀಕರಿಸಿದ್ದು ಇದು ೫೬ ಕ್ಕೆ ಏರಲಿದೆಯಂತೆ.

ಮೊದಲ ಟಿಕೆಟ್ ೧ ಲಕ್ಷಕ್ಕೆ ಬಿಕರಿ!

ಐರಾವತ ಸಿನೆಮಾದ ಮೊದಲ ಟಿಕೆಟ್ ಒಂದು ಲಕ್ಷ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಇದನ್ನು ಕೊಂಡಿರುವವರು ದರ್ಶನ್ ಅವರ ದೀರ್ಘ ಕಾಲದ ಗೆಳೆಯ ಸೃಜನ್ ಲೋಕೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT